'ವಿಜಯನಗರ ಹೋರಾಟ' ಪ್ರಾರಂಭಿಸಿದ ಅನರ್ಹ ಶಾಸಕ ಆನಂದ್ ಸಿಂಗ್

ವಿಜಯನಗರ, ಸೆಪ್ಟೆಂಬರ್ 16: ಅನರ್ಹ ಶಾಸಕ ಆನಂದ್ ಸಿಂಗ್ ಅವರು 'ವಿಜಯನಗರ ಹೋರಾಟ'ವನ್ನು ಇಂದು ಪ್ರಾರಂಭಿಸಿದ್ದಾರೆ.

ವಿಜಯನಗರ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅವರು ಇಂದಿನಿಂದ ಹೋರಾಟ ಪ್ರಾರಂಭಸಿಸದ್ದು, ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು ಹೋರಾಟ ಪ್ರಾರಂಭಿಸಿದರು..

ಕೆಲವು ಮಠಾಧೀಶರ ಬೆಂಬಲ ಸಹಕಾರ ಕೋರಿದ ಆನಂದ್ ಸಿಂಗ್, ವಿದ್ಯಾರಣ್ಯ ಭಾರತೀ ಸ್ವಾಮೀಜೀಗಳು, ಮಾತಂಗ ಮಠದ ಸ್ವಾಮೀಜಿ ಮತ್ತು ಸಂಸ್ಥಾನ‌ ಮಠದ ಮಠಾಧೀಶರಾದ ಡಾ. ಶ್ರೀ ಸಂಗನಗೌಡ ಮಹಾಸ್ವಾಮಿಗಳ ಆಶೀರ್ವಾದ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿ ಆಶೀರ್ವಾದ ಪಡೆದುಕೊಂಡರು.

Anand Singh Demanding To Announce Vijayanagar As District

ಹೊಸಪೇಟೆಯನ್ನು 'ವಿಜಯನಗರ ಜಿಲ್ಲೆ'ಯನ್ನಾಗಿ ಘೋಷಿಸಲು ಬೆಂಬಲ‌ ಸಹಕಾರ ಕೋರಿದರು. ಇದಕ್ಕೆ ಸದಾ ತಮ್ಮ ಬೆಂಬಲ ಇರುವುದಾಗಿ ತಿಳಿಸಿ ಸರ್ಕಾರಕ್ಕೂ ಒತ್ತಡ ತರುವುದಾಗಿ ಹೇಳಿ ಈ‌ ಹೋರಾಟಕ್ಕೆ ಆನಂದ್ ಸಿಂಗ್ ರವರಿಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

Anand Singh Demanding To Announce Vijayanagar As District

ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಇದೇ ವಿಷಯವನ್ನು ಕಾರಣವನ್ನಾಗಿ ನೀಡಿದ್ದರು. ವಿಜಯನಗರ ಜಿಲ್ಲೆಯನ್ನಾಗಿಸುವಂತೆ ಒತ್ತಾಯ ಮಾಡಿದ್ದೆ, ಅದು ಆಗಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+