ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ
ಬೆಂಗಳೂರು, ಅಕ್ಟೋಬರ್ 16: ಹೊಸ ಗಣವೇಷ ತೊಟ್ಟು ಪಥ ಸಂಚಲನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು
35
ವರ್ಷ
ವಯಸ್ಸಿನ
ರುದ್ರೇಶ್
ಎಂದು
ಗುರುತಿಸಲಾಗಿದೆ.
ರುದ್ರೇಶ್
ಅವರು
ಕಾಮರಾಜ
ರಸ್ತೆಯಲ್ಲಿ
ಬರುವಾಗ
ದುಷ್ಕರ್ಮಿಗಳು
ಮಾರಕಾಸ್ತ್ರಗಳಿಂದ
ಹಲ್ಲೆ
ನಡೆಸಿ
ಕೊಚ್ಚಿ
ಕೊಂದಿದ್ದಾರೆ.
ರುದ್ರೇಶ್ ಅವರ ಶವವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
Comments
English summary
Shivajinagar: A 35 year old RSS activist Rudresh was hacked to death today at shivajinagar. Rudresh was returning after finishing PathSanchalan in new Ganavesha. Commercial street police have booked the case and are investigating.