ಅಪಾಯದ ಸೂಚನೆ; ಮಧ್ಯದಲ್ಲೇ ನಿಂತ ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್
ಬೆಳಗಾವಿ, ಆಗಸ್ಟ್ 7: ಬೆಳಗಾವಿಯಲ್ಲಿ ಆಗುತ್ತಿರುವ ಮಹಾಮಳೆಯಿಂದಾಗಿ ಬಹುತೇಕ ರಸ್ತೆ ಸಂಪರ್ಕ ಕಡಿತಗೊಂಡಿದೆ. ರೈಲ್ವೆ ಸಂಪರ್ಕ ಕೂಡ ಸ್ಥಗಿತಗೊಳ್ಳುವ ಸೂಚನೆ ಇಂದು ದೊರೆತಿದೆ.
ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಹೊರಟಿದ್ದ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲು ಹೊರಟ ಸ್ವಲ್ಪ ಸಮಯದಲ್ಲೇ ನಿಲ್ಲುವಂತಾಗಿದೆ.
ಬೆಳಗಾವಿ ರೈಲು ನಿಲ್ದಾಣದಿಂದ ರೈಲು ಹೊರಟು 2 ಕಿ.ಮೀ ಮುಂದೆ ಹೋಗಿತ್ತಷ್ಟೆ. ಅಷ್ಟರಲ್ಲಿ ರೈಲ್ವೆ ಅಧಿಕಾರಿಗಳ ರೆಡ್ ಸಿಗ್ನಲ್ ನೀಡಿದ್ದರು, ಇದರಿಂದ ರೈಲು ಸಂಚಾರವನ್ನು ನಿಲ್ಲಿಸಲಾಯಿತು.

ನಗರದ ರೈಲ್ವೆ ಓವರ್ ಬ್ರಿಡ್ಜ್ ಕೆಳಗೆ ಭಾರೀ ನೀರು ಸಂಗ್ರಹಗೊಂಡ ಹಿನ್ನೆಲೆ ಅಪಾಯದ ಮುನ್ಸೂಚನೆಯಿಂದ ರೈಲನ್ನು ಸ್ಥಗಿತಗೊಳಿಸಲಾಯಿತು.












Click it and Unblock the Notifications