Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಮೋದಿ ಮಾಡಿದ ಭಾಷಣದ ಪೂರ್ಣಪಾಠ

ಬೆಂಗಳೂರು, ನ. 18 : ಬಿಜೆಪಿಯ ಬಹು ನಿರೀಕ್ಷಿತ 'ಭಾರತ ಗೆಲ್ಲಿಸಿ' ಸಮಾವೇಶ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಿತು. ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯದ ವಿವಿಧ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ಮೋಡಾಚ್ಛಾದಿತ ವಾತಾವರಣವಿದ್ದರೂ ಅರಮನೆ ಮೈದಾನದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನು ಉದ್ದೇಶಿಸಿ ಗುಜರಾತ್ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ.

ವೇದಿಕೆಯಲ್ಲಿ ವಿರಾಜಮಾನರಾಗಿರುವ ಆದರಣೀಯ ರಾಜನಾಥ್ ಸಿಂಗ್ ಜೀ, ಪ್ರಹ್ಲಾದ್ ಜೋಶಿಜೀ, ವೆಂಕಯ್ಯ ನಾಯ್ಡುಜೀ, ಥಾವರ್ ಚಂದ್ ಗೆಹ್ಲೋಟ್ ಜೀ, ಅನಂತ್ ಕುಮಾರ್ ಜೀ, ಪ್ರಹ್ಲಾದ್ ಜೋಶಿ, ಸದಾನಂದ ಗೌಡಾಜೀ, ಜಗದೀಶ್ ಶೆಟ್ಟರ್, ಭಾರತೀಯ ಜನತಾ ಪಕ್ಷದ ಎಲ್ಲಾ ವರಿಷ್ಠ ನಾಯಕರೇ, ಬೆಂಗಳೂರಿನ, ಕರ್ನಾಟಕದ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ, ಸಂತ ಬಸವೇಶ್ವರ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ನನ್ನ ಸತ್ಪ್ರಣಾಮಗಳು.

Full text of Narendra Modi speech in Bangalore

ಬಂಧು ಭಗಿನಿಯರೇ, ಇಂದು ನಾನು ಬೆಂಗಳೂರಿಗೆ ಬಂದಿದ್ದೇನೆ. ಮೊದಲಿಗೆ ವಿಜ್ಞಾನ ಜಗತ್ತಿನಲ್ಲಿ ಭಾರತಕ್ಕೆ ಗೌರವ ತಂದ ಪ್ರೊ. ಸಿ ಎನ್ ಆರ್ ರಾವ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತ ಕ್ರೀಡಾ ಕ್ಷೇತ್ರವನ್ನು ಉತ್ತುಂಗಕ್ಕೇರಿಸಿದ ಸಚಿನ್ ಗೂ ಭಾರತ ರತ್ನ ಪಡೆದಿದ್ದಕ್ಕೆ ಅಭಿನಂದನೆ.

ನಮ್ಮ ಬೆಂಗಳೂರು ಅಭಿವೃದ್ಧಿಯಲ್ಲಿ ಭಾರತದಲ್ಲಿ ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾನ ಗಳಿಸಿತ್ತು. ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ವಿದ್ಯುತ್ ಪಡೆದ ನಗರ ಬೆಂಗಳೂರು. ಇದು ಜ್ಞಾನದ ಶತಾಬ್ದಿ. ಇಂದು ಉನ್ನತ ಶಿಕ್ಷಣ, ಸೆಂಟರ್ ಫಾರ್ ಎಕ್ಸಲೆನ್ಸಿಯಲ್ಲಿ ಬೆಂಗಳೂರು ಜ್ಞಾನ ನಗರಿ ಎಂಬ ಹೆಸರಿನಲ್ಲಿ ಸ್ಥಾನ ಪಡೆದಿದೆ. ಎಲ್ಲಾ ಕರ್ನಾಟಕ ವಾಸಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನಾನು ಬೆಂಗಳೂರಿಗೆ ಹಲವು ಬಾರಿ ಬಂದಿದ್ದೇನೆ. ಕರ್ನಾಟಕ ಇತಿಹಾಸದಲ್ಲಿ ಯಾವತ್ತೂ ರಾಜಕೀಯ ಪಕ್ಷಕ್ಕೆ ಇಂತಹ ದೃಶ್ಯ ನೋಡುವ ಸೌಭಾಗ್ಯ ಸಿಕ್ಕಿಲ್ಲ. ಎಲ್ಲಿ ನೋಡಿದರೂ ಕೇಸರಿ ಸಮುದ್ರದ ಅಲೆ ಏಳುತ್ತಿದೆ. ಇದೆಂತಹ ಅದ್ಭುತ ದೃಶ್ಯ. ಅನಂತ್, ಪ್ರಹ್ಲಾದ್ ಹಾಗೂ ಅಶೋಕ್ ಬಳಿ ಕೇಳಿದೆ. ಈ ರೀತಿ ಮುಂಚೆ ಯಾವಾಗ ಹೀಗೆ ಆಗಿತ್ತು? ಅವರು ಹೇಳಿದರು. ಬಿಜೆಪಿ ಮಾತ್ರವಲ್ಲ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಯಾವತ್ತೂ ಇಷ್ಟು ಜನ ಸೇರಿರಲಿಲ್ಲ. ಇದರ ಹಿಂದೆ ಕರ್ನಾಟಕ ಬಿಜೆಪಿ ಕಾರ್ಯಕರ್ತರ ಶ್ರಮವಿದೆ. ನಿಮಗೆ ನನ್ನ ಅಭಿನಂದನೆ.

ಬಿಜೆಪಿ ಮೇಲೆ ದಾಳಿ ಹೆಚ್ಚಾಗುತ್ತಿದೆ. ನರೇಂದ್ರ ಮೋದಿ ಮೇಲೆಯೂ ದಾಳಿ ಹೆಚ್ಚಾಗುತ್ತಿದೆ. ಅವರಿಗೆ ಇಂತಹ ದೃಶ್ಯ ನೋಡಲು ಸಿಗುತ್ತಿಲ್ಲ. ಬಿಜೆಪಿಯನ್ನು ಸದೆಬಡಿಯಲು ಯಾವ ರೀತಿಯ ಭಾಷೆ ಪ್ರಯೋಗ, ಷಡ್ಯಂತ್ರ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಸಂದರ್ಭದಲ್ಲಿ ಇಬ್ಬರು ಪ್ರಧಾನಿಗಳನ್ನು ಸ್ಮರಿಸುತ್ತೇನೆ. ಭಾರತದ ಭಾಗ್ಯ ಬದಲಿಸಲು ಇಬ್ಬರು ಪ್ರಧಾನಿಗಳು ನಮಗೆ ಸಂದೇಶ ನೀಡಿದ್ದಾರೆ.

ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳಿದರು - 'ಜೈ ಜವಾನ್, ಜೈ ಕಿಸಾನ್'
ವಾಜಪೇಯಿ ಹೇಳಿದರು - 'ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್'

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+