ಬಿಬಿಎಂಪಿಯನ್ನು 5 ಭಾಗ ಮಾಡಿ, ಬಿಎಸ್ ಪಾಟೀಲ್ ಸಮಿತಿ ವರದಿ
ಬೆಂಗಳೂರು, ಜುಲೈ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜನೆ ಮಾಡಬೇಕು ಎಂದು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಸಚಿವ ಎಸ್.ಆರ್.ಪಾಟೀಲ್ ನೇತೃತ್ವದ ಸೆಲೆಕ್ಟ್ ಕಮಿಟಿ ವರದಿ ಬಂದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸೋಮವಾರ
ವಿಧಾನಸೌಧದಲ್ಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರಿಗೆ
ಬಿಬಿಎಂಪಿ
ವಿಭಜನೆ
ಕುರಿತು
ವರದಿ
ನೀಡಲು
ಸರ್ಕಾರ
ರಚನೆ
ಮಾಡಿದ್ದ
ಬಿ.ಎಸ್.ಪಾಟೀಲ್
ನೇತೃತ್ವದ
ಸಮಿತಿ
ತನ್ನ
ಅಂತಿಮ
ವರದಿಯನ್ನು
ನೀಡಿತು.
5
ಪಾಲಿಕೆ
ರಚನೆ
ಮಾಡಿ,
ಐವರು
ಮೇಯರ್
ಮತ್ತು
ಉಪ
ಮೇಯರ್
ಸ್ಥಾನ
ರಚನೆ
ಮಾಡುವಂತೆ
ಸಮಿತಿ
ಶಿಫಾರಸು
ಮಾಡಿದೆ.
[ಬಿಬಿಎಂಪಿಯನ್ನು
3
ಅಥವ
5
ಭಾಗ
ಮಾಡಿ]
ಬೆಂಗಳೂರು ನಗರದ ಮುಂದಿನ 25 ವರ್ಷಗಳ ಬೆಳವಣಿಗೆಯನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ವರದಿಯನ್ನು ಸಿದ್ಧಪಡಿಸಲಾಗಿದೆ. ವಾರ್ಡ್ ಸಮಿತಿಗಳ ರಚನೆಗೂ ಶಿಫಾರಸು ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದರು. [ಬಿಬಿಎಂಪಿ ವಿಭಜನೆ ಅನಿವಾರ್ಯ]
ಸೆಲೆಕ್ಟ್ ಕಮಿಟಿ ವರದಿ ಬರಲಿ : ವರದಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶೀಘ್ರದಲ್ಲೇ ಎಸ್.ಆರ್.ಪಾಟೀಲ್ ನೇತೃತ್ವದ ಸೆಲೆಕ್ಟ್ ಕಮಿಟಿ ವರದಿ ಸಲ್ಲಿಕೆ ಮಾಡಲಿದೆ. ಆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 3 ಅಥವ 5 ಪಾಲಿಕೆಯಾಗಿ ವಿಭಜನೆ ಮಾಡುವುದು ಸೂಕ್ತ ಎಂದು ಕೆಪಿಸಿಸಿ ರಚನೆ ಮಾಡಿದ್ದ ಸಮಿತಿಯೂ ವರದಿ ನೀಡಿತ್ತು. ಪಕ್ಷದ ಹಿರಿಯ ನಾಯಕ ಬಿ.ಎಲ್.ಶಂಕರ್ ನೇತೃತ್ವದ ಸಮಿತಿ ತನ್ನ ಅಂತಿಮ ವರದಿಯನ್ನು ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಸಲ್ಲಿಸಿತ್ತು.
ಅಂದಹಾಗೆ ಸರ್ಕಾರ ರಚನೆ ಮಾಡಿದ್ದ ಮೂವರು ಸದಸ್ಯರ ಸಮಿತಿಯಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್, ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್ನ ಸದಸ್ಯ ರವಿಚಂದರ್ ಇದ್ದಾರೆ.