ಹೆಪ್ಪುಗಟ್ಟಿದ ಪಾಂಗಾಂಗ್ ಸರೋವರ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ಬರೆದ ಬೆಂಗಳೂರಿಗರು!
ಲಡಾಖ್ ಸರ್ಕಾರ ಆಯೋಜಿಸಿದ್ದ ಹೆಪ್ಪುಗಟ್ಟಿದ ಪಾಂಗಾಂಗ್ ಸರೋವರದಲ್ಲಿ ಓಟದ ಸ್ಪರ್ಧೆಯಲ್ಲಿ ಬೆಂಗಳೂರಿನ ನಾಲ್ವರು ಸ್ಪರ್ಧಿಗಳು ಗೆಲುವು ಸಾಧಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಬೆಂಗಳೂರು ಫೆಬ್ರವರಿ 25: ಲಡಾಖ್ ಸರ್ಕಾರ ಆಯೋಜಿಸಿದ್ದ ಚಳಿಗಾಲದ ಕ್ರೀಡೆಯಲ್ಲಿ ಬೆಂಗಳೂರಿನ ನಾಲ್ವರು ಸ್ಪರ್ಧಿಗಳು ಗೆಲುವು ಸಾಧಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಫೆಬ್ರವರಿ 20 ರಂದು ಹೆಪ್ಪುಗಟ್ಟಿದ ಪಾಂಗಾಂಗ್ ಸರೋವರದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 21 ಕಿಲೋಮೀಟರ್ ಓಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ವರು ಬೆಂಗಳೂರಿಗರು ಜಯ ಸಾಧಿಸಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಪಾಂಗಾಂಗ್ ಸರೋವರದ 14,100 ಅಡಿ ಎತ್ತರದ ಶೂನ್ಯ ತಾಪಮಾನದಲ್ಲಿ ಈ 21-ಕಿಮೀ ಓಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ಒಟ್ಟು 71 ಓಟಗಾರರಿದ್ದರು. ಈ ಓಟವು ವಿಶ್ವದ ಅತಿ ಎತ್ತರದ ಹೆಪ್ಪುಗಟ್ಟಿದ ಸರೋವರದ ಮ್ಯಾರಥಾನ್ ಆಗಿ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ನೋಂದಾಯಿಸಲ್ಪಟ್ಟಿದೆ.

ಈ ಸ್ಪರ್ಧೆಯಲ್ಲಿ ಭಾರತೀಯ ಸೇನೆಯಿಂದಲೂ ಭಾಗವಹಿಸಿದ್ದರು. ಬೆಂಗಳೂರಿಗರಿನ ವಿವಿಧ ಕಂಪನಿಗಳ ಉನ್ನತ ಹಣಕಾಸು ಅಧಿಕಾರಿಗಳು ಸಹ ಇದರಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಬ್ಲ್ಯುಎಂಜಿ ಗ್ರೂಪ್ ಹೆಸರಿನ ಕನ್ಸಲ್ಟೆನ್ಸಿ ಕಂಪನಿ ಮೈಸೂರು ನಿರ್ದೇಶಕ ರಾಜೇಶ್, "ಮಂಜಿನ ಮೇಲೆ ಓಡುವುದು ಸುಲಭವಲ್ಲ. ಅದು ಕೆಲ ಬಾರಿ ಮಾರಕವಾಗಬಹುದು" ಎಂದು ಹೇಳಿದರು. ಈವೆಂಟ್ನಲ್ಲಿ ಭಾಗವಹಿಸಲು ಅವರು ಮತ್ತು ಅವರ ಗೆಳೆಯರು ತಮ್ಮ ಫಿಟ್ನೆಸ್ ರುಜುವಾತುಗಳನ್ನು ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್, ಸಂಘಟನಾ ಸಂಸ್ಥೆಗೆ ನೀಡಬೇಕಾಗಿತ್ತು.
ಸ್ಪರ್ಧೆಯಲ್ಲಿ ಗೆದ್ದ ಮದನ್ ಬಾಡಿ, ಶ್ರೀನಿವಾಸನ್ ಆರ್, ಮತ್ತು ತರುಣ್ ಗುಂಟನೂರ್ ಅವರು ವಾರಕ್ಕೆ ಎರಡು ಬಾರಿ ಸುಮಾರು 21 ಕಿಮೀ ಓಡುತ್ತಿದ್ದರು. ಇತರ ದಿನಗಳಲ್ಲಿ ಶಕ್ತಿ ತರಬೇತಿ ಮಾಡುವಾಗ ವಾರಕ್ಕೊಮ್ಮೆ ಸುಮಾರು 100 ಕಿಮೀ ಸೈಕಲ್ ಓಡಿಸುತ್ತಿದ್ದರು. "ನಾವು ಪ್ರತ್ಯೇಕವಾಗಿ ತರಬೇತಿ ಪಡೆದು ಪ್ರತಿದಿನ ನಮ್ಮ ಶಕ್ತಿಯನ್ನು ಓಟದಲ್ಲಿ ಹೆಚ್ಚಿಸಿಕೊಂಡಿದ್ದೇವೆ" ಎಂದು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.

ಸರೋವರದ ಮೇಲೆ ಈ ರೀತಿಯ ಓಟವನ್ನು ಆಯೋಜಿಸುವುದು ಇದು ಕೊನೆಯ ಬಾರಿಗೆ ಇರಬಹುದು. ಏಕೆಂದರೆ ಇದಕ್ಕೆ ಕೆಲವು ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿ ವ್ಯಕ್ತಿಗೆ ಪ್ರಯಾಣ ಮತ್ತು ಭಾಗವಹಿಸುವಿಕೆಗಾಗಿ ಸಂಘಟಕರು ಸುಮಾರು 46,000 ರೂ. ಖರ್ಚು ಮಾಡಿದ್ದಾರೆ.
ಹವಮಾನಕ್ಕೆ ಒಗ್ಗಿಕೊಳ್ಳುವಿಕೆಯು ಅವರ ಪ್ರವಾಸದ ಅತ್ಯಂತ ಕಷ್ಟಕರವಾದ ಭಾಗವಾಗಿತ್ತು. ಕುಡಿಯುವ ನೀರು ಅಥವಾ ಪೈಪ್ಲೈನ್ ನೀರು ಲಭ್ಯವಿಲ್ಲದ ಕಾರಣ, ಪುರುಷರು ಭಾಗವಹಿಸುವವರಿಗೆ ಐಸ್ ಅನ್ನು ಕರಗಿಸಿ ನೀಡುವ ಗ್ರಾಮಸ್ಥರ ಮೇಲೆ ಅವಲಂಬಿತರಾಗಿದ್ದರು. ಈ ಹವಾಮಾನದಲ್ಲಿ ಹಾಲು ಮತ್ತು ಗೋಧಿ ಚಪಾತಿಯನ್ನು ಅವರು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿರಲಿಲ್ಲ ಎಂದು ಅವರು ತಮ್ಮ ವಾರದ ಅವಧಿಯ ಸಮಯದಲ್ಲಿ ಅಕ್ಕಿ ಮತ್ತು ದಾಲ್ ಅನ್ನು ಮಾತ್ರ ತಿನ್ನುತ್ತಿದ್ದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications