ಬೆಂಗಳೂರು, ನವೆಂಬರ್ 19: ಕಬ್ಬು ಬಾಕಿ ಹಣ ಪಾವತಿ, ಬೆಂಬಲ ಬೆಲೆ ನಿಗದಿ, ಸಾಲ ಮನ್ನಾ ಇನ್ನಿತರೆ ವಿಚಾರ ಕುರಿತು ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಷರತ್ತು ಮೇರೆಗೆ ಹಿಂಪಡೆದಿದ್ದಾರೆ. ಸರ್ಕಾರಕ್ಕೆ ಈ ವಿಚಾರ ಕುರಿತು ಒಂದು ನಿರ್ದಿಷ್ಟ ನಿರ್ಧಾರ ಕೈಗೊಳ್ಳಲು 15 ದಿನಗಳ ಗಡುವು ನೀಡು ಪ್ರತಿಭಟನೆ ಹಿಂಪಡೆದಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು(ನವೆಂಬರ್ 19) ರೈತರು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.
ಕಬ್ಬಿಗೆ ನ್ಯಾಯೋಚಿತವಾದ ಬೆಲೆ ನಿಗದಿ ಮಾಡಬೇಕು, ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಹಣ ಬಾಕಿ ಪಾವತಿ ಮಾಡಬೇಕು ಹಾಗೂ ಕೂಡಲೇ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ, ಈ ಹೋರಾಟಕ್ಕೆ ರಾಜ್ಯ ರೈತಸಂಘ , ಹಸಿರು ಸೇನೆ ಬೆಂಬಲ ಸೂಚಿಸಿದೆ. ಹೀಗಾಗಿ 25 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಮಂಡ್ಯ ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳಲ್ಲಿ ಈ ಸಾಲಿನಲ್ಲಿ ಸರೆಯುತ್ತಿರುವ ಕಬ್ಬಿನ ಹಣವನ್ನೇ ರೈತರಿಗೆ ಸರಿಯಾಗಿ ಪಾವತಿ ಮಾಡಿಲ್ಲ, ನವೆಂಬರ್ 5ವರೆಗೆ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯು 7.64 ಕೋಟಿ ರೂ, ಭಾರತಿನಗರ ಚಾಮುಂಡೇಶ್ವರಿ ಶುಗರ್ಸ್ 33.81 ಕೋಟಿ ರೂ, ಕೊಪ್ಪದ ಎನ್ಎಸ್ ಎಲ್ ಶುಗರ್ಸ್ 97.06 ಕೋಟಿ ರೂ ಪಾವತಿಸಬೇಕಿದೆ.
ಈ ಸಾಲಿನಲ್ಲಿ ಕೇಂದ್ರ ಸರ್ಕಾರ ಕಬ್ಬಿಗೆ 26613 ರೂ ಎಫ್ಆರ್ಪಿ ನಿಗದಿಪಡಿಸಿದೆ. ಆದರೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನಿಗದಿಪಡಿಸಿ ಅಂತಿಮ ದರ ಗೊತ್ತುಪಡಿಸಿಲ್ಲ.ಹಾಗಾಗಿ ವಿಧಾನ ಸೌಧ ಮುತ್ತಿಗೆ ಹಾಕಿ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಿದ್ದಾರೆ.
Nov 19, 2018, 4:14 pm IST
ಪ್ರತಿಭಟನೆ ವಾಪಸ್, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ ರೈತರು
Nov 19, 2018, 3:08 pm IST
ರೈತರು ಹೋರಾಟ ಕೈಬಿಡದಿರಲು ತೀರ್ಮಾನ
Nov 19, 2018, 2:55 pm IST
ಕಬ್ಬು ಬಾಕಿ ಹಣ ಪಾವತಿಸುವಂತೆ ಕಿಸಾನ್ ಘಟಕದಿಂದ ಕಾಂಗ್ರೆಸ್ ನಾಯಕರಿಗೆ ಪತ್ರ
Nov 19, 2018, 2:52 pm IST
ವಿಧಾನಸೌಧದಲ್ಲಿ ಸಿಎಂ ನೇತೃತ್ವದ ಸಚಿವ ಸಂಪುಟ ಸಭೆ, ಕಬ್ಬು ಬೆಳೆಗಾರರ ಬಾಕಿ ಹಣ ಪ್ರಶ್ನಿಸಿದ್ದಕ್ಕೆ ಸಭೆಯಿಂದ ಹೊರ ನಡೆದ ರಮೇಶ್ ಜಾರಕಿಹೊಳಿ
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರು, ಸಿಎಂ ಹಾಗೂ ಕಾರ್ಖಾನೆ ಮಾಲೀಕರ ನಡುವೆ ಸಭೆ ನಡೆಯಲಿದೆ
Nov 19, 2018, 1:54 pm IST
ಕಬ್ಬು ಬೆಳಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ
Nov 19, 2018, 1:53 pm IST
ಇಂಡಿಯನ್ ಕೇಮ್ ಪಾವರ್, ಉತ್ತೂರು-18 ಕೋಟಿ 18 ಲಕ್ಷ
Nov 19, 2018, 1:52 pm IST
ಪ್ರತಿಭಟನಾ ಸ್ಥಳಕ್ಕೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಬರುವಂತೆ ರೈತರ ಪಟ್ಟು
Nov 19, 2018, 1:51 pm IST
ನಿರಾಣಿ ಶುಗರ್ಸ್ -45 ಕೋಟಿ 98 ಲಕ್ಷ ಬಾಕಿ
Nov 19, 2018, 1:50 pm IST
-ಗೋದಾವರಿ ಸಮೀರವಾಡಿ ಶುಗರ್ಸ್ -35 ಕೋಟಿ 18ಲಕ್ಷ
Nov 19, 2018, 1:50 pm IST
ಕಬ್ಬಿನ ಹಣ ಬಾಕಿ ಇಟ್ಟುಕೊಂಡಿರುವ ಕಾರ್ಖಾನೆಗಳು
Nov 19, 2018, 1:40 pm IST
30ಕ್ಕೂ ಹೆಚ್ಚು ರೈತರ ಮನವಿ ಪತ್ರ ಸ್ವೀಕರಿಸಿ ಹೊರಟ ಸಚಿವ ಬಂಡೆಪ್ಪ ಕಾಶೆಂಪೂರ್
Nov 19, 2018, 1:22 pm IST
ರೈತರೊಂದಿಗೆ ಚರ್ಚಿಸಲು ಫ್ರೀಡಂ ಪಾರ್ಕ್ಗೆ ಬರಲು ಸಿಎಂ ನಕಾರ
Nov 19, 2018, 1:13 pm IST
ರೈತ ಮಹಿಳೆ ವಿರುದ್ಧ ಸಿಎಂ ಅವಹೇಳನಕಾರಿ ವಿಚಾರ-ಮೈಸೂರಿನಲ್ಲೂ ಪ್ರತಿಭಟನೆ
Nov 19, 2018, 1:12 pm IST
ನಾಳೆ ಮಧ್ಯಾಹ್ನ 3.00 ಗಂಟೆಗೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರೈತರ ಹಿತದೃಷ್ಟಿಯಿಂದ ಒಮ್ಮತದ ನಿರ್ಣಯ ಹೊರಹೊಮ್ಮುತ್ತದೆ ಎನ್ನುವ ವಿಶ್ವಾಸ ನನ್ನದು-ಕುಮಾರಸ್ವಾಮಿ
Nov 19, 2018, 1:01 pm IST
ನಿಲುವು ಸ್ಪಷ್ಟಪಡಿಸಿಲು ಮಧ್ಯಾಹ್ನ 2ಗಂಟೆಯವರೆಗೆ ರೈತರ ಡೆಡ್ ಲೈನ್
Nov 19, 2018, 1:01 pm IST
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧವಾಗಿದೆ. ಈಗಾಗಲೇ ಇದನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ-ಕುಮಾರಸ್ವಾಮಿ
Nov 19, 2018, 12:46 pm IST
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಏನೇನು ಪ್ರಯತ್ನ ಮಾಡಬಹುದು ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಗಳನ್ನು ಮಾಡುತ್ತಲೇ ಇದ್ದೇನೆ-ಕುಮಾರಸ್ವಾಮಿ
Nov 19, 2018, 12:39 pm IST
ಉತ್ತರ ಕರ್ನಾಟಕದವರು, ಇದು ಬ್ಯಾಂಕು ಮತ್ತು ರೈತರ ನಡುವಿನ ವಿಷಯ ಎಂದು ಕೈಕಟ್ಟಿ ಕೂರಲಿಲ್ಲ-ಕುಮಾರಸ್ವಾಮಿ
Nov 19, 2018, 12:39 pm IST
ಮೊನ್ನೆ ಮೊನ್ನೆ ಬೆಳಗಾವಿಯ ಜಿಲ್ಲೆಯ ರೈತರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ನ್ಯಾಯಾಲಯದಿಂದ ಬಂಧನ ವಾರಂಟ್ ಹೊರಡಿಸಿದಾಗಲೂ ಮಧ್ಯಪ್ರವೇಶಿಸಿ ಸಂಧಾನ ಸಭೆ ನಡೆಸಿ, ರೈತರ ರಕ್ಷಣೆಗೆ ಪ್ರಯತ್ನ ನಡೆಸಿದವನು ನಾನು-ಕುಮಾರಸ್ವಾಮಿ
Nov 19, 2018, 12:39 pm IST
ನಾನು ಹಿಂದಿನಿಂದಲೂ ರೈತರ ಪಕ್ಷಪಾತಿಯಾಗಿದ್ದವನು. ಇದರಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಎಂಬ ಭೇದವಿಲ್ಲ-ಕುಮಾರಸ್ವಾಮಿ
Nov 19, 2018, 12:32 pm IST
ರೈತರ ಬಗ್ಗೆ ನಮಗೆ ಕಾಳಜಿ ಇದೆ, ಹೀಗಾಗಿಯೇ ರೈತರ ಬೆಳೆ ಸಾಲ ಮನ್ನಾ ಮಾಡಿದ್ದೇವೆ- ಎಚ್ಡಿ ರೇವಣ್ಣ
Nov 19, 2018, 12:31 pm IST
ಹೆಣ್ಣುಮಕ್ಕಳ ಮೇಲೆ ಅಪಾರಗೌರವಿದೆ, ನಾನು ನೀಡಿದ್ದ ಹೇಳಿಕೆಯಲ್ಲ ದುರುದ್ದೇಶವಿಲ್ಲ, ನನ್ನ ಮಾತಿನ ಅರ್ಥವನ್ನು ಗ್ರಹಿಸದೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ-ಕುಮಾರಸ್ವಾಮಿ
Nov 19, 2018, 12:17 pm IST
ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ರೈತರ ಪಟ್ಟು
Nov 19, 2018, 12:16 pm IST
ರೈತರ ಸಮಸ್ಯೆ ಬಗೆಹರಿಸಲು ಮಧ್ಯಾಹ್ನ 2 ಗಂಟೆಯವರೆಗೆ ಸರ್ಕಾರಕ್ಕೆ ಗಡುವು ಕೊಟ್ಟ ರೈತರು
Nov 19, 2018, 12:15 pm IST
ನಾನು ನೀಡಿದ ಪ್ರತಿಕ್ರಿಯೆಯಲ್ಲಿ ಯಾವುದೇ ದುರುದ್ದೇಶವಿಲ್ಲ-ಕುಮಾರಸ್ವಾಮಿ
Nov 19, 2018, 12:13 pm IST
ಕುಮಾರಸ್ವಾಮಿ 26 ಅಂಶಗಳ ಪತ್ರಿಕಾ ಪ್ರಕಟಣೆ ಬಿಡುಗಡೆ
READ MORE
9:52 AM, 19 Nov
ಚನ್ನಪಟ್ಟಣದಿಂದ 300ಕ್ಕೂ ಹೆಚ್ಚು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ
9:52 AM, 19 Nov
ಫ್ರೀಡಂಪಾರ್ಕ್ನಲ್ಲಿ ರೈತರನ್ನು ತಡೆಯಲು ಸರ್ಕಾರ ನಿರ್ಧಾರ
9:53 AM, 19 Nov
ಸಾವಿರಾರು ಸಂಖ್ಯೆಯಲ್ಲಿ ರೈತರು ಮೆಜೆಸ್ಟಿಕ್ ನಿಂದ ಫ್ರೀಡಂಪಾರ್ಕ್ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದಾರೆ.
9:54 AM, 19 Nov
ಕಬ್ಬಿನ ಬೆಲೆ ನಿಗದಿ, ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ ಕಬ್ಬಿನ ಹಣ ಬಾಕಿ ಪಾವತಿ, ಕೂಡಲೇ ಭತ್ತ ಖರೀದಿ ಕೇಂದ್ರಗಳ ಸ್ಥಾಪನೆಗೆ ಒತ್ತಾಯಿಸಿ ರೈತರ ಪ್ರತಿಭಟನೆ.
9:55 AM, 19 Nov
ಮಂಡ್ಯ, ಮೈಸೂರು, ಬೆಳಗಾವಿಯಿಂದ ಆಗಮಿಸಿರುವ ರೈತರು
9:56 AM, 19 Nov
ಮಂಡ್ಯದಲ್ಲೂ ರೈತರ ಪ್ರತಿಭಟನೆ, ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ರೈತರ ಆಕ್ರೋಶ
10:00 AM, 19 Nov
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರ ಸಿದ್ಧತೆ
10:06 AM, 19 Nov
ಇದೇ ಮೊದಲ ಬಾರಿಗೆ ಕುಮಾರಸ್ವಾಮಿಯವರು ಶಾಸಕರಾಗಿಲ್ಲ, ಮುಖ್ಯಮಂತ್ರಿಯಾಗಿಲ್ಲ ಈ ಹಿಂದೆಯೂ ಈ ಸ್ಥಾನಗಳನ್ನು ಅವರು ಅಲಂಕರಿಸಿದ್ದರು. ಅವರು ಕೊಟ್ಟಿರುವ ಭರವಸೆನ್ನು ಮಾತ್ರ ಇದುವರೆಗೂ ಈಡೇರಿಸಿಲ್ಲ ಬದಲಾಗಿ ರೈತರ ಬಗ್ಗೆ ಅವಹೇಳನವಾಗಿ ಮಾತನಾಡುತ್ತಾರೆ ಇದನ್ನು ನಾವು ಖಂಡಿಸುತ್ತೇವೆ-ಚಾಮರಸ ಮಾಲಿ ಪಾಟೀಲ್ ,ರೈತ ಮುಖಂಡ,
10:07 AM, 19 Nov
ಫ್ರೀಡಂಪಾರ್ಕ್ ಬಳಿ ರೈತರನ್ನು ತಡೆಯಲು ಪೊಲೀಸರ ಸಿದ್ಧತೆ
10:22 AM, 19 Nov
ಒಂದು ವಾಟರ್ ಜೆಟ್ ನಿಯೋಜನೆ, ಒಂದು ಅಶ್ರವಾಯು ವಾಹನ, ಒಂದು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
10:24 AM, 19 Nov
ರೈತರು ತಮಟೆಗಳನ್ನು ಬಾರಿಸುತ್ತಾ, ರೈತ ಗೀತೆಗಳನ್ನು ಹಾಡುತ್ತಾ ರೈತರ ಪ್ರತಿಭಟನೆ
10:25 AM, 19 Nov
ವಿಧಾನಸೌಧದ ವರೆಗೆ ಪ್ರತಿಭಟನಾ ಮೆರವಣಿಗೆಗೆ ಅವಕಾಶವಿಲ್ಲ
10:31 AM, 19 Nov
ಸಂಪುಟ ಸಭೆ ನಡೆಯುವ ಹಿನ್ನೆಲೆ ವಿಧಾನಸೌಧಕ್ಕೆ ಸರ್ಪಗಾವಲು
10:32 AM, 19 Nov
ಮೆಜೆಸ್ಟಿಕ್, ಆನಂದರಾವ್ ವೃತ್ತ, ಕೆಆರ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ , ಅವೆನ್ಯೂ ರಸ್ತೆ, ಗೂಡ್ ಶೆಡ್ ರಸ್ತೆ , ಬಿನ್ನಿ ಮಿಲ್ ನಲ್ಲಿ ಟ್ರಾಫಿಕ್ ಜಾಮ್
10:46 AM, 19 Nov
ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮುಖಂಡ ಸಿಟಿ ರವಿ ಆಕ್ರೋಶ
10:46 AM, 19 Nov
ವೋಟಿಗಾಗಿ ಕಪಟ ಕಣ್ಣೀರು ಹಾಕುವ ಕುಮಾರಸ್ವಾಮಿ ಕಬ್ಬಿನ ಬಾಕಿ ಹಣ ಕೇಳಿದ ರೈತರನ್ನು ಗೂಂಡಾಗಳು ಎಂದು ಕರೆದು ಅವರ ಕಣ್ಣಲ್ಲಿ ರಕ್ತ ಹರಿಸುತ್ತಿರುವುದು ಅವರ ಧೂರ್ತಲಕ್ಷಣವೇ ಅಲ್ಲವೇ? ಅಯೋಗ್ಯರ ಕೈಯಲ್ಲಿ ಅಧಿಕಾರ ಇರುವವರೆಗೆ ಇನ್ನೂ ಏನೇನು ನೋಡಲು ಬಾಕಿ ಇದೆಯೋ ಭಗವಂತ?-ಸಿಟಿ ರವಿ
10:47 AM, 19 Nov
