ರಾಗಿಗುಡ್ಡದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಆರಂಭ
ಬೆಂಗಳೂರಿನ ಜಯನಗರದ 9ನೇ ಬಡಾವಣೆಯಲ್ಲಿರುವ ಪ್ರಸಿದ್ದ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಬುಧವಾರ (ನ 26) ಆರಂಭಗೊಂಡಿದೆ.
ಬುಧವಾರ 26.11.2014 ರಿಂದ ಭಾನುವಾರ 07.12.2014ರ ವರೆಗಿನ ಹನ್ನೆರಡು ದಿನಗಳ ವೈಭವದ ಉತ್ಸವ, ಏಕಾದಶವಾರ ರುದ್ರಾಭಿಷೇಕ, ಅಷ್ಟದ್ರವ್ಯ ನಾಳೀಕೇರ ಮಹಾಗಣಪತಿ ಹೋಮದ ಮೂಲಕ ಆರಂಭಗೊಂಡಿದೆ. (ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ)
ಬುಧವಾರ (ನ 26) ಸಂಜೆ ಕಲಬುರಗಿ ಶ್ರೀಕಣ್ವ ಮಠದ ಪರಮಪೂಜ್ಯ ವಿದ್ಯಾಭಾಸ್ಕರತೀರ್ಥ ಸ್ವಾಮೀಜಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

ವಿವಿಧ ದಿನಗಳಂದು ನಡೆಯುವ ವಿಶೇಷ ಪೂಜೆ, ಹೋಮ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಂತಿದೆ:
27.11.2014 : ಸುಬ್ರಮಣ್ಯ ಶಕ್ತಿಧರ ಹೋಮ, ಸಂಜೆ ಸೋಸಲೆ ಸುರೇಶ್ ಅವರಿಂದ ಹರಿಕಥೆ
28.11.2014 : ಮಹಾಲಕ್ಷ್ಮೀ ಮತ್ತು ಪುರುಷಸೂಕ್ತ ಹೋಮ, ಸಂಜೆ ಸಾಮೂಹಿಕ ಅಷ್ಟಲಕ್ಷ್ಮೀ ಪೂಜೆ
29.11.2014 : ನವಗ್ರಹ ಮತ್ತು ಮೃತ್ಯುಂಜಯ ಹೋಮ, ಸಂಜೆ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯ ರೂಪಕ
30.11.2014 : ಚಂಡಿಕಾಹೋಮ, ಸಂಜೆ ಮ್ಯಾಂಡೋಲಿನ್ ಪ್ರಸಾದ್ ಮತ್ತು ಮುಂಬೈ ಕೃಷ್ಣಮೂರ್ತಿಯವರಿಂದ ಜುಗಲ್ ಬಂದಿ
01.12.2014 : ಸಾಮೂಹಿಕ ಪವಮಾನಹೋಮ, ಸಂಜೆ ಭೂಮಿಕಾ ಮಧುಸೂಧನ್ ಅವರಿಂದ ಸಂಗೀತ
02.12.2014 : ಸಾಮೂಹಿಕ ಲಲಿತಾ ಸಹಸ್ರನಾಮ ಹೋಮ, ಸಂಜೆ ದಿವ್ಯಾ ಗಿರಿಧರ್ ಅವರಿಂದ ಸಂಗೀತ
03.12.2014 : ಸಾಮೂಹಿಕ ಧನ್ವಂತರಿ ಹೋಮ, ಸಂಜೆ ರೂಪಾ ಶ್ರೀಧರ್ ಮತ್ತು ಡಾ. ಮಧುವಂತಿ ಮಂಡ್ಯಮ್ ಅವರಿಂದ ದೇವರ ನಾಮಗಳು
04.12.2014 : ಹನುಮಜ್ಜಯಂತಿ ಆಂಜನೇಯಸ್ವಾಮಿ ಲಕ್ಷಾರ್ಚನೆ, ಸಂಜೆ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸರ ಪದಗಳು
05.12.2014 : ಸಾಮೂಹಿಕ ಚಂಡಿಕಾಹೋಮ, ಸಂಜೆ ಸಾಮೂಹಿಕ ಗಜಗೌರಿ ಪೂಜೆ (ಸಂಜೆ 4.30ಕ್ಕೆ)
06.12.2014 : ಸಾಮೂಹಿಕ ನವಗ್ರಹಹೋಮ, ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ (ಸಂಜೆ 4.30ಕ್ಕೆ)
07.12.2014 : ಶತರುದ್ರಾಭಿಷೇಕ ಮತ್ತು ಮಹಾನೀರಾಜನ, ಸಂಜೆ ಚೆನ್ನೈ ಶ್ರೀನಿವಾಸ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ
ಈ ಎಲ್ಲಾ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 12.15 ಗಂಟೆಯಿಂದ 1.30ರ ವರೆಗೆ ಎಲ್ಲಾ ಭಕ್ತರಿಗೂ ಮಹಾಪ್ರಸಾದದ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದೆ ಎಂದು ರಾಗಿಗುಡ್ಡದ ಭಕ್ತಮಂಡಳಿ ಟ್ರಸ್ಟ್ ತಿಳಿಸಿದೆ. (ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ,
9 ನೇ ಬ್ಲಾಕ್, ಜಯನಗರ,
ಬೆಂಗಳೂರು -560 069
ದೂರವಾಣಿ: (080)2658 0500, 2659 4255
ಇಮೇಲ್ : [email protected]
ವೆಬ್ : www.ragigudda.org
-
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications