ಬಳ್ಳಾರಿ ಲೋಕಸಭೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಜೆ. ಶಾಂತಾ ನಾಮಪತ್ರ ಸಲ್ಲಿಕೆ
ಬಳ್ಳಾರಿ, ಅಕ್ಟೋಬರ್.15: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆ. ಶಾಂತಾರವರು ಅಕ್ಟೋಬರ್ 16ರಂದು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬಳ್ಳಾರಿಯ ಎಸ್.ಪಿ.ಸರ್ಕಲ್ ನಿಂದ ಬೆಳಗ್ಗೆ 10.00 ಗಂಟೆಗೆ ಮೆರವಣಿಗೆ ಹೊರಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಬಳ್ಳಾರಿ ಲೋಕಸಭಾ (ಪರಿಶಿಷ್ಟ ಪಂಗಡ) ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದ್ದು, ಈ ಕ್ಷೇತ್ರದಿಂದ ವಿಎಸ್ ಉಗ್ರಪ್ಪ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಳ್ಳಾರಿಯಿಂದ ಕಹಳೆ ಮೊಳಗಿಸುವರೇ ಕಾಂಗ್ರೆಸ್ನ ಉಗ್ರಪ್ಪ?
ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅ.16 ಕೊನೆಯ ದಿನವಾಗಿದೆ. ಈಗಾಗಲೇ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಮೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಆಯಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಲು ಬಿಜೆಪಿ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಉಪಚುನಾವಣೆ: ಬಳ್ಳಾರಿ ಟಿಕೆಟ್ ಗೊಂದಲ, ಸಿದ್ದರಾಮಯ್ಯ ಮಧ್ಯ ಪ್ರವೇಶ
ಕಾಂಗ್ರೆಸ್
ಉಸ್ತುವಾರಿಗಳ
ನೇಮಕ
ಉಪಚುನಾವಣೆ
ಹಿನ್ನೆಲೆಯಲ್ಲಿ
ಮಂಡ್ಯಕ್ಕೆ
ಕಾಂಗ್ರೆಸ್
ಪಕ್ಷದ
ಉಸ್ತುವಾರಿಯಾಗಿ
ಸಚಿವ
ಕೆಜೆ
ಜಾರ್ಜ್,
ಶಿವಮೊಗ್ಗಕ್ಕೆ
ಸಚಿವ
ಆರ್.ವಿ.
ದೇಶಪಾಂಡೆ,
ರಾಮನಗರಕ್ಕೆ
ಸಂಸದ
ಡಿಕೆ
ಸುರೇಶ್
ಅವರನ್ನು
ನೇಮಕ
ಮಾಡಲಾಗಿದೆ.