ರೈತರ ಪ್ರತಿಭಟನಾ ಸ್ಥಳದಲ್ಲಿ ಗಾಂಧೀಜಿ ಪ್ರತ್ಯಕ್ಷ
10:50 AM, 19 Nov
ಪ್ರತಿಭಟನಾ ಸ್ಥಳದಲ್ಲಿ ಗಾಂಧೀಜಿ ವೇಷ ತೊಟ್ಟು ಹಾವೇರಿ ರೈತ ರಾಮಣ್ಣನಿಂದ ವಿಶಿಷ್ಟ ಪ್ರತಿಭಟನೆ
10:52 AM, 19 Nov
ಸಿಎಂ ಕುಮಾರಸ್ವಾಮಿ ಕೂಡಲೇ ರೈತರಲ್ಲಿ ಕ್ಷಮೆ ಯಾಚಿಸಬೇಕು, ಇಲ್ಲವಾದರೆ ಸಭೆಗೆ ರೈತರು ಹಾಜರಾಗೊಲ್ಲ ಎಂದು ಎಚ್ಚರಿಕೆ
11:00 AM, 19 Nov
ರೈಲ್ವೆ ನಿಲ್ದಾಣದಿಂದ 11 ಗಂಟೆ ಬಳಿಕ ಮೆರವಣಿಗೆ ಆರಂಭ
11:01 AM, 19 Nov
ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಮಂದಿ ರೈತರಿಂದ ಸರ್ಕಾರದ ವಿರುದ್ಧ ಘೋಷಣೆ
11:01 AM, 19 Nov
ರೈತರನ್ನು ವಶಕ್ಕೆ ಪಡೆಯಲು ಪೊಲೀಸರು ಸಜ್ಜು
11:07 AM, 19 Nov
ಪ್ರಮುಖ ಬೇಡಿಕೆಗಳು: ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು, ಗ್ರಾಮೀಣ ಭಾಗದ ಆರ್ಥಿಕ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕು, ಕೃಷಿ ಕುಟುಂಬಕ್ಕೆ 10 ಸಾವಿರ ರೂ ಜೀವನ ಭತ್ಯೆ ನೀಡಬೇಕು, ರೈತರಿಗೆ ಬಗರಂಹುಕುಂ ಸಾಗುವಳಿ ಪತ್ರ ನೀಡಬೇಕು.
11:31 AM, 19 Nov
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರೈತರ ಕ್ಷಮೆ ಕೇಳಲಿದ್ದಾರೆ
11:36 AM, 19 Nov
ರೈತರ ಸಮಸ್ಯೆ ಕುರಿತು ನವೆಂಬರ್ 20ರಂದ ಬೆಳಗ್ಗೆ 12ಕ್ಕೆ ಬಿಜೆಪಿಯಿಂದ ಪತ್ರಿಕಾಗೋಷ್ಠಿ-ಬಿಎಸ್ ಯಡಿಯೂರಪ್ಪ
11:42 AM, 19 Nov
ಎಲ್ಲ ರೈತರಿಗೂ ಪ್ರತಿಭಟನೆ ಮಾಡುವ ಅವಕಾಶವಿದೆ, ರೈತರ ಹಣವನ್ನು ಕೊಡಿಸಲು ಸರ್ಕಾರ ಬದ್ಧವಾಗಿದೆ, ಸಿಎಂ ಎಚ್ಡಿಕೆ ಮಾತಿನಿಂದ ನೋವಾಗಿದ್ದರೆ ವಿಷಾದ- ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ
11:43 AM, 19 Nov
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈತರ ಪ್ರತಿಭಟನಾ ಮೆರವಣಿಗೆ ಆರಂಭ
11:45 AM, 19 Nov
ಹಣವಿಲ್ಲದೆ ರೈತರು ಆತ್ಮಹತ್ಯೆಗೆ ಶರಣಾಗಬೇಕೆ?-ಯಡಿಯೂರಪ್ಪ
11:52 AM, 19 Nov
ಕೆಆರ್ವೃತ್ತ, ಮೆಜೆಸ್ಟಿಕ್, ಫ್ರೀಡಂ ಪಾರ್ಕ್ ಸುತ್ತ ಟ್ರಾಫಿಕ್ ಜಾಮ್
11:57 AM, 19 Nov
ಆನಂದರಾವ್ ವೃತ್ತದಿಂದ ಫ್ರೀಡಂ ಪಾರ್ಕ್ ಗೆ ಬಂದ ರೈತರು, ಎಚ್ಡಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ ರೈತರು