ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲ: ತೇಜಸ್ವಿ ಸೂರ್ಯ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ನೆರೆಗೆ ಕೇಂದ್ರದ ನೆರವಿನ ಅವಶ್ಯಕತೆ ಇಲ್ಲವೆಂದ ತೇಜಸ್ವಿ ಸೂರ್ಯ | Tejasvi Surya

ಬೆಳಗಾವಿ, ಸೆಪ್ಟೆಂಬರ್ 21: "ರಾಜ್ಯಕ್ಕೆ ಕೇಂದ್ರದ ಯಾವುದೇ ನೆರವಿನ ಅವಶ್ಯಕತೆ ಇಲ್ಲ. ನೆರೆ ಪರಿಹಾರಕ್ಕೆ ಯಾವುದೇ ಸೌಕರ್ಯ ಇಲ್ಲದ ಸಂದರ್ಭ ರಾಜ್ಯ ಸರ್ಕಾರ ಹಣಕ್ಕಾಗಿ ಬೇಡಿಕೆ ಇಟ್ಟಾಗ ಕೊಡದೇ ಇದ್ದರೆ ಅದು ತಪ್ಪು. ಆದರೆ ಸದ್ಯ ಅಂತಹ ಯಾವುದೇ ಪರಿಸ್ಥಿತಿ ಇಲ್ಲ" ಎಂದು ಹೇಳಿದ್ದಾರೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ.

ಗ್ರಂಥಾಲಯದಲ್ಲಿ ಕಚೇರಿ ತೆರೆದು ಆಕ್ರೋಶಕ್ಕೆ ಗುರಿಯಾದ ತೇಜಸ್ವಿ ಸೂರ್ಯಗ್ರಂಥಾಲಯದಲ್ಲಿ ಕಚೇರಿ ತೆರೆದು ಆಕ್ರೋಶಕ್ಕೆ ಗುರಿಯಾದ ತೇಜಸ್ವಿ ಸೂರ್ಯ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೇಮಠದಲ್ಲಿ ಮಾತನಾಡಿದ ಅವರು, "ಮೋದಿ ಸರ್ಕಾರ ಬಂದ ಮೇಲೆ 14ನೇ ಹಣಕಾಸು ಆಯೋಗದ ಶಿಫಾರಸು ಜಾರಿ ಮಾಡಲಾಗಿದೆ. ಈ ಆಯೋಗದ ಪ್ರಕಾರ ಹಣ ಜಾಸ್ತಿ ಇದೆ. ಈ ಹಿಂದೆ ಪ್ರತಿ ಭಾರೀ ಹಣ ಕೊಡಿ ಎಂದು ಕೇಂದ್ರದ ಬಳಿ ಹೋಗಬೇಕಿತ್ತು. ಆದರೆ ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದೆ‌" ಎಂದಿದ್ದಾರೆ.

No Need Of Flood Relief From Center Said Tejaswi Surya In Belagavi

ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದಾಗಿ ಈಗಾಗಲೇ ಕೇಂದ್ರದಿಂದ ಅಗತ್ಯ ನೆರವು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ ಸಮರ ನಡೆಯುತ್ತಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

English summary
"The state does not need any central assistance regarding flood relief. Now there is no situation in state like this" said Bangalore south Mp Tejasvi surya in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X