ಮಾಜಿ ಸಚಿವ ಓಂ ಪ್ರಕಾಶ್ ಕಣಗಲಿ ನಿಧನ
ಬೆಳಗಾವಿ, ನವೆಂಬರ್ 6: ಮಾಜಿ ಸಚಿವ ಓಂ ಪ್ರಕಾಶ್ ಕಣಗಲಿ ಅವರು ಮಂಗಳವಾರ ಬೆಳಗಿನ ಜಾವ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ.
ಉಪಚುನಾವಣೆ ಫಲಿತಾಂಶ LIVE: ಏನಾಗುತ್ತೆ ಐದು ಕ್ಷೇತ್ರಗಳ ಹಣೆಬರಹ?
ಸತತ 8 ಸಲ ಲೋಕಸಭೆಗೆ ಆಯ್ಕೆಯಾಗಿ ದಾಖಲೆ ಸ್ಥಾಪಿಸಿದ್ದ ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಅವರ ಪುತ್ರರಾಗಿದ್ದಾರೆ. ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. ಓಂ ಪ್ರಕಾಶ್ ಅವರು ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಅವರು ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರಿಗೆ ಒಮ್ಮೆ ಹೃದಯ ಶಸ್ತ್ರಚಿಕಿತ್ಸೆಯೂ ಕೂಡ ಆಗಿತ್ತು. ಶಂಕರಾನಂದ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಬೋಫೋರ್ಸ್ ಹಗರಣದಲ್ಲಿ ಕ್ಲೀನ್ ಚಿಟ್ ನೀಡಿದ್ದರು.
Comments
English summary
Former minister Omprakash Kanagali has died in Belgaum on Tuesday. He was 68 years old.
Story first published: Tuesday, November 6, 2018, 7:51 [IST]