ಬೆಂಗಳೂರು: ಅಜ್ಜಿಯನ್ನು ಕೊಂದು 7 ತಿಂಗಳು ಕಬೋರ್ಡಿನಲ್ಲಿಟ್ಟದ್ದ ಮೊಮ್ಮಗ!
ಅಜ್ಜಿಯನ್ನು ಕೊಲೆ ಮಾಡಿ, ಶವವನ್ನು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದ ಕ್ರೂರ ಮೊಮ್ಮಗನ ಕತೆ ಇದು! ಅಜ್ಜಿಯ ಶವ ಕಬೋರ್ಡಿನಲ್ಲಿದ್ದಂತೆಯೇ ಯಾವ ಭಯವಿಲ್ಲದೆ, ಪಾಪಪ್ರಜ್ಞೆಯಿಲ್ಲದೆ ಅದೇ ರೂಮಿನಲ್ಲಿ ಮಲಗುತ್ತಿದ್ದ ಆತ!
ಬೆಂಗಳೂರು, ಮೇ 13: ಮೊಮ್ಮಗನೇ ತನ್ನಜ್ಜಿಯನ್ನು ಕೊಂದು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದ ಕೆಂಗೇರಿ ಮರ್ಡರ್ ಸ್ಟೋರಿ ನಡೆದದ್ದು ಕಳೆದ ಆಗಸ್ಟ್ ತಿಂಗಳಿನಲ್ಲೇ. ಆದರೆ ಕೊಲೆಗೆ ಕಾರಣವೇನು ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರಲಿಲ್ಲ್.
ಕೊಲೆ ನಡೆದು ಆಗಲೇ ಒಂಬತ್ತು ತಿಂಗಳು ಕಳೆದಿದೆ. ಇತ್ತೀಚೆಗಷ್ಟೇ ಮೃತ ವೃದ್ಧೆಯ ಮೊಮ್ಮಗ ಸಂಜಯ್ ಎಂಬುವವರ ಸ್ನೇಹಿತನೊಬ್ಬ ಸಂಜಯನೇ ತನ್ನಜ್ಜಿಯನ್ನು ಕೊಂದು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದ ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಿದ್ದಾನೆ. ಈ ಮೂಲಕ ಕೆಂಗೇರಿ ಕಬೋರ್ಡ್ ಮರ್ಡರ್ ಕೇಸ್ ಗೆ ರೋಚಕ ತಿರುವು ಸಿಕ್ಕಿದೆ. [ಕೆಂಗೇರಿಯ ಮನೆ ವಾರ್ಡ್ ರೋಬ್ ನಲ್ಲಿ ಮಹಿಳೆಯ ಅಸ್ಥಿಪಂಜರ ]

ತಾನು ಕೊಟ್ಟ ಊಟವನ್ನು ಅಜ್ಜಿ ಬಿಸಾಡಿದ್ದನ್ನು ಕಂಡು ಕೋಪಗೊಂಡ ಮೊಮ್ಮಗ ತನ್ನ ಕಬ್ಬಿಣದ ರಾಡ್ ನಿಂದ ಅಜ್ಜಿಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಕಬೋರ್ಡಿನಲ್ಲಿ ಬಚ್ಚಿಟ್ಟಿದ್ದಾನೆ! ಆಕೆಯ ಶವ ಕಬೋರ್ಡಿನಲ್ಲಿದ್ದಂತೆಯೇ ತಾನು ಯಾವ ಭಯವಿಲ್ಲದೆ, ಪಾಪಪ್ರಜ್ಞೆಯಿಲ್ಲದೆ ಅದೇ ರೂಮಿನಲ್ಲಿ ಮಲಗುತ್ತಿದ್ದ![ಮೇ 22ರ ವರೆಗೆ ಬಾಂಬ್ ನಾಗ ಮತ್ತು ಮಕ್ಕಳು ಪೊಲೀಸ್ ಕಸ್ಟಡಿಗೆ]
ನಂತರ ಶವದ ವಾಸನೆ ತಅಳಲಾರದೆ ರೂಮು ಖಾಲಿ ಮಾಡಿ, ನಾಪತ್ತೆಯಾಗಿದ್ದ ಸಂಜಯ್ ಬಂಧನಕ್ಕೆ ಇದೀಗ ಕೆಂಗೇರಿ ಪೊಲೀಸರು ಬಲೆಬೀಸಿದ್ದಾರೆ. ದೇವರಂತೆ ನೋಡಬೇಕಾದ ಅಜ್ಜಿಯನ್ನೇ ಕೊಂದ ಪಾಪಿ ಮೊಮ್ಮಗನ ಕತೆ ನಿಜಕ್ಕೂ ಆಘಾತಕಾರಿ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications