ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ-ಬೆಂಗಳೂರು ನಡುವೆ ಜನದಟ್ಟಣೆ ತಪ್ಪಿಸಲು ಇನ್ನೊಂದು ರೈಲು ಆರಂಭಿಸಲು ಆಗ್ರಹ

By Nayana
|
Google Oneindia Kannada News

Recommended Video

ಬೆಳಗಾವಿ - ಬೆಂಗಳೂರು ನಡುವೆ ಹೊಸ ರೈಲು ಆರಂಭಿಸಲು ಆಗ್ರಹ | Oneindia Kannada

ಬೆಳಗಾವಿ, ಜೂನ್ 25: ಬೆಳಗಾವಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿಗೆ ಪ್ರತಿಯಾಗಿ ಅದೇ ಸಮಯಕ್ಕೆ ಮತ್ತೊಂದು ರೈಲನ್ನು ಆರಂಭಿಸುವಂತೆ ಕರ್ನಾಟಕ ರೈಲು ಬಳಕೆದಾರರ ವೇದಿಕೆ ಕರ್ನಾಟಕ ರೈಲ್‌ ಯೂಸರ್ಸ್‌ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದೆ.

ಖಾಸಗಿ ಬಸ್ ಮಾಫಿಯಾದಿಂದ ನಿತ್ಯ ಸಾವಿರಾರು ಪ್ರಯಾಣಿಕರು ದುಬಾರಿ ಹಣ ತೆತ್ತು ಬೆಳಗಾವಿ,ಬೆಂಗಳೂರು ನಡುವೆ ಸಂಚರಿಸುವಂತಾಗಿದ್ದು, ಸದ್ಯ ಸಂಚರಿಸುತ್ತಿರುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲು ನಿತ್ಯ ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿದೆ. ಇದೇ ಸಮಯಕ್ಕೆ ಮತ್ತೊಂದು ರೈಲನ್ನು ಆರಂಭಿಸಿದರೆ ಅಷ್ಟೇ ಪ್ರಮಾಣದ ಪ್ರಯಾಣಿಕರು ನಿತ್ಯ ಸಂಚರಿಸಬಹುದು ಎಂದು ಹೇಳಿದೆ.

Passengers urges PM Modi for new rail between Belgaum and Bengaluru

ಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯಶೀಘ್ರದಲ್ಲೇ 115 ರೈಲ್ವೇ ಸ್ಟೇಶನ್ ಗಳಲ್ಲಿ ಹೈ ಸ್ಪೀಡ್ ವೈಫೈ ಸೌಲಭ್ಯ

ಇದರಿಂದ ಖಾಸಗಿ ಬಸ್‌ಗಳ ಮಾಫಿಯಾವನ್ನು ತಡೆಗಟ್ಟಬಹುದು ಎಂದು ಕರ್ನಾಟಕ ರೈಲ್‌ ಯೂಸರ್ಸ್‌ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಟ್ಯಾಗ್‌ ಮಾಡುವ ಮೂಲಕ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಸಾವಿರಾರು ಪ್ರಯಾಣಿಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ ಚೆನ್ನಮ್ಮ ಎಕ್ಸ್‌ಪ್ರೆಸ್‌ನಲ್ಲಿ ತೆರಳಲು 340ರೂ. ದರವಿದೆ, ಅದೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತೆರಳಲು 569 ರೂ. ತೆರಬೇಕಾಗುತ್ತದೆ.

English summary
Karnataka Rail Users forum has launched a campaign in social media by tweeting prime minister Narendra Modi for new train between Belgaum to Bangalore since Rani Chinnamma train is running out of berths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X