ಕೃಷ್ಣಾ ನದಿ ಪ್ರವಾಹ ಚರ್ಚೆಗೆ ಮಹಾರಾಷ್ಟ್ರಕ್ಕೆ ತೆರಳಿದ ರಾಜ್ಯ ನಿಯೋಗ
ಬೆಳಗಾವಿ, ಜುಲೈ 8: ಕೃಷ್ಣಾ ನದಿ ಪ್ರವಾಹ ಸಂಬಂಧ ಚರ್ಚೆಗ ಇಂದು ಮಹಾರಾಷ್ಟ್ರಕ್ಕೆ ರಾಜ್ಯದ ನಿಯೋಗ ತೆರಳಲಿದೆ.
ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ಹಾಗೂ ಭೀಮಾ ನದಿಗಳ ಪ್ರವಾಹದ ಮುಂಜಾಗ್ರತಾ ಕ್ರಮಗಳು, ನಿಯಂತ್ರಣ, ಮೇಲ್ವಿಚ್ಚಾರಣೆಗಳ ಕಾರ್ಯವಿಧಾನಗಳ ಕುರಿತು ಚರ್ಚಿಸಲು ರಾಜ್ಯ ನಿಯೋಗ ಮಹಾರಾಷ್ಟ್ರಕ್ಕೆ ತೆರಳಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ
ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜವಳಿ ಸಚಿವ ಶ್ರೀಮಂತ ಪಾಟೀಲ, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ರಾಕೇಶ ಸಿಂಗ್ ರಾಜ್ಯದ ಈ ನಿಯೋಗದಲ್ಲಿದ್ದರೆ. ಇವತ್ತು ನಿಯೋಗ ಬೆಳಗಾವಿಯಿಂದ ಮುಂಬೈಗೆ ತೆರಳಲಿದ್ದು, ನಾಳೆ ಮಹಾರಾಷ್ಟ್ರದ ನೀರಾವರಿ ಸಚಿವ ಜಯಂತ್ ಪಾಟೀಲ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಹಂಚಿಕೊಳ್ಳುವುದು ಹಾಗೂ ಕೃಷ್ಣಾ ಟ್ರಿಬ್ಯುನಲ್ ಕುರಿತು ಉಭಯ ರಾಜ್ಯದ ಸಚಿವರು ಮಾತುಕತೆ ನಡೆಸಲಿರುವುದಾಗಿ ತಿಳಿದುಬಂದಿದೆ.
Comments
English summary
The state delegation will travel to Maharashtra today to discuss about Krishna River Floods,