ಬೆಳಗಾವಿಯಲ್ಲಿ ಮ್ಯಾರಥಾನ್ : ಪೋಲಿಯೋ ವಿರುದ್ಧ ಓಡಿ
ಬೆಳಗಾವಿ, ಫೆ. 13: ಪೋಲಿಯೋ ನಿರ್ಮೂಲನೆ ಉದ್ದೇಶದಿಂದ ವೇಣುಗ್ರಾಮ ರೋಟರಿ ಕ್ಲಬ್ ನಗರದಲ್ಲಿ ಫೆ. 22ರಂದು 5ನೇ 'ಸಿಡ್ವಿನ್ ಬೆಳಗಾವಿ ಮ್ಯಾರಥಾನ್ 2015' ಆಯೋಜಿಸಲಾಗಿದೆ. "ಭಾರತವನ್ನು ಪೋಲಿಯೋ ಮುಕ್ತವಾಗಿರಿಸಿ" ಎಂಬ ಸಂದೇಶ ಕೊಡುವುದು ಈ ಮ್ಯಾರಥಾನ್ ಉದ್ದೇಶ.
ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಸಿಪಿಎಡ್ ಮೈದಾನದಲ್ಲಿ ಫೆ. 22ರಂದು ಬೆಳಗ್ಗೆ 7 ಗಂಟೆಗೆ ಮ್ಯಾರಥಾನ್ ಆರಂಭವಾಗಲಿದೆ. ಸುಮಾರು 9 ಕಿ.ಮೀ. ದೂರ ಓಡಲಾಗುವುದು. ವಿವಿಧ ಆರು ಗುಂಪುಗಳಿದ್ದು, ಸುಮಾರು 5,000 ಜನ ಭಾಗವಹಿಸುವ ನಿರೀಕ್ಷೆಯಿದೆ. ವಿಜೇತರಿಗೆ ಒಟ್ಟು ಒಂದು ಲಕ್ಷ ರು. ಮೊತ್ತದ ಬಹುಮಾನ ನೀಡಲಾಗುವುದು.

ಸ್ಪರ್ಧಿಗಳ ವಯಸ್ಸಿಗೆ ತಕ್ಕಂತೆ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. 'ಮುಕ್ತ' ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. 10ಕ್ಕಿಂತ ಕಡಿಮೆ ವಯಸ್ಸಿನವರು, 10 ರಿಂದ 14 ನೇ ವಯಸ್ಸಿನವರು, 14ರಿಂದ 16ನೇ ವಯಸ್ಸಿನವರು, 40 ರಿಂದ 50ನೇ ವಯಸ್ಸಿನವರು ಹಾಗೂ 60ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವಿಶೇಷ ವಿಭಾಗ ರಚಿಸಲಾಗಿದೆ. [ಯುವಕರ ಸೆಳೆದ ಮಿಡ್ ನೈಟ್ ಮ್ಯಾರಥಾನ್]
ಈ ವರ್ಷವೂ ಮ್ಯಾರಥಾನ್ಗೆ SIDVIN ಸಂಸ್ಥೆ ಪ್ರಾಯೋಜನ ನೀಡುತ್ತಿದೆ. ಮ್ಯಾರಥಾನ್ ದಿನ ಬೆಳಗ್ಗೆ 6.30ಕ್ಕಿಂತ ಮೊದಲೇ ಬಂದವರಿಗೆ ಉಚಿತವಾಗಿ ಟಿ ಶರ್ಟ್, ನ್ಯಾಪ್ಕಿನ್, ಪೆನ್ ಮತ್ತು ನೋವು ನಿವಾರಕ ಔಷಧ ನೀಡಲಾಗುವುದು.
ಆಸಕ್ತರು ನಾರ್ವೇಕರ್ ಗಲ್ಲಿಯ ಡಿ.ಬಿ. ಪಾಟೀಲ ಫೋಟೊ ಸ್ಟುಡಿಯೋ, ಶಿವಾಜಿ ರಸ್ತೆಯಲ್ಲಿರುವ ರೋಹಿತ್ ಮೆಡಿಕಲ್ಸ್, ಗೊಂಧಳ್ಳಿ ಗಲ್ಲಿಯ ಆಲ್ಶಿಯಸ್ ಫಾರ್ಮಾಸ್ಯುಟಿಕಲ್ಸ್, ಮರಾಠಾ ಮಂದಿರದ ಎದುರು ಇರುವ ರುಕ್ಮಿಣಿ ಎಂಟರ್ಪ್ರೈಸಿಸ್ನಲ್ಲಿ ಸಿಗುವ ಫಾರ್ಮ್ ತುಂಬಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಿ.ಬಿ. ಪಾಟೀಲ - 9448963874 ಅವರನ್ನು ಸಂಪರ್ಕಿಸಬಹುದು.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications