ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ ವಿಧಿವಶ
ಬೆಳಗಾವಿ, ಆಗಸ್ಟ್ 18 : ಡಾ. ಶಿವರಾಜ್ ಕುಮಾರ್ ಅವರ 'ಜನುಮದ ಜೋಡಿ' ಚಿತ್ರದಲ್ಲಿ ಸ್ವಾಮಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಹಿರಿಯ ರಂಗಕರ್ಮಿ ನಾಡೋಜ ಏಣಗಿ ಬಾಳಪ್ಪ (103) ಇಂದು (ಶುಕ್ರವಾರ) ಬೆಳಗ್ಗೆ ವಿಧಿವಶರಾಗಿದ್ದಾರೆ.
ಏಣಗಿ ಬಾಳಪ್ಪನವರಿಗೆ ಧಾರವಾಡದಲ್ಲಿ ಅಕ್ಕರೆಯ ಸನ್ಮಾನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶತಾಯುಷಿ ಏಣಗಿ ಬಾಳಪ್ಪ ಇಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ನಿವಾಸದಲ್ಲಿ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದ ಒಕ್ಕಲುತನದ ಕುಟುಂಬದಲ್ಲಿ 1914ರಲ್ಲಿ ಜನಿಸಿದ್ದ ಬಾಳಪ್ಪ ಅವರು ಹಲವು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಏಣಗಿ ಬಾಳಪ್ಪನವರ ರಂಗಸಾಧನೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ಬಿರುದು ಬಾವಲಿಗಳನ್ನಕೊಟ್ಟು ಗೌರವಿಸಿವೆ.
ಕರಾವಳಿ ರಂಗೋತ್ಸವದಲ್ಲಿ ಏಣಗಿ ಬಾಳಪ್ಪ ಬಗೆಗಿನ ಪುಸ್ತಕ
*1973ರಲ್ಲಿ
ಕರ್ನಾಟಕ
ರಾಜ್ಯ
ಪ್ರಶಸ್ತಿ,
*
1976ರಲ್ಲಿ
ಕರ್ನಾಟಕ
ನಾಟಕ
ಅಕಾಡೆಮಿ
ಪ್ರಶಸ್ತಿ,
*
1978ರಲ್ಲಿ
ಕರ್ನಾಟಕ
ಸಾಹಿತ್ಯ
ಪರಿಷತ್
ಪ್ರಶಸ್ತಿ,
*
1995
ರಲ್ಲಿ
ಕೇಂದ್ರ
ಸರಕಾರದ
'ಕೇಂದ್ರ
ಸಂಗೀತ
ನಾಟಕ
ಅಕಾಡೆಮಿ
ಪ್ರಶಸ್ತಿ',
*
1995
ರಲ್ಲಿ
ಕರ್ನಾಟಕ
ರಾಜ್ಯ
ಸರಕಾರದ
ಅತ್ಯಂತ
ಪ್ರತಿಷ್ಠಿತವಾದ
'ಗುಬ್ಬಿ
ವೀರಣ್ಣ'
ಪ್ರಶಸ್ತಿ,
*
2005ರಲ್ಲಿ
ಕನ್ನಡ
ವಿಶ್ವವಿದ್ಯಾಲಯದ
ನಾಡೋಜ
ಪ್ರಶಸ್ತಿ
ಹೀಗೆ
ಲೆಕ್ಕವಿಲ್ಲದಷ್ಟು
ಪ್ರತಿಷ್ಟಿತ
ಪ್ರಶಸ್ತಿಗಳು
ಏಣಗಿ
ಬಾಳಪ್ಪನವರ
ಸಾಧನೆಗೆ
ಸಂದಿವೆ.
ಬಾಳಪ್ಪನವರ ರಂಗಕೈಂಕರ್ಯವನ್ನು ಮೆಚ್ಚಿ ಕರ್ನಾಟಕ ವಿಶ್ವವಿದ್ಯಾಲಯವು 2006ರಲ್ಲಿ ಗೌರವ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿದೆ. ನಾಟ್ಯಭೂಷಣ, ನಾಟ್ಯಗಂಧರ್ವ ಹೀಗೆ ಹಲವಾರು ಬಿರುದುಗಳನ್ನು ಸಹೃದಯ ಪ್ರೇಕ್ಷಕರು ಕೊಟ್ಟು ಬಾಳಪ್ಪನವರ ಕೀರ್ತಿಯನ್ನು ಹೆಚ್ಚಿಸಿವೆ.