ರಾಗಿಗುಡ್ಡದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಆರಂಭ
ಬೆಂಗಳೂರಿನ ಜಯನಗರದ 9ನೇ ಬಡಾವಣೆಯಲ್ಲಿರುವ ಪ್ರಸಿದ್ದ ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ 46ನೇ ಹನುಮಜ್ಜಯಂತಿ ಉತ್ಸವ ಬುಧವಾರ (ನ 26) ಆರಂಭಗೊಂಡಿದೆ.
ಬುಧವಾರ 26.11.2014 ರಿಂದ ಭಾನುವಾರ 07.12.2014ರ ವರೆಗಿನ ಹನ್ನೆರಡು ದಿನಗಳ ವೈಭವದ ಉತ್ಸವ, ಏಕಾದಶವಾರ ರುದ್ರಾಭಿಷೇಕ, ಅಷ್ಟದ್ರವ್ಯ ನಾಳೀಕೇರ ಮಹಾಗಣಪತಿ ಹೋಮದ ಮೂಲಕ ಆರಂಭಗೊಂಡಿದೆ. (ಶನಿಕಾಟದಲ್ಲಿ ಆಂಜನೇಯನಿಗೇಕೆ ಪೂಜೆ)
ಬುಧವಾರ (ನ 26) ಸಂಜೆ ಕಲಬುರಗಿ ಶ್ರೀಕಣ್ವ ಮಠದ ಪರಮಪೂಜ್ಯ ವಿದ್ಯಾಭಾಸ್ಕರತೀರ್ಥ ಸ್ವಾಮೀಜಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

ವಿವಿಧ ದಿನಗಳಂದು ನಡೆಯುವ ವಿಶೇಷ ಪೂಜೆ, ಹೋಮ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಇಂತಿದೆ:
27.11.2014 : ಸುಬ್ರಮಣ್ಯ ಶಕ್ತಿಧರ ಹೋಮ, ಸಂಜೆ ಸೋಸಲೆ ಸುರೇಶ್ ಅವರಿಂದ ಹರಿಕಥೆ
28.11.2014 : ಮಹಾಲಕ್ಷ್ಮೀ ಮತ್ತು ಪುರುಷಸೂಕ್ತ ಹೋಮ, ಸಂಜೆ ಸಾಮೂಹಿಕ ಅಷ್ಟಲಕ್ಷ್ಮೀ ಪೂಜೆ
29.11.2014 : ನವಗ್ರಹ ಮತ್ತು ಮೃತ್ಯುಂಜಯ ಹೋಮ, ಸಂಜೆ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದಿಂದ ನೃತ್ಯ ರೂಪಕ
30.11.2014 : ಚಂಡಿಕಾಹೋಮ, ಸಂಜೆ ಮ್ಯಾಂಡೋಲಿನ್ ಪ್ರಸಾದ್ ಮತ್ತು ಮುಂಬೈ ಕೃಷ್ಣಮೂರ್ತಿಯವರಿಂದ ಜುಗಲ್ ಬಂದಿ
01.12.2014 : ಸಾಮೂಹಿಕ ಪವಮಾನಹೋಮ, ಸಂಜೆ ಭೂಮಿಕಾ ಮಧುಸೂಧನ್ ಅವರಿಂದ ಸಂಗೀತ
02.12.2014 : ಸಾಮೂಹಿಕ ಲಲಿತಾ ಸಹಸ್ರನಾಮ ಹೋಮ, ಸಂಜೆ ದಿವ್ಯಾ ಗಿರಿಧರ್ ಅವರಿಂದ ಸಂಗೀತ
03.12.2014 : ಸಾಮೂಹಿಕ ಧನ್ವಂತರಿ ಹೋಮ, ಸಂಜೆ ರೂಪಾ ಶ್ರೀಧರ್ ಮತ್ತು ಡಾ. ಮಧುವಂತಿ ಮಂಡ್ಯಮ್ ಅವರಿಂದ ದೇವರ ನಾಮಗಳು
04.12.2014 : ಹನುಮಜ್ಜಯಂತಿ ಆಂಜನೇಯಸ್ವಾಮಿ ಲಕ್ಷಾರ್ಚನೆ, ಸಂಜೆ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸರ ಪದಗಳು
05.12.2014 : ಸಾಮೂಹಿಕ ಚಂಡಿಕಾಹೋಮ, ಸಂಜೆ ಸಾಮೂಹಿಕ ಗಜಗೌರಿ ಪೂಜೆ (ಸಂಜೆ 4.30ಕ್ಕೆ)
06.12.2014 : ಸಾಮೂಹಿಕ ನವಗ್ರಹಹೋಮ, ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ (ಸಂಜೆ 4.30ಕ್ಕೆ)
07.12.2014 : ಶತರುದ್ರಾಭಿಷೇಕ ಮತ್ತು ಮಹಾನೀರಾಜನ, ಸಂಜೆ ಚೆನ್ನೈ ಶ್ರೀನಿವಾಸ್ ಮತ್ತು ತಂಡದವರಿಂದ ಕರ್ನಾಟಕ ಸಂಗೀತ
ಈ ಎಲ್ಲಾ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 12.15 ಗಂಟೆಯಿಂದ 1.30ರ ವರೆಗೆ ಎಲ್ಲಾ ಭಕ್ತರಿಗೂ ಮಹಾಪ್ರಸಾದದ (ಅನ್ನಸಂತರ್ಪಣೆ) ವ್ಯವಸ್ಥೆ ಮಾಡಲಾಗಿದೆ ಎಂದು ರಾಗಿಗುಡ್ಡದ ಭಕ್ತಮಂಡಳಿ ಟ್ರಸ್ಟ್ ತಿಳಿಸಿದೆ. (ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಗಿಗುಡ್ಡಶ್ರೀಪ್ರಸನ್ನ ಅಂಜನೇಯಸ್ವಾಮಿ ದೇವಸ್ಥಾನ,
9 ನೇ ಬ್ಲಾಕ್, ಜಯನಗರ,
ಬೆಂಗಳೂರು -560 069
ದೂರವಾಣಿ: (080)2658 0500, 2659 4255
ಇಮೇಲ್ : [email protected]
ವೆಬ್ : www.ragigudda.org
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications