ಬೆಂಗಳೂರು ಸುತ್ತ 161 ಹಳ್ಳಿಗಳಿಗೆ ಕಾವೇರಿ ಭಾಗ್ಯ!
ಬೆಂಗಳೂರು, ಜನವರಿ 13 : ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ನಗರ ಜಿಲ್ಲೆಯ 161 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಜಲಮಂಡಳಿಯು ನಿತ್ಯ 16.10 ದಶಲಕ್ಷ ಲೀಟರ್ ನೀರು ಪೂರೈಸಲಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಕರ್ನಾಟಕ ಗೃಹ ಮಂಡಳಿಯ ಸೂರ್ಯನಗರ 1,2,3 , ಮತ್ತು 4 ನೇ ಹಂತ ಆನೇಕಲ್ ಪಟ್ಟಣ ಮತ್ತು ಸುತ್ತಮುತ್ತಲಿನ 17 ಗ್ರಾಮಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ಈಗಾಗಲೇ ಆನೇಕಲ್ ಪಟ್ಟಣಕ್ಕೆ ನಿತ್ಯ 7.5 ಎಂ ಎಲ್ ಡಿ ಪೂರೈಕೆ ಮಾಡಲಾಗುತ್ತಿದೆ.
30 ಎಂಎಲ್ ಡಿ ನೀಡು ಹಂಚಿಕೆ: ರಾಜ್ಯ ಸರ್ಕಾರವು ಸೂರ್ಯನಗರ ವಸತಿ ಬಡಾವಣೆಗಳಿಗೆ 15 ಎಂ ಎಲ್ ಡಿ , ಆನೇಕಲ್ ಪಟ್ಟಣಕ್ಕೆ 7.5 ಎಂಎಲ್ ಡಿ ಮತ್ತು 17 ಹಳ್ಳಿಗಳಿಗೆ 7.5 ಎಂಎಲ್ ಡಿ ಸೇರಿ ಒಟ್ಟು 30 ಎಂಎಲ್ ಡಿ ಕಾವೇರಿ ನೀಡು ಹಂಚಿಕೆ ಮಾಡಿದೆ.

ಇದಕ್ಕಾಗಿ ಜಲಮಂಡಳಿಗೆ 168 ಕೋಟಿ ರೂ. ಪಾವತಿಸಬೇಕು. ಕೆಎಚ್ ಬಿ 84 ಕೋಟಿ ರೂ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 47 ಕೋಟಿ ರೂ. ಮತ್ತು ಆನೇಕಲ್ ಪುರಸಭೆಯು 43.5 ಕೋಟಿ ರೂ ಗಳನ್ನು ಜಲಮಂಡಳಿಗೆ ಪಾವತಿ ಮಾಡಬೇಕಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ರಾಜಾಪುರ, ಹೆನ್ನಾಗರ, ಲಿಂಗಾಪುರ, ಇಂಡ್ಲವಾಡಿಪುರ, ಚಿಕ್ಕ ಹೊಸೂರು, ಬೋಗನದೊಡ್ಡಿ, ಮೈಸೂರಮ್ಮನದೊಡ್ಡಿ, ಬೊಮ್ಮಹಳ್ಳಿ, ಕೋಣಸಂದ್ರ,ಕಾಡಜಕ್ಕಸಂದ್ರ, ಜಿಗಣಿ, ಸೇರಿದಂತೆ 17 ಹಳ್ಳಿಗಳಿಗೆ7.5 ಎಂಎಲ್ ಡಿ ಕಾವೇರಿ ನೀರನ್ನು ಹಂಚಿಕೆ ಮಾಡಿ ಸರ್ಕಾರ ಅನುಮೋದನೆ ನೀಡಿದೆ.
161 ಹಳ್ಳಿಗಳಿಗೆ ಕಾವೇರಿ ಭಾಗ್ಯ: ಸರ್ಕಾರವು ಆನೇಕಲ್ ತಾಲೂಕಿನ ಕೇವಲ 17 ಹಳ್ಳಿಗಳಿಗೆ ಮಾತ್ರ ನೀರು ಪೂರೈಸಲು 7.5 ಎಂಎಲ್ ಡಿ ಹಂಚಿಕೆ ಹಂಚಿಕೆ ಮಾಡಿತ್ತು. ಈ ಮಧ್ಯೆ ಸಂಸದ ಡಿ.ಕೆ. ಸುರೇಶ್ ಅವರು 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ 161 ಜನ ವಸತಿ ಪ್ರದೇಶಗಳಿಗೂ ಕಾವೇರಿ ನೀರು ಒದಗಿಸಬೇಕೆಂದು ಒತ್ತಡ ಹೇರಿದ್ದಾರೆ.
8.60 ಎಂ.ಎಲ್.ಡಿ ನೀರು ಒದಗಿಸಲು ಸಮ್ಮತಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮನವಿ ಪತ್ರಕ್ಕೆ ಸ್ಪಂದಿಸಿರುವ ಜಲಮಂಡಳಿ ತಾತ್ಕಾಲಿಕವಾಗಿ 8.60 ಎಂಎಲ್ ಡಿ ನೀರು ನೀಡಲು ಒಪ್ಪಿಗೆ ನೀಡಿದೆ.
-
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications