ಮಾನವ ಕಳ್ಳಸಾಗಣೆ: ಕೆಂಪೇಗೌಡ ಏರ್ಪೋರ್ಟ್ಲ್ಲಿ 32 ನರ್ಸ್ಗಳ ರಕ್ಷಣೆ
ಬೆಂಗಳೂರು, ನವೆಂಬರ್ 28: ಮಾನವ ಕಳ್ಳಸಾಗಣೆಯಲ್ಲಿ ಬಂಧಿಯಾಗಿದ್ದ ಕೇರಳ ಮೂಲದ 32 ಮಂದಿ ನರ್ಸ್ಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಕ್ಷಣೆ ಮಾಡಲಾಗಿದೆ.
ಮಂಗಳೂರಿನಲ್ಲಿ ನರ್ಸಿಂಗ್ ಪದವಿ ಅಧ್ಯಯನ ಮಾಡಿದ ಕೇರಳ ಮೂಲದ 32 ನರ್ಸ್ ಗಳನ್ನು ರಕ್ಷಿಸಲಾಗಿದೆ. ಯುನಿವರ್ಸಿಟಿ ಆಫ್ ಟ್ರಡಿಶನಲ್ ಆಫ್ ಆರ್ಮೇನಿಯಾದಲ್ಲಿ ಜರ್ಮನ್ ಕಲಿಕೆಯ ಅಲ್ಪಾವಧಿ ಕೋರ್ಸ್ಗೆ ಕರೆದೊಯ್ಯುವ ನೆಪದಲ್ಲಿ ಇವರ ಮಾರಾಟಕ್ಕೆ ಜಾಲ ಹೆಣೆಯಲಾಗಿತ್ತು.
ಇಮಿಗ್ರೇಶನ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಮೆರಿಕಕ್ಕೆ ಈ ನರ್ಸ್ ಗಳನ್ನು ಕರೆದೊಯ್ಯಲು ಯತ್ನಿಸಿದ ಟೋನಿ ಟಾಮ್ ಎಂಬಾತನನ್ನು ಬಂಧಿಸಲಾಗಿದೆ.

ಟೋನಿ ಟಾಮ್, ಮಂಗಳೂರಿನಲ್ಲಿ ಶಿಕ್ಷಣ ಸಲಹಾ ಸಂಸ್ಥೆ ನಡೆಸುತ್ತಿದ್ದ ಹಾಗೂ ಈ ಯುವತಿಯರಿಗೆ ಯುಟಿಎಂಎಯಲ್ಲಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವುದಾಗಿ ಆಮಿಷವೊಡ್ಡಿದ್ದ.
ಘಟನೆ ವಿವರ: ಟಾಮ್ 32 ನರ್ಸ್ಗಳೊಂದಿಗೆ ರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ, ಮಂಗಳವಾರ ಮುಂಜಾನೆ 4 ಗಂಟೆಗೆ ಆರ್ಮೇನಿಯಾ ತೆರಳುವ ವಿಮಾನದಲ್ಲಿ ಕೊರೆದೊಯ್ಯಲು ಯೋಜನೆ ರೂಪಿಸಿದ್ದ ವಿಶ್ವವಿದ್ಯಾಲಯದಲ್ಲಿ ಆ ಕೋರ್ಸ್ ಇರುವ ಬಗ್ಗೆ ಇಮಿಗ್ರೇಶನ್ ಅಧಿಕಾರಿಗಳಿಗೆ ಸಂದೇಹ ಉಂಟಾಗಿ ತಕ್ಷಣ ಬಿಐಎಎಲ್ ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications