ಮುಗಳಖೋಡ ಮಠದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ವಿಶ್ವದಾಖಲೆಯತ್ತ
ರಾಯಬಾಗ (ಬೆಳಗಾವಿ ಜಿಲ್ಲೆ), ಜನವರಿ 12 : ರಾಜ್ಯ ಸರಕಾರವು ವಿವೇಕಾನಂದರ ಜಯಂತಿ ಆಚರಣೆಗೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಒಂದು ಕಡೆ ಕೇಳಿಬರುತ್ತಿದ್ದರೆ, ಇಲ್ಲಿನ ರಾಯಬಾಗದ ಮುಗಳಖೋಡ ಮಠದಲ್ಲಿ ಶುಕ್ರವಾರ ನ ಭೂತೋ ನ ಭವಿಷ್ಯತ್ ಎಂಬಂತೆ ವಿವೇಕಾನಂದ ಜಯಂತಿ ಆಚರಿಸಲಾಗುತ್ತಿದೆ.
ಸಿದ್ದರಾಮೇಶ್ವರ ಜಯಂತಿಯ ಸಂಕಲ್ಪ ಯಾತ್ರೆಯ ನಿಮಿತ್ತ ನಡೆದಿರುವ ವಿವೇಕಾನಂದ ಜಯಂತಿಯಲ್ಲಿ ಒಂದು ಲಕ್ಷ ಮೀಟರ್ ಕೇಸರಿ ಬಟ್ಟೆ ಬಳಸಿ, ಹತ್ತು ಸಾವಿರ ಯುವಕರಿಂದ ವಿವೇಕ ಆವಾಹನ ಆಗಿದೆ. ಅಂದಹಾಗೆ ಇಲ್ಲಿ ನಡೆದಿರುವ ವಿವೇಕಾನಂದ ಜಯಂತಿ ಕಾರ್ಯಕ್ರಮವು ವಿಶ್ವ ದಾಖಲೆ ಆಗುವತ್ತ ಸಾಗಿದೆ.

ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ ನವರಿಂದ ಸ್ವಾಮಿ ವಿವೇಕಾನಂದರ ವೇಷ ಧರಿಸಿದವರ ಎಣಿಕೆ ಶುರುವಾಗಿದೆ. ಲೆಕ್ಕಾಚಾರ ಮುಗಿದ ನಂತರ ಈ ಕಾರ್ಯಕ್ರಮವು ದಾಖಲೆ ನಿರ್ಮಿಸಿತೆ ಅಥವಾ ಇಲ್ಲವೆ ಎಂಬುದು ತಿಳಿಯಲಿದೆ. ಅಂದಹಾಗೆ ಈ ಕಾರ್ಯಕ್ರಮವು ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ನಡೆದಿದೆ.












Click it and Unblock the Notifications