ರಸ್ತೆ ಅಪಘಾತ : ಒಂದೇ ಕುಟುಂಬದ ಆರು ಮಂದಿ ಸಾವು
ಬೆಳಗಾವಿ, ಡಿ. 3 : ಬೆಳಗಾವಿಯ ಮಹಾಂತೇಶ್ ನಗರದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ಸಂಜೆ 5 ಗಂಟೆ ವೇಳೆಗೆ ಈ ಅಪಘಾತ ನಡೆದಿದೆ.
ಬೆಳಗಾವಿ
ಸಮೀಪದ
ಮಹಾಂತೇಶ್
ನಗರದ
ಬಳಿಯ
ರಾಷ್ಟ್ರೀಯ
ಹೆದ್ದಾರಿ
4ರಲ್ಲಿ
ನಿಂತಿದ್ದ
ಲಾರಿಗೆ
ಕಾರು
ಡಿಕ್ಕಿ
ಹೊಡೆದಿದ್ದರಿಂದ
ಈ
ಅಪಘಾತ
ಸಂಭವಿಸಿದೆ.
ಅತಿವೇಗವಾಗಿ
ಬರುತ್ತಿದ್ದ
ಕಾರು
ಲಾರಿಗೆ
ಡಿಕ್ಕಿ
ಹೊಡೆದಿದ್ದರಿಂದ
ಅಪಘಾತ
ಸಂಭವಿಸಿದೆ.
ಮೃತರಲ್ಲಿ
ಇಬ್ಬರು
ಮಕ್ಕಳು
ಸೇರಿದ್ದು,
ಒಬ್ಬರು
ಮಹಿಳೆ
ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ಜೀನಪ್ಪ ಶೆಟ್ಟರ್, ಗೌರಮ್ಮ (55), ಚಂದ್ರಶೇಖರ (36), ರವಿ (40), ಯುಕ್ತಿ ಅರುಣ್ ಶೆಟ್ಟರ್, ವಿಭವ್ ಎಂದು ಗುರುತಿಸಲಾಗಿದೆ. ಅನುರಾಧಾ ಚಂದ್ರಶೇಖರ್ ಶೆಟ್ಟರ್ (32) ಅಪಘಾತದಿಂದ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ನಿಪ್ಪಾಣಿಯಲ್ಲಿನ ದೇವಾಲಯಕ್ಕೆ ತೆರಳಿ ಹಿಂದಿರುಗುತ್ತಿದ್ದರು. ವೇಗಾವಾಗಿ ಕಾರು ಚಲಾಯಿಸುತ್ತಿದ್ದ ಚಂದ್ರಶೇಖರ್ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೊದಲು ರಸ್ತೆ ಬದಿಯ ಜಾಹೀರಾತು ಫಲಕಕ್ಕೆ ಡಿಕ್ಕಿ ಹೊಡೆದ ಕಾರು ನಂತರ, ಲಾರಿಗೆ ಡಿಕ್ಕಿ ಹೊಡೆದಿದೆ. ಜೀನಪ್ಪ, ಗೌರಮ್ಮ,ಚಂದ್ರಶೇಖರ್ ಮತ್ತು ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ವಿಭವ್ ಮತ್ತು ಯುಕ್ತಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.