'ಸಿದ್ದರಾಮಯ್ಯ ನೀವು ಹುಟ್ಟಿದ್ದು ಮೈಸೂರಲ್ಲಾ ಅಥವಾ ಲಾಹೋರ್ ನಲ್ಲಾ?'
ಬೆಳಗಾವಿ, ನವೆಂಬರ್ 7: ವಿರೋಧದ ನಡುವೆಯೂ ಟಿಪ್ಪು ಜಯಂತಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಳಗಾವಿ ಗ್ರಾಮೀಣ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಟಿಪ್ಪು ಜಯಂತಿ ವಿರೋಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಭಜರಂಗದಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಜಯ್ ಪಾಟೀಲ್, "ಸಿದ್ದರಾಮಯ್ಯ ನೀವು ಮೈಸೂರಿನಲ್ಲಿ ಹುಟ್ಟಿದ್ದೀರಾ? ಅಥವಾ ಪಾಕಿಸ್ತಾನದ ಲಾಹೋರನಲ್ಲಿ ಹುಟ್ಟಿದ್ದೀರಾ?' ಹಿಂದೂಗಳ ಭಾವನೆಗೆ ಧಕ್ಕೆ ತಂದು ಟಿಪ್ಪು ಜಯಂತಿ ಆಚರಿಸಿದರೆ, ಸಿಎಂ ಸಿದ್ದರಾಮಯ್ಯ ಯಾರವ? ಎಂದು ಕೇಳಬೇಕಾಗುತ್ತದೆ' ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡುವುದು ತಪ್ಪಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಕಿಡಿಕಾರಿದರು.
'ಟಿಪ್ಪು ಜಯಂತಿಯ ದಿನ ಎಲ್ಲರ ಮನೆ ಮುಂದೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಪೂಜೆ ಮಾಡೋಣ' ಎಂದು ಪಾಟೀಲ್ ಕರೆ ನೀಡಿದರು.












Click it and Unblock the Notifications