ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ:ಜಾರ್ಜ್ ಹೇಳಿದ್ದೇನು?
ಬೆಳಗಾವಿ, ನವೆಂಬರ್ 15: ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಬೆಂಗಳೂರಿಗರಿಗೆ ಅತ್ಯುತ್ತಮ ಸಾರಿಗೆ ಸೇವೆಯಾಗಿ ಕಂಡಿದ್ದು 'ನಮ್ಮ ಮೆಟ್ರೋ'. ಆದರೆ ಇತ್ತೀಚೆಗೆ ಮೆಟ್ರೋದಲ್ಲಿ ಹೆಚ್ಚಿರುವ ಜನಜಂಗುಳಿ ಮಾತ್ರ ಮೆಟ್ರೋವನ್ನೂ ಶಪಿಸುವಂಥ ಪರಿಸ್ಥಿತಿಯನ್ನು ತಂದಿಟ್ಟಿದೆ.
ಅದರಲ್ಲೂ ಮಹಿಳಾ ಪ್ರಯಾಣಿಕರಿಗಂತೂ ಆ ಜನಜಂಗುಳಿಯಲ್ಲಿ ನಿಂತುಕೊಳ್ಳುವುದಂದ್ರೆ ಸಂಕೋಚವೇ. ಅದಕ್ಕೆಂದೇ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿ ಗಳನ್ನು ಆರಂಭಿಸುವುದಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ಜೆಡಿಎಸ್ ಶಾಸಕ ಗೋಪಾಲಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದಲ್ಲೇ ಮಹಿಳಾ ಬೋಗಿಗಳನ್ನು ಆರಂಭಿಸುವುದಾಗಿ ಹೇಳಿದರು.

ಮಹಿಳೆಯರಿಗೆ ಪ್ರತ್ಯೇಕ ಬೋಗಿ ಯಾವಾಗ?
ಈಗಾಗಲೇ ಮೆಟ್ರೋದಲ್ಲಿರುವುದು ಕೇವಲ ಮೂರು ಬೋಗಿ ಮಾತ್ರ. ಒಂದು ಬಾರಿ ಮೆಟ್ರೋದಲ್ಲಿ 250 ಜನ ಓಡಾಡಬಹುದು. ಹೆಚ್ಚುವರಿ ಮೂರು ಬೋಗಿಗಳನ್ನು ಅಳವಡಿಸಿ, ನಂತರ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಆರಂಭಿಸಲಾಗುತ್ತದೆ ಎಂದು ಜಾರ್ಜ್ ಹೇಳಿದ್ದಾರೆ.

ಕಳೆದ ಜೂನ್ ನಲ್ಲೇ ಭರವಸೆ ನೀಡಿದ್ದ ಜಾರ್ಜ್!
ಹೆಚ್ಚುವರಿ ಬೋಗಿಗಳ ಖರೀದಿಗೆ ಬಿಇಎಂಎಲ್ ಗೆ ಆರ್ಡರ್ ನೀಡಲಾಗಿದ್ದು, ಬೋಗಿಗಳು ಬಂದ ತಕ್ಷಣ ಅಂದರೆ, ಡಿಸೆಂಬರ್ ಹೊತ್ತಿಗೆ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡುವುದಾಗ ಜಾರ್ಜ್ ಕಳೆದ ಜೂನ್ ನಲ್ಲೇ ಹೇಳಿದ್ದದರು. ಡಿಸೆಂಬರ್ ಗೆ ಇನ್ನೊಂದೇ ತಿಂಗಳು ಬಾಕಿ ಇದ್ದು, ನಿಜಕ್ಕೂ ಸದ್ಯದಲ್ಲೇ ಮಹಿಳೆಯರಿಗೆ ಪ್ರತ್ಯೇಕ ಬೋಗಿ ನೀಡುವ ಭರವಸೆಯನ್ನು ಉಳಿಸಿಕೊಳ್ಳುತ್ತಾರಾ ನೋಡಬೇಕು.

4 ಲಕ್ಷದಷ್ಟು ಪ್ರಯಾಣಿಕರು!
ನಾಗಸಂದ್ರದಿಂದ - ಯಲಚೇನಹಳ್ಳಿ ವರೆಗಿನ ಗ್ರೀನ್ ಲೈನ್ ಮತ್ತು ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಪರ್ಪಲ್ ಲೈನ್ ಮೆಟ್ರೋದ ಒಟ್ಟು 42 ಕಿ.ಮೀ. ಹಾದಿಯನ್ನು ಅತ್ಯಂತ ಸುಲಭವಾಗಿ ತಲುಪುವ ಸಾಧ್ಯತೆಯನ್ನು ಪರಿಚಯಿಸಿದ್ದು ನಮ್ಮ ಮೆಟ್ರೋ. ದಿನವೊಂದಕ್ಕೆ ಸುಮಾರು 4 ಲಕ್ಷದಷ್ಟು ಜನರನ್ನು ಹೊತ್ತೊಯ್ಯುವ ನಮ್ಮ ಮೆಟ್ರೋ ಸದ್ಯಕ್ಕೆ ಬೆಂಗಳೂರಿಗರ ಅನಿವಾರ್ಯ ಸಾರಿಗೆ ವ್ಯವಸ್ಥೆ!

ಆಗಲೇ ಆರಂಭವಾಗಿದೆ ಕಿರುಕುಳ!
ಎಂಜಿ ರೋಡ್ ಮೆಟ್ರೋಸ್ಟೇಶನ್ ಮತ್ತು ಆ ಮಾರ್ಗವಾಗಿ ಓಡಾಡುವ ಮೆಟ್ರೋದಲ್ಲಿ ಈಗಾಗಲೇ ಎರಡು ಬಾರಿ ಅಹಿತಕರ ಘಟನೆ ನಡೆದಿದೆ ಎಂಬ ಪ್ರಕರಣ ಕೇಳಿಬಂದಿತ್ತು. ಕಳೆದ ಅಕ್ಟೋಬರ್ ನಲ್ಲಿ, ತನಗೆ ಮೆಟ್ರೋದಲ್ಲಿ ಕೆಲ ಯುವಕರು ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯೊಬ್ಬರು ಮೆಟ್ರೋ ಸಿಬ್ಬಂದಿಯೊಬ್ಬರಿಗೆ ದೂರು ನೀಡಿದ್ದರು. ಇಂಥ ಘಟನೆಗಳು ಈಗಾಗಲೇ ಶುರುವಾಗಿರುವ ಹಿನ್ನೆಲೆಯೆಲ್ಲಿ ಆದಷ್ಟು ಶೀಘ್ರವಾಗಿ ನಮ್ಮ ಮೆಟ್ರೋದಲ್ಲಿ ಮಹಿಳಾ ಬೋಗಿಗಳು ಆರಂಭವಾಗುವ ಅಗತ್ಯವಿದೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications