ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ
ಬೆಳಗಾವಿ, ಜೂನ್.19: ಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಈಗಾಗಲೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಇನ್ನೂ ಎರಡು ಸಚಿವ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ಕೊಡಬೇಕೆಂಬ ಬೇಡಿಕೆಯಿದೆ.
ಸಹೋದರನಿಗಾಗಿ ಸಚಿವ ಸ್ಥಾನ ಬಿಡಲು ತಯಾರಿದ್ದಾರೆ ರಮೇಶ್ ಜಾರಕಿಹೊಳಿ
ರಾಜ್ಯದಲ್ಲಿ
ಸಮ್ಮಿಶ್ರ
ಸರ್ಕಾರ
ಅಧಿಕಾರದಲ್ಲಿದ್ದು,
ಮೊದಲ
ಹಂತದಲ್ಲಿ
ನಾನು,
ತುಕಾರಾಂ
ಮತ್ತು
ನಾಗೇಂದ್ರ
ಹೆಸರು
ಇತ್ತು.
ಕೊನೆ
ಗಳಿಗೆಯಲ್ಲಿ
ಅವರಿಬ್ಬರ
ಹೆಸರು
ಕೈ
ಬಿಡಲಾಯಿತು.
ಈ
ಹಿನ್ನೆಲೆಯಲ್ಲಿ
ಬೆಳಗಾವಿ
ಜಿಲ್ಲೆಯಲ್ಲಿ
ಇಡೀ
ವಾಲ್ಮೀಕಿ
ಸಮುದಾಯದವರು
ಪ್ರತಿಭಟನೆ
ಮಾಡಿದರು.
ಅವರು
ನಮಗಾಗಿ
ಮಾಡಿಲ್ಲ.
ವಾಲ್ಮೀಕಿ
ಸಮುದಾಯದ
ಮೂವರಿಗೆ
ಸಚಿವ
ಸ್ಥಾನ
ನೀಡುವಂತೆ
ಪ್ರತಿಭಟಿಸಿದ್ದಾರೆ.
ಬೆಳಗಾವಿ
ದೊಡ್ಡ
ಜಿಲ್ಲೆ.
ಈಗಾಗಲೇ
ಒಂದು
ಸಚಿವ
ಸ್ಥಾನ
ನೀಡಲಾಗಿದೆ.
ಜಿಲ್ಲೆಗೆ
ಇನ್ನು
ಒಂದಾದರೂ
ಸಚಿವ
ಸ್ಥಾನ
ಕೊಡಬೇಕೆಂಬ
ಬೇಡಿಕೆಯಿದೆ.
ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ಜಿಲ್ಲೆಯಿಂದ ಹೆಸರುಗಳನ್ನು ಶಿಫಾರಸ್ಸು ಮಾಡಬೇಕು. ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಮೇಶ ಜಾರಕಿಹೊಳಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.