ಜೈಲಿನಿಂದ ಬೇಲ್ ತನಕ: ಗಾಲಿ ಜನಾರ್ದನ ರೆಡ್ಡಿ ಟೈಮ್ ಲೈನ್
ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈಗ್ಗೆ ಮೂರುವರೆ ವರ್ಷಗಳ ಕೆಳಗೆ ಬೆಳ್ಳಂಬೆಳ್ಳಗ್ಗೆ ಬಳ್ಳಾರಿಯಲ್ಲಿ ಅರೆಸ್ಟ್ ಆಗಿದ್ದು ನಿಮಗೆಲ್ಲ ನೆನಪಿರಬಹುದು. ಬಳ್ಳಾರಿಯಿಂದ ಹೈದರಾಬಾದ್ ನಂತರ ಬೆಂಗಳೂರಿನ ಜೈಲಿನಲ್ಲಿದ್ದ ರೆಡ್ಡಿ ಈಗ ಸ್ವತಂತ್ರ ಹಕ್ಕಿಯಾಗಿದ್ದಾರೆ. ಆದರೆ, ಕೇಸುಗಳಿಂದೇನೂ ದೋಷ ಮುಕ್ತರಾಗಿಲ್ಲ.
2011ರ ಸೆ.5ರಂದು ಸೋಮವಾರ ಮುಂಜಾನೆ ಹೈದರಾಬಾದಿನಿಂದ ಬಂದಿದ್ದ ಲಕ್ಷ್ಮಿನಾರಾಯಣ ಅವರ ಸಿಬಿಐ ತಂಡ ಮಾಜಿ ಸಚಿವ ಜನಾರ್ದನ ರೆಡ್ಡಿ ಹಾಗೂ ಅವರ ಅಳಿಯ ಬಿ. ಶ್ರೀನಿವಾಸ ರೆಡ್ಡಿ ಅವರ ಒಡೆತನದ ಓಬಳಾಪುರಂ ಗಣಿ ಕಂಪನಿ ಹಾಗೂ ಮನೆ ಮೇಲೆ ದಾಳಿ ನಡೆಸಿತ್ತು. ಹಠಾತ್ ದಾಳಿಯಿಂದ ಕಂಗಾಲಾದ ರೆಡ್ಡಿಗೆ ಈಗ 2015ರ ಜ.23ರ ಮುಸ್ಸಂಜೆ ವೇಳೆಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. [ಜೈಲಿನಿಂದ ಹೊರ ಬಂದ ಗಾಲಿ ರೆಡ್ಡಿ ಬೆಂಜ್ ನಲ್ಲಿ ಹೊರಟ್ರು]
2011ರಲ್ಲಿ
ಹೈದರಾಬಾದಿಗೆ
ರವಾನೆಯಾಗಿದ್ದರಿಂದ
ಹಿಡಿದು
ಬಾಡಿ
ವಾರೆಂಟ್
ಮೇಲೆ
ಪರಪ್ಪನ
ಅಗ್ರಹಾರ
ಜೈಲು
ಸೇರಿದ್ದು,
2015ರ
ಜ.20ರಂದು
ಸುಪ್ರೀಂಕೋರ್ಟ್
ಜಾಮೀನು
ನೀಡಿದ್ದು,
ಶುಕ್ರವಾರ(ಜ.23)ರಂದು
ಜೈಲಿನಿಂದ
ಹೊರ
ಬಂದು
ಪಾರಿಜಾತ
ಅಪಾರ್ಟ್ಮೆಂಟ್
ಸೇರುವ
ತನಕ
ನಡೆದ
ಘಟನಾವಳಿಗಳು
ಇಲ್ಲಿವೆ...
2011
ಸೆ.5
ರಂದು
*
ಮಾಜಿ
ಸಚಿವ
ಜನಾರ್ದನ
ರೆಡ್ಡಿ
ಹಾಗೂ
ಓಎಂಸಿ
ಎಂಡಿ
ಬಿ.ವಿ
ಶ್ರೀನಿವಾಸ್
ಬಳ್ಳಾರಿ
ನಿವಾಸದ
ಮೇಲೆ
ದಾಳಿ.
*
6.40
ಕ್ಕೆ
ಜನಾರ್ದನ
ರೆಡ್ಡಿ
ಅವರ
ನೆಚ್ಚಿನ
ಹೆಲಿಕಾಪ್ಟರ್
ರುಕ್ಮಿಣಿಯನ್ನು
ವಶಪಡಿಸಿಕೊಂಡ
ಸಿಬಿಐ.
*
ಜನಾರ್ದನ
ರೆಡ್ಡಿ
ಹಾಗೂ
ಶ್ರೀನಿವಾಸ್
ಬಂಧನ.
ಬಿಳಿ
ಇನ್ನೋವಾ
ಕಾರಿನಲ್ಲಿ
ಹೈದರಾಬಾದಿನತ್ತ
ಪಯಣ.
*
7.00
ಕ್ಕೆ
ಬೆಂಗಳೂರಿನ
ರೆಡ್ಡಿ
ನಿವಾಸ
'ಪಾರಿಜಾತ'
ಮೇಲೂ
ಸಿಬಿಐ
ದಾಳಿ,
ದಾಖಲೆಗಳು
ವಶ.
*
ಗುಂತಕಲ್,
ಶಂಷಾಬಾದ್
ಮಾರ್ಗವಾಗಿ
ಹೈದರಾಬಾದಿನ
ನಾಂಪಲ್ಲಿ
ತಲುಪಿದ
ಸಿಬಿಐ
ತಂಡ
*
ಗಾಲಿ
ರೆಡ್ಡಿಯನ್ನು
ಜೈಲಿಗೆ
ತಳ್ಳಿದ
ನಾಂಪಲ್ಲಿ
ಸಿಬಿಐ
ವಿಶೇಷ
ಕೋರ್ಟ್
*
1988ರ
ಭ್ರಷ್ಟಾಚಾರ
ನಿಯಂತ್ರಣ
ಕಾಯ್ದೆ
13(2)
13(1)ಡಿ.
1926ರ
ಭಾರತೀಯ
ಅರಣ್ಯ
ಕಾಯ್ದೆ,
ಭಾರತೀಯ
ದಂಡ
ಸಂಹಿತೆ
ಕಲಂ
120b
420,
379,
411,
427
ಸೇರಿದಂತೆ
ಅನೇಕ
ಕಲಂಗಳಡಿ
ಗಾಲಿ
ರೆಡ್ಡಿ
ವಿರುದ್ಧ
ಚಾರ್ಜ್
ಶೀಟ್
ಸಲ್ಲಿಕೆ.
[ಚಿತ್ರಸುದ್ದಿ:
ಅಗ್ರಹಾರದಿಂದ
ಜರ್ಮನಿ
ಕಾರಿನಲ್ಲಿ
ಹೊರಬಂದ
ರೆಡ್ಡಿ]
2014
ಜ.23:
*
ಸುಪ್ರೀಂಕೋರ್ಟಿನಿಂದ
ಜಾಮೀನು
ಪ್ರತಿ
ಹೈದರಾಬಾದಿನ
ಕೋರ್ಟಿಗೆ
ತಲುಪಿತು.
*
ಮಧ್ಯಾಹ್ನದ
ವೇಳೆಗೆ
ಬೆಂಗಳೂರಿನ
ಪರಪ್ಪನ
ಅಗ್ರಹಾರ
ಜೈಲು
ತಲುಪಿತು.
*
ಜೈಲು
ಅಧೀಕ್ಷಕ
ಜಯಸಿಂಹ
ಅವರು
ಬಿಡುಗಡೆ
ಪ್ರಕ್ರಿಯೆ
ಆರಂಭಿಸುವ
ವೇಳೆಗೆ
ಜೈಲಿನ
ಸುತ್ತಾ
ಮುತ್ತಾ
ನೂರಾರು
ಜನ
ಅಭಿಮಾನಿಗಳು
ನೆರೆದಿದ್ದರು.
*
ಯಮಗಂಡ
ಕಾಲ
ಕಳೆದುಕೊಂಡು
4.40ರ
ವೇಳೆಗೆ
ಜೈಲಿನಿಂದ
ಹೊರಬಂದ
ಗಾಲಿ
ರೆಡ್ಡಿ
ಅವರನ್ನು
ಬೆಂಜ್
ಕಾರಿನಲ್ಲಿ
ಕೂರಿಸಿಕೊಂಡು
ಶ್ರೀರಾಮುಲು
ಅವರು
ಮನೆ
ಕಡೆ
ಕರೆದುಕೊಂಡು
ಹೋದರು.
*
ಪಾರಿಜಾತ
ಅಪಾರ್ಟ್ಮೆಂಟ್
ಗೆ
ತೆರಳುವ
ಮುನ್ನ
ಸಿಐಡಿ
ಕಚೇರಿ
ಎದುರಿನ
ಗಣೇಶ
ದೇಗುಲಕ್ಕೆ
ಭೇಟಿ
ನೀಡಿದ
ಗಾಲಿ
ರೆಡ್ಡಿ.
*
ಗಾಲಿ
ರೆಡ್ಡಿ
ಅವರು
ಗೃಹ
ಪ್ರವೇಶಕ್ಕೆ
ಸೋಮಶೇಖರ
ರೆಡ್ಡಿ,
ಸುರೇಶ್
ಬಾಬು,
ಶ್ರೀರಾಮುಲು
ಸಾಥ್
ನೀಡಿದರು.