ಅನೈತಿಕ ಸಂಬಂಧ ಹೊಂದಲು ಬಯಸುವವರಲ್ಲೇ ಬೆಂಗಳೂರಿಗರೇ ಟಾಪ್!
Recommended Video
ಬೆಂಗಳೂರು, ಜನವರಿ.28: ಪ್ರೀತಿ, ಪ್ರೇಮ, ಪ್ರಣಯ ಅಲ್ಲ. ಅನೈತಿಕ ಸಂಬಂಧ ಬೆಳೆಸಲು ಇತ್ತೀಚಿಗೆ ತಂತ್ರಜ್ಞಾನ ಹೆಚ್ಚು ಹೆಚ್ಚು ಉಪಯೋಗವಾಗುತ್ತಿದೆ ಎಂದ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತಾ ಆಘಾತಕಾರಿ ವರದಿಯೊಂದು ಇದೀಗ ಬಹಿರಂಗವಾಗಿದೆ.
ಮದುವೆಯ ನಂತರವೂ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಲು ಬಯಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಪತಿ ಪತ್ನಿಯರ ನಡುವಿನ ಬಾಂಧವ್ಯ ಹದಗೆಡುತ್ತಿದ್ದು, ಹೊರಗಿನ ಸಂಪರ್ಕ ಬೆಳೆಸಲು ವಿಶೇಷ ಆಪ್ ಗಳ ಮೊರೆ ಹೋಗುತ್ತಿದ್ದಾರೆ.
ಭಾರತದಲ್ಲಿ 8 ಲಕ್ಷ ಮಂದಿ ವಿವಾಹಿತರೇ ಡೇಟಿಂಗ್ ಆಪ್ ಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಡೇಟಿಂಗ್ ಆಪ್ ಗಳಲ್ಲಿ ಹೆಸರು ನೋಂದಾಯಿಸಿಕೊಂಡವರ ಪೈಕಿ ಬೆಂಗಳೂರಿಗರೇ ಅತಿಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನವರಿ ತಿಂಗಳಿನಲ್ಲಿ ಗಣನೀಯ ನೋಂದಣಿ
ಕಳೆದ 2020ರ ಜನವರಿ ತಿಂಗಳು ಹೊಸ ವರ್ಷಾಚರಣೆ ಮೂಡ್ ನಲ್ಲಿದ್ದ ಬಹುತೇಕ ವಿವಾಹಿತರು ಆನ್ ಲೈನ್ ಡೇಟಿಂಗ್ ಆಪ್ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಆಪ್ ಗೆ ನೋಂದಣಿ ಮಾಡಿಕೊಂಡವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಜನವರಿ ಮೊದಲ ವಾರದಲ್ಲೇ ಅತಿಹೆಚ್ಚು ಚಂದಾದಾರರು ಈ ಆಪ್ ನಲ್ಲಿ ನೇಮ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಈ ನಗರದ ಪುರುಷರೇ ಡೇಟಿಂಗ್ ಆಪ್ ಬಳಸುವುದು
ಆನ್ ಲೈನ್ ಡೇಟಿಂಗ್ ಆಪ್ ಬಳಸುವವರಲ್ಲಿ ಬೆಂಗಳೂರಿನ ಪುರುಷರೇ ಅತಿಹೆಚ್ಚು ಎಂದು ತಿಳಿದು ಬಂದಿದೆ. ಇನ್ನು, ಮುಂಬೈ, ಕೋಲ್ಕತ್ತಾ, ನವದೆಹಲಿ, ಪುಣೆ, ಹೈದ್ರಾಬಾದ್, ಚೆನ್ನೈ, ಗುರಗಾವ್, ಅಹ್ಮದಾಬಾದ್, ಜೈಪುರ್, ಚಂಡೀಘರ್, ಲಕ್ನೋ, ಕೊಚ್ಚಿ, ನೋಯ್ಡಾ, ವಿಶಾಖಪಟ್ಟಣಂ, ನಾಗ್ಪುರ್, ಸೂರತ್, ಇಂದೋರ್ ಮತ್ತು ಭುವನೇಶ್ವರ್ ದ ಪುರುಷರು ಡೇಟಿಂಗ್ ಆಪ್ ನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ತಿಳಿದು ಬಂದಿದೆ.

ಮಹಿಳೆಯರೂ ಕೂಡಾ ಡೇಟಿಂಗ್ ಆಪ್ ಬಳಸುವುದರಲ್ಲಿ ಎತ್ತಿದ ಕೈ
ಬೆಂಗಳೂರಿನಲ್ಲಿ ಪುರುಷರಷ್ಟೇ ಅಲ್ಲ, ಮಹಿಳೆಯರೂ ಕೂಡಾ ಡೇಟಿಂಗ್ ಆಪ್ ನ್ನು ಅತಿಹೆಚ್ಚಾಗಿ ಬಳಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರನ್ನು ಹೊರತುಪಡಿಸಿದಂತೆ ಮುಂಬೈ, ನವದೆಹಲಿ, ಕೋಲ್ಕತ್ತಾ, ಪುಣೆ, ಹೈದ್ರಾಬಾದ್, ಚೆನ್ನೈ, ಗುರಗಾವ್, ಚಂಢೀಘರ್, ಅಹ್ಮದಾಬಾದ್, ಜೈಪುರ್, ಕೊಚ್ಚಿ, ನೋಯ್ಡಾ, ಲಕ್ನೋ, ಇಂದೋರ್, ಸೂರತ್, ಗುವಾಹಟಿ, ನಾಗ್ಪುರ್, ಭೂಪಾಲ್ ನ ಮಹಿಳೆಯರೇ ಅತಿಹೆಚ್ಚು ಎಂದು ತಿಳಿದು ಬಂದಿದೆ.

ಜನವರಿ ಮೊದಲ ವಾರದಲ್ಲೇ ಶೇ.300ರಷ್ಟು ನೋಂದಣಿ
2020ರ ಜನವರಿ ಮೊದಲ ವಾರದಲ್ಲಿ ಅತಿಹೆಚ್ಚು ಜನರು ಈ ಡೇಟಿಂಗ್ ಆಪ್ ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜನವರಿ ಎರಡು ಮತ್ತು ಮೂರನೇ ವಾರಕ್ಕೆ ಹೋಲಿಸಿದರೆ ಮೊದಲ ವಾರದಲ್ಲೇ ಶೇ.300ರಷ್ಟು ಜನರು ಈ ಆಪ್ ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications