ಮುಂಬೈ ದಾಳಿಗೆ 10 ವರ್ಷ: ಸಂಸದ ರಾಜೀವ್ ಚಂದ್ರಶೇಖರ್ ಹೇಳಿದ್ದೇನು?
ಬೆಂಗಳೂರು, ನವೆಂಬರ್ 26: ಮುಂಬೈ 26/11 ದಾಳಿಗೆ 10 ವರ್ಷ ಆಗಿದ್ದು, ಆ ದಿನ ನಡೆದ ಭೀಕರ ದಾಳಿ ಬಗ್ಗೆ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ನೆನಪು ಮಾಡಿಕೊಂಡಿದ್ದಾರೆ. ಜತೆಗೆ ಆ ದಾಳಿಯ ನಂತರ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಕೂಡ ಪರಾಮರ್ಶೆ ಮಾಡಿಕೊಳ್ಳುವ ಸನ್ನಿವೇಶ ಇದು ಎಂದಿದ್ದಾರೆ.
ಪಾಕಿಸ್ತಾನದ ಉಗ್ರರು ನಡೆಸಿದ ಮುಂಬೈ ದಾಳಿಯಲ್ಲಿ 166 ಅಮಾಯಕರು ಮೃತಪಟ್ಟಿದ್ದರೆ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದರಲ್ಲಿ ಮಹಿಳೆಯರು-ಮಕ್ಕಳು ಒಳಗೊಂಡಿದ್ದರು. ತುಕಾರಾಮ್ ಓಂಬಳೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎನ್ ಎಸ್ ಜಿ ಸುನೀಲ್ ಯಾದವ್, ಪೊಲೀಸ್ ಅಧಿಕಾರಿಗಳಾದ ಸಲಸ್ಕರ್, ಕಾಮ್ಟೆ, ಕರ್ಕರೆ ಇನ್ನೂ ಹಲವು ಯೋಧರು, ಪೊಲೀಸ್ ಅಧಿಕಾರಿಗಳು ಆ ಭೀಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ದೇಶ ಹಾಗೂ ಆರ್ಥಿಕತೆ ಮೇಲೆ ನಡೆಸಿದ ಭೀಕರ ದಾಳಿ ಅದು. ಪಾಕಿಸ್ತಾನದಿಂದ ಬಂದ ಹತ್ತು ಉಗ್ರರು ಮೂರು ದಿನ ನಡೆಸಿದ ಕೃತ್ಯವ್ಯ್ ಗುಂಡಿನ ಚಕಮಕಿ, ಗ್ರೆನೇಡ್ ದಾಳಿಯಷ್ಟೇ ಆಗಿರಲಿಲ್ಲ. ಸೇನೆಯೊಂದು ನಡೆಸುವ ದಾಳಿಯ ರೀತಿಯಲ್ಲಿ ಯೋಜಿಸಿದ ಕೃತ್ಯ ಅದಾಗಿತ್ತು. ಭಾರತದ ವಾಣಿಜ್ಯ ರಾಜಧಾನಿಯನ್ನು ಸರ್ವನಾಶ ಮಾಡುವ ಹುನ್ನಾರ ಮಾಡಿದ್ದರು. ನಮ್ಮ ವಿರುದ್ಧದ ಪದೇಪದೇ ನಡೆಸಿದ ಯುದ್ಧವನ್ನು ನೆನಪಿಸುವ ಘಟನೆ ಅದು ಎಂದು ನೆನಪಿಸಿಕೊಂಡಿದ್ದಾರೆ.

