ಬೆಳಗಾವಿ: ಮತದಾನಕ್ಕೆ ಬಂದು ಪರದಾಡಿದ ದೈಹಿಕ ಅಸ್ವಸ್ಥ ಮಹಿಳೆ
ಬೆಳಗಾವಿ, ಮೇ 07: ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಮತದಾನವು ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮತದಾನ ದಿನ ಒಂದಲ್ಲಾ ಒಂದು ಕಡೆಗಳಲ್ಲಿ ಮತಗಟ್ಟೆಗಳು, ಮತದಾರರು ನಾನಾ ವಿಷಯಗಳಿಂದ ಮುನ್ನೆಲೆ ಬರುತ್ತಾರೆ. ಬೆಳಗಾವಿಯಲ್ಲೂ ಅಂತದ್ದೆ ಘಟನೆ ನಡೆದಿದೆ.
ಹೌದು, ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾನದ ಹಕ್ಕು ಚಲಾಯಿಸುಲು ಮಹಿಳೆಯೊಬ್ಬರು ಆಗಮಿಸಿದ್ದರು. ಈ ಮಹಿಳೆ ದೈಹಿಕವಾಗಿ ಅಸ್ವಸ್ಥಳಾಗಿದ್ದರು. ಮತಗಟ್ಟೆಯಲ್ಲಿ ಅನಾರೋಗ್ಯಕ್ಕೆ ಒಳಗಾದವರಿಗೂ ಸೂಕ್ತ ಮೂಲಸೌಕರ್ಯ ಇಲ್ಲದ್ದನ್ನು ಕಂಡ ಆ ಮಹಿಳೆ ಪರಡಾಡಿದರು.

68 ವರ್ಷ ವಯಸ್ಸಿನ ಆಶಾ ಪಾಟೀಲ್ ಅವರಿಗೆ ಅಪಘಾತದಲ್ಲಿ ಕೈ ಹಾಗೂ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಹೀಗಿದ್ದರೂ ಸಹಿ ಮತದಾನ ತಪ್ಪಿಸಬಾರದೆಂಬ ಸಾಮಾಜಿಕ ಜವಾಬ್ದಾರಿಯಿಂದ ಈ ಮಹಿಳೆ ಮತಗಟ್ಟಿಗೆ ಆಗಮಿಸಿದ್ದರು. ಆದರೆ ಅವರಿಗೆ ವ್ಹೀಲ್ ಚೇರ್ (ಗಾಲಿ ಕುರ್ಚಿ) ಸೌಲಭ್ಯ ಸಿಗಲಿಲ್ಲ. ಎಷ್ಟೋ ಹೊತ್ತು ಮತಗಟ್ಟೆ ಮುಂದೆಯೇ ಅವರು ನಿಂತು ಸಂಕಟ ಅನುಭವಿಸಿದರು.
ನೋವಿನ ನಡುವೆಯು ಮತದಾನ ಮಾಡಿದ ಮಹಿಳೆ
ದೈಹಿಕವಾಗಿ ಅಸ್ವಸ್ಥಳಾದ ತಾನು ಯಾಕಾದರೂ ಮತ ಹಾಕಲು ಬಂದೆನೋ ಎಂದು ನೋವು ಅನುಭವಿಸಿದರು. ಈ ಘಟನೆ ಬೆಳಗಾವಿ ಲೋಕಸಭಾ ಕ್ಷೇತ್ರದ ವಿಶ್ವೇಶ್ವರಯ್ಯ ನಗರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ 26 ರಲ್ಲಿ ನಡೆದಿದೆ.
ಕೆಲ ಕಾಲ ಕಾದರೂ ವ್ಹೀಲ್ ಚೇರ್ ಸಿಗದ ಹಿನ್ನೆಲೆಯಲ್ಲಿ ಕೊನೆ ಅವರೇ ತಮ್ಮ ಮಗಳ ಸಹಾಯದಿಂದ ನಿಧಾನವಾಗಿ ನಡೆದು ಮತಗಟ್ಟೆ ಒಳಗೆ ಬಂದರು. ನಂತರ ಮತದಾನ ಮಾಡಿ ಶಾಹಿ ಗುರುತು ಹಾಕಿಸಿಕೊಂಡು ಮಗಳ ಸಹಾಯದಿಂದ ಹೊರ ನಡೆದರು.
ಅವ್ಯವಸ್ಥೆಗೆ ಸ್ಥಳೀಯರ ಅಸಮಾಧಾನ
ಸಾಮಾನ್ಯವಾಗಿ ಮತಗಟ್ಟೆಗಳಲ್ಲಿ ವಯೋವೃದ್ಧರಿಗೆ, ಅನಾರೋಗ್ಯ ಪೀಡಿತರು ಮತದಾನಕ್ಕೆ ಬರುವ ಕಾರಣಕ್ಕೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಮಾಡಲಾಗಿರುತ್ತದೆ. ಆದರೆ ಬೆಳಗಾವಿ ಈ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ 26 ರ ಮತಗಟ್ಟೆಯಲ್ಲಿ ವ್ಯವಸ್ಥೆ ಇಲ್ಲದ್ಧಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications