ದೇವನಹಳ್ಳಿಯಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿ
ಬೆಂಗಳೂರು, ಡಿ.3 : ದೇವನಹಳ್ಳಿಯ ಸಂತೆ ಮೈದಾನದಲ್ಲಿ ಹೆಜ್ಜೇನುಗಳು ಜನರ ಮೇಲೆ ದಾಳಿ ಮಾಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಬುಧವಾರ
ದೇವನಹಳ್ಳಿಯಲ್ಲಿ
ಸಂತೆ
ನಡೆಯುತ್ತದೆ.
ಮಧ್ಯಾಹ್ನ
12.30ರ
ಸುಮಾರಿಗೆ
ಹೆಜ್ಜೇನುಗಳು
ಸಂತೆ
ಮೈದಾನದಲ್ಲಿ
ಇದ್ದ
ಜನರ
ಮೇಲೆ
ಏಕಾಏಕಿ
ದಾಳಿ
ನಡೆಸಿವೆ.
ನೂರಾರು
ಜನರು
ತಕ್ಷಣ
ದಿಕ್ಕಾಪಾಲಾಗಿ
ಓಡಿದ್ದಾರೆ.
ಘಟನೆಯಲ್ಲಿ
ಇಬ್ಬರು
ಸಾವನ್ನಪ್ಪಿದರೆ,
20
ಕ್ಕೂ
ಅಧಿಕ
ಜನರು
ಗಾಯಗೊಂಡರು.
ದೇವನಹಳ್ಳಿ ಸಂತೆ ಮೈದಾನದ ಸಮೀಪವಿರುವ ಓವರ್ ಹೆಡ್ ಟ್ಯಾಂಕ್ನಲ್ಲಿ ಹೆಜ್ಜೇನುಗಳು ಗೂಡು ಕಟ್ಟಿದ್ದವು. ಆದರೆ, ಇಷ್ಟು ದಿನ ಅವುಗಳ ಯಾರ ಮೇಲೂ ದಾಳಿ ನಡೆಸಿರಲಿಲ್ಲ. ಇಂದು ಅವುಗಳಿಗೆ ಯಾರು ತೊಂದರೆ ಮಾಡಿದರು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ದೇವನಹಳ್ಳಿ ತಹಶೀಲ್ದಾರ್ ಕೇಶವಮೂರ್ತಿ ಮತ್ತು ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪರಿಹಾರ ವಿತರಣೆ : ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದೇವನಹಳ್ಳಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರು ಸ್ಥಳಕ್ಕೆ ಆಗಮಿಸಿದರು. ಮೃತರ ಸಂಬಂಧಿಕರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಿದ ಅವರು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರ ಜೊತೆ ಚರ್ಚಿಸಿ ಪ್ರಕೃತಿ ವಿಕೋಪ ನಿಧಿಯಿಂದ ಮತ್ತಷ್ಟು ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಜೇನು ಸೋಲಿಗರ ಮೂಲಕ ಸಂತೆಯಲ್ಲಿರುವ ಹೆಜ್ಜೇನುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.