'ಜಾಹೀರಾತಿಗಾಗಿ ಸಿದ್ದರಾಮಯ್ಯ ಸರ್ಕಾರ 226 ಕೋಟಿ ಖರ್ಚು ಮಾಡಿದೆ'
ಬೆಳಗಾವಿ, ಮೇ.30 : ಜಾಹೀರಾತಿಗಾಗಿ ಸಿದ್ದರಾಮಯ್ಯ ಸರ್ಕಾರ 226 ಕೋಟಿ ಹಣ ಖರ್ಚು ಮಾಡಿದೆ ಎಂದು ಆರ್ ಟಿಐ ಕಾರ್ಯಕರ್ತ ಭೀಮಪ್ಪಾ ಗಡಾದ ದಾಖಲೆ ಬಿಡುಗಡೆ ಮಾಡಿದ್ದಾರೆ.
2017-18 ರಲ್ಲಿ ದೊಡ್ಡ ಮೊತ್ತದ ಜಾಹಿರಾತು ನೀಡಿದ ಹಿನ್ನಲೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅವರು ಒತ್ತಾಯಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಿಂದ 'ದೆಹಲಿ ಲಾಬಿ'
2017 -18 ರಲ್ಲಿ ಒಂದೇ ವರ್ಷದಲ್ಲಿ 142 ಕೋಟಿ ಜಾಹೀರಾತು ನೀಡಿ, ಕಾಂಗ್ರೆಸ್ ಸರ್ಕಾರ ದಾಖಲೆ ಬರೆದಿದೆ ಎಂದು ಅವರು ಅಪಾದಿಸಿದ್ದಾರೆ.
2013
-14
ರಲ್ಲಿ
ಕೇವಲ
13
ಕೋಟಿ
ಜಾಹೀರಾತಿಗೆ
ವೆಚ್ಚ
ಮಾಡಲಾಗಿತ್ತು.
2014-15
ರಲ್ಲಿ
14
ಕೋಟಿ,
2015-16
ರಲ್ಲಿ
22
ಕೋಟಿ
2016-17
ರಲ್ಲಿ
34
ಕೋಟಿ
ಜಾಹಿರಾತು
ನೀಡಲಾಗಿದೆ
ಎಂದು
ದೂರಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕರ ಹಣದಿಂದ ಪಕ್ಷದ ಪ್ರಚಾರ ಮಾಡಿರುವ ಸಂಶಯವಿದೆ ಎಂದು ಭೀಮಪ್ಪಾ ಗಡಾದ ಬೆಳಗಾವಿ ಜಿಲ್ಲಾ ಅಧಿಕಾರಿಗಳ ಮುಖಾಂತರ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಿದ್ದಾರೆ.