ಆಗ ಸರಕಾರದ ಮೇಲ್ ಸ್ತರದಲ್ಲಿದ್ದವರು ವಿಫಲರಾಗಿದ್ದಕ್ಕೆ ಆ ದಾಳಿಯು ಸ್ಪಷ್ಟ ನಿದರ್ಶನ. ಆದ್ದರಿಂದ ಸಂಸತ್ ನ ಹೊರಗೆ ಹಾಗೂ ಒಳಗೆ ಉತ್ತರದಾಯಿತ್ವದ ಬಗ್ಗೆ ಧ್ವನಿ ಎತ್ತಿದೆ. ಅಮೆರಿಕದಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ವೈಫಲ್ಯಕ್ಕೆ ಏನು ಕಾರಣ ಎಂದು ತಿಳಿಯಲು ನಿಯೋಗ ರಚಿಸಲಾಗಿತ್ತು ಆದರೆ ಭಾರತ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಸಂತ್ರಸ್ತರಾದವರಿಗೆ ಉತ್ತರದಾಯಿತ್ವ ಯಾರು ಎಂಬ ಪ್ರಶ್ನೆಗೆ ಆಗಿನ ಯುಪಿಎ ಸರಕಾರ ಉತ್ತರ ಕೂಡ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಉಗ್ರಗಾಮಿಗಳ ದಾಳಿ ಬಗ್ಗೆ ವರದಿಗಳನ್ನು ಕಾಂಗ್ರೆಸ್ ನಾಯಕರು ಹೇಗೆ ನಿರ್ಲಕ್ಷ್ಯ ಮಾಡುತ್ತಾ ಬಂದರು ಎಂಬುದು ನಮಗೆ ಗೊತ್ತಿದೆ ಎಂದಿರುವ ಅವರು, ಆ ನಂತರ ನನ್ನನ್ನೂ ಒಳಗೊಡಂತೆ ಅಜಿತ್ ದೋವಲ್ ಮತ್ತಿತರರು ನೀಡಿದ ವರದಿಯಲ್ಲಿ ರಾಷ್ಟ್ರೀಯ ಭಯೋತ್ಪಾದನಾ ಪ್ರತಿ ದಾಳಿ ರಚನೆ ಹೇಗಿರಬೇಕು ಎಂಬುದರ ಪ್ರಸ್ತಾವ ಮಾಡಿದ್ದೆವು. ಆದ್ದರಿಂದಲೇ ಕೌಂಟರ್ ಟೆರರಿಸಂ ಏಜೆನ್ಸಿ ಆರಂಭಿಸಲಾಯಿತು ಎಂದಿದ್ದಾರೆ.
ಆ ವರದಿ ಬಿಡುಗಡೆಯಾದ ಮೇಲೆ ಪಾಕಿಸ್ತಾನವು ಆತಂಕಕ್ಕೆ ಒಳಗಾಯಿತು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಸಂಸತ್ ನಲ್ಲೂ ನಿರಂತರವಾಗಿ ಧ್ವನಿ ಎತ್ತುತ್ತಿದ್ದೇನೆ. ಕಡಲ ತೀರದಲ್ಲಿ ತೆಗೆದುಕೊಂಡ ಸುರಕ್ಷಾ ಕ್ರಮಗಳ ಬಗ್ಗೆ ಆಗಿನ ಸರಕಾರವನ್ನು ಪ್ರಶ್ನಿಸಿದ್ದೆ. ಆಗ ನಾನು ವರದಿಯಲ್ಲಿ ಮಾಡಿದ್ದ ಶಿಫಾರಸು ಜಾರಿಗೊಳಿಸಲಾಗಿತ್ತು ಎಂದು ತಿಳಿದು ಹೃದಯ ತುಂಬಿ ಬಂತು. ಇನ್ನು ಮುಂಬೈ ದಾಳಿಯ ತನಿಖೆ ಎಲ್ಲಿಯವರೆಗೆ ಬಂತು ಎಂಬ ಬಗ್ಗೆ ಕೂಡ ಪ್ರಶ್ನೆ ಕೇಳಿದ್ದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಸಂಸತ್ ನಲ್ಲಿ ನಿರ್ಣಯವನ್ನು ಮಂಡಿಸಿದ್ದೆ. ಪಾಕಿಸ್ತಾನವನ್ನು ಭಯೋತ್ಪಾದನಾ ರಾಷ್ಟ್ರ ಎಂದು ಘೋಷಣೆ ಮಾಡುವಂತೆ ಖಾಸಗಿ ಮಸೂದೆ ಮಂಡಿಸಿದ್ದೆ. ದಾಳಿ ನಡೆದ ಹತ್ತು ವರ್ಷದ ನಂತರವೂ ಪಾಕಿಸ್ತಾನ ಮೂಲದ ದಾಳಿಕೋರರು ಉತ್ತರದಾಯಿತ್ವ ಹಾಗೂ ನ್ಯಾಯ ತೀರ್ಮಾನದಿಂದ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಪಶುಗಳಾದವರನ್ನು ಈ ದಿನ ನೆನಪಿಸಿಕೊಳ್ಳೋಣ. 26/11ರ ಘಟನೆಯಲ್ಲಿ ಜೀವ ತ್ಯಾಗ ಮಾಡಿದವರು ಹಾಗೂ ಹೋರಾಡಿದವರನ್ನು ನೆನಪಿಸಿಕೊಳ್ಳೋಣ. ಪಾಕಿಸ್ತಾನ ಮಾತ್ರ ಅಲ್ಲ, ಬೇರೆ ಯಾವುದೇ ದೇಶವು ಭಾರತವನ್ನು ದುರ್ಬಲ, ಕೈಲಾಗದ ದೇಶ ಅಂದುಕೊಳ್ಳಬಾರದು. ದೇಶದ ನಾಗರಿಕರ ರಕ್ಷಣೆ ಹಾಗೂ ಸುರಕ್ಷೆಗಾಗಿ ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications