ಜನರಲ್ಲಿ ಶಕ್ತಿ ತುಂಬುವ ಸಿಂಕ್ರೋಶಕ್ತಿ, ಕಾರ್ತಿಕಾ ವಾರೆ ವಾಹ್!
ಬೆಂಗಳೂರು, ನವೆಂಬರ್ 11: ವ್ಯಕ್ತಿತ್ವ ವಿಕಸನ, ಬೆಂಗಳೂರು, ನಾಡು ನುಡಿ ಪ್ರೀತಿಯನ್ನು ಹೆಚ್ಚಿಸಲು ಸಂಗೀತದ ಮಾರ್ಗವನ್ನು ಸಿಂಕ್ರೋಶಕ್ತಿ ಸಂಸ್ಥೆ ಅನುಸರಿಸುತ್ತಿದೆ. ಬೆಂಗಳೂರಿನ ಯುವ ಪ್ರತಿಭೆ ಕಾರ್ತಿಕಾ ನಾಯರ್ ಈ ಸಂಸ್ಥೆ ಮೂಲಕ ವಿಡಿಯೋ ನಿರ್ಮಿಸಿ ಜನರಲ್ಲಿ ಗೆಲುವಿನ ಭಾವನೆ ಮೂಡಿಸುತ್ತಿದ್ದಾರೆ. ಏನಿದು ಸಿಂಕ್ರೋಶಕ್ತಿ, ಯಾರೀಕೆ ಕಾರ್ತಿಕಾ ನಾಯರ್ ಬನ್ನಿ ನೋಡೋಣ..
25 ವರ್ಷ ವಯಸ್ಸಿನ ಕಾರ್ತಿಕಾ ನಾಯರ್ ಅವರು ಜನರಲ್ಲಿರುವ ಧನಾತ್ಮಕ ಶಕ್ತಿಯನ್ನು ಜಾಗೃತಗೊಳಿಸಿ ಯಶಸ್ಸಿನ ಹಾದಿ ಹಿಡಿಯುವಂತೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.

ಸಿಂಕ್ರೋಶಕ್ತಿ ಎಂಬ ಬ್ರ್ಯಾಂಡ್ ಮೂಲಕ ಯೂಟ್ಯೂಬ್ ವಿಡಿಯೋ, ವೆಲ್ ನೆಸ್ ತರಬೇತಿ, ಸಬಲೀಕರಣ ತರಬೇತಿ ನೀಡುತ್ತಿದ್ದಾರೆ. ವ್ಯಕ್ತಿತ್ವ ವಿಕಸನದ ಹೊಸ ಬಗೆಯ ಈ ವಿಧಾನದಲ್ಲಿ ಸಂಗೀತವೇ ಪ್ರಧಾನವಾಗಿದೆ.
ಭಾಷಣಗಳಿಗಿಂತ ಸಂಗೀತ ಜನರ ಮೇಲೆ ಪ್ರಭಾವ ಬೀರಬಲ್ಲದು, ಇಡೀ ವಿಶ್ವವನ್ನು ಭಾಷೆ ರಹಿತವಾಗಿ ಸಂಗೀತವನ್ನು ಬಳಸಬಹುದು. ಮಾನಸಿಕ ಖಿನ್ನತೆಯಿಂದ ಹಿಡಿದು ಎಲ್ಲಾ ಬಗೆಯ ಸಮಸ್ಯೆಗಳಿಗೆ ಪರಿಹಾರ ಸಂಗೀತದಿಂದ ಸಾಧ್ಯ ಎಂದು ಕಾರ್ತಿಕಾ ಹೇಳಿದ್ದಾರೆ.
ವೀಲಿನ್ ಬಾಕ್ಸ್ ಪ್ರೊಡೆಕ್ಷನ್ಸ್ ಮಾರ್ಟಿನಿಕ್ಯೂ ವಿಡಿಯೋಗೆ ಸಾಹಿತ್ಯ, ಸಂಗೀತವನ್ನು ಕಾರ್ತಿಕಾ ಅವರೇ ಮಾಡಿದ್ದಾರೆ. ಮಹೇಶ್ ಗೌಡ ಅವರು ವಿಡಿಯೋವನ್ನು ನಿರ್ದೇಶಿಸಿದ್ದಾರೆ.
ಸಿಂಕ್ರೋಶಕ್ತಿಯ ಲವ್ ಯುನೈಟ್ಸ್ ಅಸ್ ವಿಡಿಯೋ ಆಲ್ಬಮ್ ನಲ್ಲಿ 12 ಗೀತೆಗಳು ರಿಲೀಸ್ ಆಗಲಿದೆ. ಇದರಲ್ಲಿ 6 ವಿಡಿಯೋ ಗೀತೆಗಳಿರುತ್ತವೆ.
ಜನವರಿ 2017ರಲ್ಲಿ ಜನವರಿಯಲ್ಲಿ ನಡೆಯಲಿರುವ 'ಗೋವಾ ಸನ್ ಸ್ಪಾಶ್' ನ reggae ಫೆಸ್ಟ್ ನಲ್ಲಿ ಭಾರತದ ಅಧಿಕೃತ ಎಂಟ್ರಿಯಾಗಿ ಸಿಂಕ್ರೋಶಕ್ತಿ ಭಾಗವಹಿಸಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ











Click it and Unblock the Notifications