ಬೆಳಗಾವಿಯಲ್ಲಿ ಮತ್ತೆ ಬೀದಿ ನಾಯಿ ಹಾವಳಿ; 7 ವರ್ಷದ ಬಾಲಕನ ಮೇಲೆ ದಾಳಿ
ಬೆಳಗಾವಿ, ಸೆಪ್ಟೆಂಬರ್ 4: ಬೆಳಗಾವಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಮತ್ತೆ ಒಬ್ಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಬೀದಿ ನಾಯಿ ದಾಳಿಯಿಂದ ಗಾಯಗೊಂಡಿರುವ ಬಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಉಜೀಪ್ ಅಸ್ಲಾಮ್ ಖಂಡಾಳೆ (7) ಗಾಯಗೊಂಡಿರುವ ಬಾಲಕ. ಈತ ಕಿರಾಣಿ ಅಂಗಡಿಗೆ ಹೋಗಿ ಬರುವಾಗ ನಾಯಿ ದಾಳಿ ನಡೆಸಿದೆ. ಕೈ ಕಾಲು, ಮೈ ಮೇಲೆ ಕಚ್ಚಿ ಗಾಯಗೊಳಿಸಿವೆ.
ಉ.ಪ್ರದೇಶದಲ್ಲಿ ಬರ್ಬರ ಘಟನೆ, 3 ತಿಂಗಳ ಶಿಶುವಿನ ತಲೆಯನ್ನೇ ಕಚ್ಚಿ ತಿಂದ ಬೀದಿ ನಾಯಿ
ಈ ಹಿಂದೆ ಇದೇ ಗ್ರಾಮದಲ್ಲಿ ಮೂರು ಬಾಲಕರ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದವು. ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡಿದ್ದವು. ಆದರೆ ಇಷ್ಟಾದರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ಬೀದಿ ನಾಯಿ ಹಾವಳಿ ಸಮಸ್ಯೆಗೆ ಸ್ಪಂದಿಸದಿರುವ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.