ಸಂಕ್ರಮಣದ ದಿನವೇ ಭಾರಿ ದುರಂತ, ಐವರ ಭೀಕರ ಮರಣ
ಬೆಳಗಾವಿ, ಜನವರಿ 15: ಸಂಕ್ರಮಣದ ಬೆಳಗ್ಗೆಯೇ ಘಟಪ್ರಭಾ ಎಡದಂಡೆ ಕಾಲುವೆಗೆ ಕಾರು ಬಿದ್ದು ಐವರು ಮೃತಪಟ್ಟಿರುವ ಘಟನೆ ನಡೆದಿದೆ.
ಮಂಡ್ಯ ಭೀಕರ ದುರಂತ: ದುರಂತದಲ್ಲಿ ಮೃತಪಟ್ಟ 25 ಜನರ ಹೆಸರುಗಳು
ಕಾರಿನಲ್ಲಿದ್ದ ಆರು ಮಂದಿ ಪೈಕಿ ಐದು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಕಾರು ಚಾಲಕ ಅಡಿವೇಪ್ಪ ಮಾಳಗಿ ಈಜಿ ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ, ಫಕೀರವ್ವ ಪೂಜೇರಿ(29), ಹನುಮಂತ ಪೂಜೇರಿ(60) ಲಗಮಣ್ಣ ಪೂಜೇರಿ(38) ಪಾರವ್ವ ಪೂಜೇರಿ(50) ಲಕ್ಷ್ಮೀ ಪೂಜೇರಿ(40) ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರಿಳಿ ದುರಂತವನ್ನು ತಂದೊಡ್ಡಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪುರ್ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕಾಲುವೆಗೆ ಉರುಳಿದ್ದ ಕಾರನ್ನು ಮೇಲೆತ್ತಲು ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Comments
English summary
Five persons were died after car over turned in to Ghataprabha left canal near Saundatti of Belgaum district on Tuesday early morning.
Story first published: Tuesday, January 15, 2019, 10:18 [IST]