ಎಸ್ಕಾರ್ಟ್ ವಾಹನದಲ್ಲಿ ಮಹಿಳೆಗೆ ಮಾತ್ರೆ ತಲುಪಿಸಿದ ಉಪ ಸಭಾಪತಿ

ಬೆಳಗಾವಿ, ಏಪ್ರಿಲ್ 18: ದೇಶಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಈ ನಡುವೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಅಗತ್ಯ ಔಷಧಿ, ಚಿಕಿತ್ಸೆ ಸಿಗದೇ ಪರದಾಡುತ್ತಿರುವ ಸಂಗತಿಗಳೂ ನಡೆಯುತ್ತಿವೆ.

ಹೀಗೆ ಮಾತ್ರೆ ಸಿಗದೇ ಪರದಾಡುತ್ತಿದ್ದ ಮಹಿಳೆಯೊಬ್ಬರಿಗೆ ಉಪ ಸಭಾಪತಿ ಆನಂದ ಮಾಮನಿ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಮಾತ್ರೆಗಳನ್ನು ತಲುಪಿಸಿದ್ದಾರೆ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದ ಗೀತಾ ಬಡಿಗೇರ ಎಂಬ ಮಹಿಳೆ ಮೂರ್ಛೆ ರೋಗದಿಂದ ಬಳಲುತ್ತಿದ್ದಾರೆ. ಲಾಕ್ ಡೌನ್ ವಿಧಿಸಿದ್ದರಿಂದ ಔಷಧಿ ಸಿಗದೇ ಅವರು ಪರದಾಡುತ್ತಿದ್ದರು. ಔಷಧಿ ಸಿಗದೆ ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಈ ಮಹಿಳೆಯ ವಿಷಯ ತಿಳಿದ ಆನಂದ ಮಾಮನಿ ಅವರು ಸವದತ್ತಿಯಿಂದ ಔಷಧಿಯನ್ನು ತಲುಪಿಸಿದ್ದಾರೆ.

Ananda Mamani Sent Medicine Through Escort Vehicle To Women In Kitturu

ಕಿತ್ತೂರಿನ ಬಿಜೆಪಿ ಮುಖಂಡ ಹನುಮಂತ ಕೊಟಬಾಗಿ ಹಾಗೂ ಪಿಎಸ್ಐ ಕುಮಾರ ಹಿತ್ತಲಮನಿ ಮೂಲಕ ಗೀತಾ ಅವರಿಗೆ ಔಷಧಿಯನ್ನು ತಲುಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+