ಪಾನಮತ್ತ ವೈದ್ಯನ ಉಪಟಳ, ಒಂದು ಸಾವು, ನಾಲ್ವರಿಗೆ ಗಾಯ
ಬೆಂಗಳೂರು,ಮಾರ್ಚ್,28: ಮದ್ಯ ಸೇವಿಸಿದ ವೈದ್ಯನೊಬ್ಬ ಕೇವಲ ಐದು ನಿಮಿಷದಲ್ಲಿ ಮೂರು ಸರಣಿ ಅಪಘಾತ ಮಾಡಿ ಒಬ್ಬ ಅಮಾಯಕ ವ್ಯಕ್ತಿಯ ಜೀವ ತೆಗೆದ ಘಟನೆ ಜಯನಗರದ ಬೈರಸಂದ್ರದ ಬಳಿ ಭಾನುವಾರ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯ ಎನ್. ಎಚ್ ಶಂಕರ್ ಅಪಘಾತ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಬೈರಸಂದ್ರದ ಮಹಮದ್ ರಿಜ್ವಾನ್ ಖಾನ್ ವೈದ್ಯನ ಎಡವಟ್ಟಿಗೆ ಮೃತಪಟ್ಟಿದ್ದು, ಅವರ ಪತ್ನಿ ಮೌಸಿನಾ ಖಾನ್, ಬೈಕ್ ಚಾಲಕ ಮಜಿದ್ ಖಾನ್, ಅಂಜುಮನ್ ಖಾನ್ ಹಾಗೂ ಸೈಯ್ಯದ್ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.['ನನಗೆ ರೇಷ್ಮೆ ಸೀರೆ ಕೊಡ್ಸು ಎಂದ ಮಗಳೇ ಇಲ್ಲ' ಇದು ಅಪ್ಪನ ರೋದನ

ವೈದ್ಯ ಮಾಡಿದ ಎಡವಟ್ಟು ಏನು?
ವಿದ್ಯಾಪೀಠ ನಿವಾಸಿಯಾದ ಮೂಳೆ ತಜ್ಞನಾದ ಪಾನಮತ್ತ ವೈದ್ಯ ಶಂಕರ್ ತನ್ನ ಬೆನ್ಜ್ ಕಾರಿನಲ್ಲಿ ಭಾನುವಾರ ಸಿದ್ದಾಪುರದಿಂದ ಬೆಂಗಳೂರಿಗೆ ಬಂದಿದ್ದಾನೆ. ಆಗ ಆತ ಮೊದಲು ಅಶೋಕ ಪಿಲ್ಲರ್ ಬಳಿ ನಿಂತಿದ್ದ ಸ್ವಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಆದರೂ ಕಾರು ನಿಲ್ಲಿಸದ ಈತ ಮಾಧವನ ಉದ್ಯಾನವನದ ಬಳಿ ಆಕ್ಟೀವಾ ಹೊಂಡಕ್ಕೆ ಗುದ್ದಿದ್ದಾನೆ.
ಬಳಿಕ ಬೈರಸಂದ್ರದ ಮುಖ್ಯರಸ್ತೆ ಹೋಗುತ್ತಿರುವ ವೇಳೆ ಕಾರಿನ ನಿಯಂತ್ರಣ ತಪ್ಪಿದ ಪರಿಣಾಮ ಪುನಃ ಇಂಡಿಕಾ, ಜೆನ್ ಕಾರಿಗೂ ಡಿಕ್ಕಿ ಹೊಡೆದು ಹಿಂತಿರುಗಿ ನೋಡದೆ ಮುನ್ನಡೆದಿದ್ದಾನೆ. ಆಗ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ರಿಜ್ವಾನ್ ದಂಪತಿಗೆ ಗುದ್ದಿದ್ದು, ರಿಜ್ವಾನ್ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಇವರು ತಿಲಕ್ ನಗರದಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.[10 ಸೆಂಮೀ ಟ್ಯೂಮರ್ ಹೊರತೆಗೆದ ಮಾರ್ಥಾಸ್ ವೈದ್ಯರು!]
ರಿಜ್ವಾನ್ ರ ಪ್ರಾಣಾಹುತಿ ಪಡೆದು ಓಡುತ್ತಿದ್ದ ವೈದ್ಯ ಶಂಕರ್ ನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯ ಶಂಕರ್ ಜಯನಗರ 4ನೇ ಬ್ಲಾಕಿನಲ್ಲಿ ಸಿದ್ದಾರ್ಥ ಎಂಬ ಕ್ಲಿನಿಕ್ ನಡೆಸುತ್ತಿದ್ದರು. ರೋಗಿಗಳ ಪ್ರಾಂ ಉಳಿಸಬೇಕಾದ ವೈದ್ಯರೇ ಪ್ರಾಣ ಬಲಿ ಪಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರಿಗೆ ಬೆಂಕಿ ಹಚ್ಚಲು ಮುಂದಾದರು.
ಅದೃಷ್ಟಾವಶತ್ ತಪ್ಪಿದ ಮತ್ತೊಂದು ಅಪಘಾತ :
ಅಶೋಕ್ ಪಿಲ್ಲರ್ ಹತ್ತಿರ ಉಂಟಾದ ಅಪಘಾತದಿಂದ ಭಯಕ್ಕೆ ಒಳಗಾದ ಶಂಕರ್ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ವೇಗವಾಗಿ ಕಾರ್ ಚಲಾಯಿಸಿಕೊಂಡು ಬಂದ ಸಂದರ್ಭದಲ್ಲಿ ಶೆಡ್ ಗೆ ನುಂಗಿದ್ದಾರೆ. ಆ ವೇಳೆ ಶೆಟಡ್ಡಿನಲ್ಲಿ ವಾಸಿಸುತ್ತಿದ್ದ ದಂಪತಿ ಕೆಲಸಕ್ಕೆ ಹೋಗಿದ್ದರು, ಅಸೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು











Click it and Unblock the Notifications