ಬಳ್ಳಾರಿ ಚೋರ್ ಬಾಬುಲಾಲ್ ಯಾವುದೇ ಕ್ಷಣ ಬಂಧನ
ಬಳ್ಳಾರಿ, ಮೇ 9: ಕೋಟ್ಯಂತರ ಹವಾಲಾ ಹಣ ಪತ್ತೆ ಪ್ರಕರಣ ತಿಳಿದವರು ಏನಪ್ಪಾ ಒಂದು ತಿಂಗಳಾಯ್ತು, ಇನ್ನೂ ಆರೋಪಿ ಚೋರ್ ಬಾಬುಲಾಲ್ ಬಂಧನವಾಗಿಲ್ಲವಾ? ಎಂದು ಆಶ್ಚರ್ಯಪಡಬಹುದು. ಆದರೂ ವಾಸ್ತವ ಏನಪ್ಪಾ ಅಂದರೆ ಬಂಧನದ ಭೀತಿಯಲ್ಲಿದ್ದ ಚೋರ್ ಬಾಬುಲಾಲ್, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಪೊಲೀಸರು ಆತನ ಬಂಧನಕ್ಕೆ ಮೀನಾಮೇಷ ಎಣಿಸುತ್ತಿದ್ದರು.
ಆದರೆ ಬಾಬುಲಾಲ್ ಜಾಮೀನು ಅರ್ಜಿಯನ್ನು ಇಂದು ಆಲಿಸಿದ ಜಿಲ್ಲಾ 2ನೆ ಅಪರ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ ಕೋಟಿ ಕೋಟಿ ಹವಾಲಾ ಹಣ ಪತ್ತೆ ಪ್ರಕರಣ ಸಂಬಂಧ ಬಳ್ಳಾರಿಯ ಲೇವಾದೇವಿಗಾರ ಚೋರ್ ಬಾಬುಲಾಲನನ್ನು ಪೊಲೀಸರು ಯಾವುದೇ ಕ್ಷಣ ಬಂಧಿಸಬಹುದಾಗಿದೆ.

ಜತೆಗೆ, ಚೋರ್ ಬಾಬುಲಾಲನ ಇಬ್ಬರು ಪುತ್ರರನ್ನು ಸಹ ಬಂಧಿಸಬಹುದಾಗಿದೆ. ಬಾಬುಲಾಲ್ ಹಾಗೂ ಅವರ ಪುತ್ರರಾದ ರಮೇಶ್ ಪರಶುರಾಮ್ ಪುರಿಯಾ ಹಾಗೂ ಶ್ರೀಕಾಂತ್ ಪರಶುರಾಮ್ ಪುರಿಯಾ ಅವರು ಭಾರಿ ಪ್ರಮಾಣದಲ್ಲಿ ಹವಾಲಾ ಹಣ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವಿದೆ. (ಚೋರ್ ಬಾಬುಲಾಲ್ ಯಾರು? ಆತನ ದಂಧೆಯೇನು?)
ಹಿನ್ನೆಲೆ: ಮತದಾರರಿಗೆ ಹಂಚಲು ರಾಜಕೀಯ ಪಕ್ಷಗಳಿಗೆ ಸಾಲ ನೀಡುವ ಕುರಿತಂತೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಬಾಬುಲಾಲ್ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ನಗದು ಹಾಗೂ ಠೇವಣಿ ಪತ್ರ, ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. (ಬಳ್ಳಾರಿಯಲ್ಲಿ ಭಾರಿ ಭಾರಿ ಹವಾಲಾ ಹಣ ಪತ್ತೆ!)
ಪ್ರಸ್ತುತ ಬಾಬುಲಾಲ್ ಮತ್ತು ಪುತ್ರರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬಳ್ಳಾರಿ ನ್ಯಾಯಾಲಯ ಆರೋಪಿಗಳ ಬಂಧನಕ್ಕೆ ಆದೇಶ ನೀಡಿದ್ದು, ಗಾಂಧಿನಗರ ಪೊಲೀಸರು ಬಾಬುಲಾಲ್ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications