ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಾಯಕ್ಕೆ ನಿಂತ ಗಣಿ ಕಂಪನಿ
ಬಳ್ಳಾರಿ, ಏಪ್ರಿಲ್ 22: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಳ್ಳಾರಿಯ ಗಣಿ ಕಂಪನಿಯೂ ಸಹಕಾರ ನೀಡಿವೆ. ಕೆಲ ಕಂಪನಿಗಳು ತಮ್ಮ ಖರ್ಚಿನಲ್ಲಿಯೇ
ಬಳ್ಳಾರಿ ನಗರದ ಸುತ್ತ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿದ್ದು, ಈ ಮೂಲಕ ತಮ್ಮದೇ ರೀತಿಯಲ್ಲಿ ಸರ್ಕಾರದ ಜೊತೆ ಸಹಾಯಕ್ಕೆ ನಿಂತಿವೆ.
ಬಳ್ಳಾರಿಯ ಎನ್ಎಂಡಿಸಿ ಕಂಪನಿ ನಗರದ ನೈರ್ಮಲ್ಯೀಕರಣವನ್ನು ಕೈಗೊಳ್ಳಲು ಮುಂದಾಗಿದೆ. ಲಾಕ್ ಡೌನ್ ಆದ ವೇಳೆಯಲ್ಲಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಜಿಲ್ಲೆಯ ಕೈಗಾರಿಕೆಗಳಿಂದ ಸಹಕಾರವನ್ನು ಕೇಳಿದ್ದರು.

ಇದೀಗ ಎನ್ ಎಂಡಿಸಿ ಕಂಪನಿ ಜಿಲ್ಲಾಡಳಿತದ ಜೊತೆ ನಿಂತಿದೆ. ನಗರದ ಜನನಿಬಿಡ ಪ್ರದೇಶಗಳಲ್ಲಿ ಸಾನಿಟೈಜರ್ ಸಿಂಪಡಣೆ ಮಾಡುವ ಕಾರ್ಯ ನಡೆಸುತ್ತಿದೆ. ನಗರದ ಪ್ರಮುಖ 19 ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿದ್ದು, ಎನ್ ಎಂಡಿಸಿ ವತಿಯಿಂದ ಸಾನಿಟೈಜರ್ ಸಿಂಪಡಣೆ ಮಾಡಲಾಗಿದೆ. ಬಳ್ಳಾರಿ ಸಂಡೂರು ಸುತ್ತಮುತ್ತಲ ಗ್ರಾಮಗಳಿಯೂ ಸ್ಯಾನಿಟೈಜರ್ ಸಿಂಪಡಣೆ ಮಾಡುವ ಮೂಲಕ ಗಣಿ ಕಂಪನಿಗಳು ಸರ್ಕಾರದ ಈ ಹೋರಾಟದಲ್ಲಿ ಭಾಗಿಯಾಗಿವೆ.












Click it and Unblock the Notifications