'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕ ನಾಳೆ ಪ್ರದರ್ಶನ
ಸೈಡ್ ವಿಂಗ್ ಬೆಂಗ್ಳೂರು ರಂಗ ತಂಡವು ತನ್ನ ಯಶಸ್ವಿ ನಾಟಕಗಳಲ್ಲಿ ಒಂದಾದ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕವನ್ನು ಬಹಳ ದಿನಗಳ ನಂತರ ಪ್ರದರ್ಶಿಸುತ್ತಿದೆ. ನಾಟಕದ ಹೆಸರು ಕೇಳಿದೊಡನೆ ವಿಲಿಯಂ ಷೇಕ್ಸ್ ಪಿಯರ್ ನೆನಪಾಗುತ್ತದೆ. ಆದರೆ ಅವರದು 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್', ಇದು 'ಡೇ ಡ್ರೀಮ್ಸ್'.
ನಾಟಕ : 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್'
ರಚನೆ ಮತ್ತು ನಿರ್ದೇಶನ: ಶೈಲೇಶ್ ಕುಮಾರ್ ಎಂ.ಎಂ
ದಿನಾಂಕ : ಅಕ್ಟೋಬರ್ 7
ಸಮಯ: ಸಂಜೆ 4.30 ಹಾಗೂ 7.30 (ಎರಡು ಪ್ರದರ್ಶನ)
ಸ್ಥಳ : ಕೆ ಹೆಚ್ ಕಲಾಸೌಧ, ಹನುಮಂತನಗರ, ಬೆಂಗಳೂರು.
ತಂಡ: ಸೈಡ್ ವಿಂಗ್ ಬೆಂಗ್ಳೂರು

'ಕನಸುಗಳನ್ನು ಕಾಣಬಾರದಂತೆ, ಕನಸುಗಳು ಕಾಡಬೇಕಂತೆ!' ಬೆಳಕಿಲ್ಲದ ದಾರಿಯಲ್ಲಿ ನಡೆದೇನು, ಆದರೆ ಕನಸಿಲ್ಲದ ದಾರಿ ನಾನೊಲ್ಲೆ!' ಹೀಗೆ ಕನಸುಗಳ ಪ್ರಾಮುಖ್ಯತೆ ಸಾರುವ ಹಲವಾರು ಸಾಲುಗಳಿವೆ. ಆದರೆ, ಇಂದಿನ ಯುವ ಪೀಳಿಗೆ ಒಂದು ಬಗೆಯ ಕನಸನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಿದೆ, ಅದೇ 'ಹಗಲುಗನಸು'.
ಯುವಕರು ತಮ್ಮ ಸಾಧನೆಯ ಹಾದಿಯಲ್ಲಿ ಹಗಲುಗನಸುಗಳ ಬೇಲಿಯನ್ನು ತಾವೇ ತಂದಿಟ್ಟುಕೊಂಡು ಅದರೊಳಗೆ ತಮಗೇ ಅರಿವಿಲ್ಲದಂತೆ ಬಂಧಿಗಳಾಗುತ್ತಿರುವುದು ಒಂದು ವಿಪರ್ಯಾಸ. ಈ ರೀತಿಯ ಹಗಲುಗನಸಿನ ಬಂಗಲೆಯೊಳಗೆ ಬಂಧಿಯಾಗಿರುವ ಯುವಕನ ಕಥೆಯೇ ಶೈಲೇಶ್ ಕುಮಾರ್ ಎಂ.ಎಂ. ಅವರು ರಚಿಸಿ ನಿರ್ದೇಶಿಸಿರುವ ನಾಟಕ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್'!
ಗಂಭೀರ ಸಮಸ್ಯೆಗಳನ್ನು ಹಾಸ್ಯಲೇಪನದೊಂದಿಗೆ ಬೆರೆಸಿ, ಜನರ ಮನಮುಟ್ಟುವಂತೆ ಹೇಳುವುದು ಶೈಲೇಶ್ ಕುಮಾರ್ ಅವರ ನಾಟಕಗಳ ವಿಶೇಷತೆ. ಈ ನಾಟಕವೂ ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಲೇ ಯೋಚನೆಗೆ ಹೆಚ್ಚುತ್ತದೆ. ಈಗಾಗಲೇ 5 ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ಈ ನಾಟಕ, ಇದೇ ಅಕ್ಟೋಬರ್ 7ರ ಭಾನುವಾರದಂದು ಹನುಮಂತನಗರ ದ ಕೆ.ಎಚ್. ಕಲಾಸೌಧದಲ್ಲಿ ಸಂಜೆ 4:30 ಹಾಗೂ 7:30ಕ್ಕೆ ಎರಡು ಪ್ರದರ್ಶನಗಳನ್ನು ಕಾಣಲಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications