ಸರ್ಕಾರಿ ಆಸ್ತಿಯನ್ನೇ ಮಾರಿಕೊಂಡ ಅಧಿಕಾರಿಗಳು
ಬೆಳಗಾವಿ, ಡಿಸೆಂಬರ್ 01 : ಸರ್ಕಾರದ ಆಸ್ತಿ ಕಾಪಾಡಬೇಕಾದ ಕಂದಾಯ ಇಲಾಖೆ ಅಧಿಕಾರಿಗಳೆ ಸರ್ಕಾರಕ್ಕೆ ಸೇರಿದ ಆಸ್ತಿಯನ್ನು ಮತ್ತೊಬ್ಬರ ಹೆಸರಿಗೆ ಪಹಣಿಪತ್ರ ತಯಾರಿಸಿ ಮಾರಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಆಗಿರುವುದಿಷ್ಟು, 1976 ರಲ್ಲಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ್ ಗ್ರಾಮ ಹಿಡಕಲ್ ಜಲಾಶಯ ಹಿನ್ನಿರಿನಲ್ಲಿ ಮುಳಗಡೆಯಾಗಿದೆ. ಮುಳುಗಡೆಯಾದ ಜಮೀನಿನ ರೈತರಿಗೆ ಹಣ ಸಂದಾಯ ಮಾಡಿ ಆಸ್ತಿ ಪತ್ರದಲ್ಲಿ ಸರ್ಕಾರದ ಆಸ್ತಿ ಎಂದು ಸಮೂದಿಸಿಕೊಂಡಿದೆ.
ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಹಣದ ದಾಹಕ್ಕೆ ಸರಕಾರದ ಹೆಸರಲ್ಲಿರುವ 4 ಕೋಟಿ ಬೆಲೆಬಾಳುವ 31 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಪಡೆದು ಜಮೀನುಗಳನ್ನು ಪಹಣಿಪತ್ರಗಳನ್ನು ಖಾಸಗಿಯವರ ಹೆಸರಿಗೆ ಮಾಡಿಕೊಟ್ಟುಬಿಟ್ಟಿದ್ದಾರೆ. ಈ ವಿಷಯ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವರ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.

ಯಾವುದೇ ಸರ್ಕಾರಿ ಆದೇಶಗಳಿಲ್ಲದೆ ಒಂದೇ ಕುಟುಂಬದ ಏಳು ಜನರಿಗೆ ಆಸ್ತಿ ವರ್ಗಾವಣೆಯಾಗಿದೆ. ಈ ವಿಷಯವಾಗಿ ಹುಕ್ಕೆರಿ ತಾಲೂಕಿನ ತಹಶಿಲ್ದಾರ ಕಛೇರಿಯಲ್ಲಿ ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಕೇಳಿದರೆ. ಇದಕ್ಕೆ ಸಂಬಂದ ಪಟ್ಟ ಯಾವದೇ ಆದೇಶ ಪ್ರತಿಗಳು ನಮ್ಮಲ್ಲಿ ಲಭ್ಯವಿಲ್ಲ ಡೈರಿ ನಂಬರ 1049 ಮಾತ್ರ ಲಭ್ಯವಿದೆ ಎಂಬ ಉತ್ತರ ದೊರೆತಿದೆ.
ಈ ಜಮೀನಿನ ಹಸ್ತಾಂತರ ಹಿಡಕಲ್ ಜಲಾಶಯದ ಮುಳುಗಡೆ ಸಂಬಂಧ ಪಟ್ಟಿರಿವುದರಿಂದ ನೀವು ಹಿಡಕಲ ಜಲಾಷಯದ ಮುಳುಗಡೆ ಕುಟುಂಬಗಳ ಮಾಹಿತಿಯನ್ನು ವಿಶೇಷ ಭೂ ಸ್ವಾದೀನ ಅಧಿಕಾರಿಗಳು ಹಿಡಕಲ್ ಡ್ಯಾಂ ಇವರಿಂದ ಪಡೆಯಬಹುದಾಗಿದೆ. ಎಂದು ತಿಳಿಸಿ ಕೈ ತೊಳೆದು ಕೊಂಡಿದ್ದಾರೆ. ಭೂಸ್ವಾದೀನ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದ್ದಕ್ಕೆ ಈ ಜಮೀನಿನ ಕುರಿತ ಆದೇಶ ಪತ್ರಗಳು ಗೆದ್ದಲು ಹುಳುಗಳು ತಿಂದು ನಾಶವಾಗಿವೆ ಎಂದು ಉತ್ತರಿಸಿದ್ದಾರೆ. ಅಧಿಕಾರಿಗಳ ಈ ಉತ್ತರ ಭ್ರಷ್ಟಾಚಾರದ ಅನುಮಾನವನ್ನು ದಟ್ಟವಾಗಿಸಿದೆ.
ಆದರೆ 20-11-1976 ಭೂಮಿಪಡೆಯುವ ಫಲಾನಿಭವಿಗಳ ಪಟ್ಟಿಯಲ್ಲಿ ಈ 7 ಜನರ ಹೆಸರುಗಳೇ ಇರಲಿಲ್ಲ. ಹಾಗಾದರೆ ಈ ಒಂದೆ ಕುಟುಂಬದ ವ್ಯಕ್ತಿಗಳ ಹೆಸರು ಎಲ್ಲಿಂದ ಬಂದಿದೆ ಅಂತಾ ಆರ್.ಟಿ.ಐ ಕಾರ್ಯಕರ್ತ ಭೀಮಪ್ಪಾ ಗಡಾದ್ ಅವರ ಪ್ರಶ್ನೆ. ಉನ್ನತಾಧಿಕಾರ ತನಿಖೆ ನಂತರವೇ ಸತ್ಯ ಬಯಲಾಗಲಿದೆ.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications