ಬಾದಾಮಿ ಸ್ನೇಹಿತರಿಂದ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ: 4 ಗಂಟೆ ಚಾರ್ಜ್ಗೆ 90 ಕಿ.ಮೀ ಪ್ರಯಾಣ
ಬಾಗಲಕೋಟೆ, ಆಗಸ್ಟ್ 17: ಸಾಧಿಸೋಕೆ ಏನೂ ಅಡ್ಡಿ ಅಲ್ಲ, ಸಾಧಿಸಬೇಕು ಎನ್ನುವುದು ಮನಸ್ಸಲ್ಲಿದ್ರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಈ ಇಬ್ಬರು ಸ್ನೇಹಿತರು ಮಾಡಿ ತೋರಿಸಿದ್ದಾರೆ. ಬಾದಾಮಿಯ ಮಂಜುನಾಥ ಜಲಗೇರಿ ಹಾಗೂ ಮಹಮ್ಮದ್ ಇಕ್ಬಾಲ್ ಎಂಬ ಇಬ್ಬರು ಸ್ನೇಹಿತರು ಬ್ಯಾಟರಿ ಚಾಲಿತ ಬೈಕ್ ಒಂದನ್ನು ಆವಿಷ್ಕರಿಸಿದ್ದಾರೆ.
ಈಗೆಲ್ಲ ಪೆಟ್ರೋಲ್ ರೇಟ್ ದಿನದಿಂದ ದಿನಕ್ಕೆ ಏರುತ್ತಿದೆ. ಸದ್ಯ ಪೆಟ್ರೋಲ್ ಬೆಲೆ ಲೀಟರ್ 100 ರೂ ದಾಟಿದೆ. ಹೀಗಾಗಿ ಬೈಕ್ ಸೇರಿದಂತೆ ವಾಹನ ಸವಾರರಿಗೆ ತಮ್ಮ ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿಸೋದೆ ಒಂದು ಸರ್ಕಸ್ ಆಗಿ ಬಿಟ್ಟಿದೆ. ಆದರೆ, ಬಾದಾಮಿಯ ಮಂಜುನಾಥ ಜಲಗೇರಿ ಹಾಗೂ ಮಹಮ್ಮದ್ ಇಕ್ಬಾಲ್ ಎನ್ನುವವರು ಪೆಟ್ರೋಲ್ ರೇಟ್ನಿಂದ ಬೇಸತ್ತು ತಮ್ಮದೇ ಆದ ಒಂದು ಬೈಕ್ ಅನ್ನು ತಯಾರಿಸಿಕೊಂಡಿದ್ದಾರೆ. ಇದಕ್ಕೆ ಪೆಟ್ರೋಲ್ ಬೇಡ, ಯಾವುದೇ ಇಂಧನವೂ ಬೇಕಾಗಿಲ್ಲ. ಇದಕ್ಕೆ ನೀವು ಮೂರು ಗಂಟೆ ಚಾರ್ಜ್ ಮಾಡಿದರೆ ಸಾಕು ಸರಾಸರಿ 90 ಕಿಮೀ ದೂರ ಕ್ರಮಿಸಿಬಹುದು. ಅಂತಹ ಒಂದು ಅದ್ಭುತ ಬೈಕ್ ತಯಾರಿಸಿ ಸೈ ಎನಿಸಿಕೊಂಡಿದ್ದಾರೆ.
ಮೊದಲು ಒಂದೇ ಬೈಕ್ ಸಿದ್ಧಪಡಿಸಿದ್ದ ಇಬ್ಬರೂ ಸ್ನೇಹಿತರು, ಅದನ್ನ ಬಾದಾಮಿ ಸಿಟಿಯಲ್ಲಿ ಹೆಚ್ಚಾಗಿ ಬಳಸಿದ್ದರು. ಇದನ್ನ ನೋಡಿದ ಹಲವರು ಈ ಬೈಕ್ ಮೇಲೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಈಗಾಗಲೇ ಇಬ್ಬರು ರೈತರಿಗೆ ಈ ವಿಶೇಷ ಬೈಕ್ಗಳನ್ನು ತಯಾರಿ ಮಾಡಿಕೊಟ್ಟಿದೆ. ಬೈಕ್ ಖರೀದಿಸಿದಿರುವ ರೈತರು ಮನೆ ಹಾಗೂ ಜಮೀನುಗಳಿಗೆ ತೆರಳಲು ಬಳಸುತ್ತಿದ್ದಾರಂತೆ.

ಲಾಕ್ಡೌನ್ ವೇಳೆ ಬೈಕ್ ತಯಾರಿ
ಕೊರೊನಾ ಟೈಮ್ ನಲ್ಲಿ ಎಲ್ಲರಿಗೂ ಒಂದಿಲ್ಲೊಂದು ಕಷ್ಟ ಎದುರಾಗಿತ್ತು. ಅದರಂತೆ ಪ್ರಿಟಿಂಗ್ ಪ್ರೆಸ್ ಇಟ್ಟಿದ್ದ ಮಂಜುನಾಥ ಹಾಗೂ ತನ್ನದೆ ಎಲೆಕ್ಟ್ರಾನಿಕ್ ಶಾಪ್ ಇಟ್ಟುಕೊಂಡಿದ್ದ ಮಹಮ್ಮದ್ ಇಕ್ಬಾಲ್ಗೆ ಲಾಕ್ ಡೌನ್ ವೇಳೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ. ಅಲ್ಲದೇ ಪೆಟ್ರೋಲ್ ರೇಟ್ ಕೂಡಾ ಅದೇ ಟೈಮ್ನಲ್ಲಿ ಭಾರೀ ಏರಿಕೆ ಆಗಿತ್ತು. ಹೀಗಾಗಿ ವಈ ಇಬ್ಬರೂ ಸ್ನೇಹಿತರು ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದಾರೆ. ಅದು ಯಶಸ್ವಿಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.

4 ಗಂಟೆ ಚಾರ್ಜ್ಗೆ 90 ಕಿಮೀ ಪ್ರಯಾಣ
ಇಕ್ಬಾಲ್ ಹಾಗೂ ಮಂಜುನಾಥ ಎಂಬುವರು ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ. ಹೀಗೆ ವಿಶೇಷವಾಗಿ ತಯಾರಾಗಿರುವ ಬೈಕ್ ಗೆ ಯಾವುದೇ ಇಂಧನದ ಅವಶ್ಯಕತೆ ಇಲ್ಲ. ಈ ಬೈಕ್ ಗೆ ಕೇವಲ ಬ್ಯಾಟರಿ ಅಷ್ಟೇ ಸಾಕು. ಅದು 4 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು 90 ಕಿ.ಮೀ ವರೆಗೆ ಸಂಚಾರ ಮಾಡುತ್ತದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ 90 ಕಿ.ಮೀ ಸಂಚರಿಸಬಹುದಾಗಿದೆ. ಇದು ಇಂತಹ ದುಬಾರಿ ಪೆಟ್ರೋಲ್, ಡಿಸೇಲ್ ಬೆಲೆಯ ಕಾಲದಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

ಒಟ್ಟು 3 ಬೈಕ್ ತಯಾರಿ
ಮಂಜುನಾಥ ಹಾಗೂ ಇಕ್ಬಾಲ್ ಅವರು ಸುಮಾರು 3-4 ತಿಂಗಳ ಕಾಲ ಸಮಯ ತೆಗೆದುಕೊಂಡು ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿದ್ದಾರೆ. ಈ ಬೈಕ್ ಗೆ ಲಿಥಿಯಮ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದೇ ಬ್ಯಾಟರಿಗಳ ಮೂಲಕ ಬೈಕ್ ಸಂಚಾರ ಮಾಡುತ್ತದೆ. ಈ ಬೈಕ್ ಕೇವಲ ಸಿಟಿಯಲ್ಲಿ ಓಡಾಡುವುದಕ್ಕೆ ಬಳಸಬಹುದಾಗಿದೆ. ಅಂಗಡಿ, ಮನೆ, ಮಾರುಕಟ್ಟೆ ಸೇರಿ ಸ್ಥಳೀಯ ಓಡಾಟಕ್ಕೆ ಹೆಚ್ಚು ಅನುಕೂಲಕರವಾಗಿದೆ. ಒಟ್ಟು 40-50 ಸಾವಿರ ರೂಪಾಯಿ ಖರ್ಚಿನಲ್ಲಿ ಈ ಬೈಕ್ ರೂಪಗೊಂಡಿದೆ. ಈ ಬೈಕ್ ಪರಿಸರ ಸ್ನೇಹಿಯಾಗಿದೆ. ವೇಗಮಿತಿ 30 ಕಿ.ಮೀ ಇರುವುದರಿಂದ ಬೈಕ್ ಗೆ ಯಾವುದೇ ನೋಂದಣಿ ಅಥವಾ ಪರವಾನಗಿ ಅವಶ್ಯಕತೆಯಿಲ್ಲ ಎನ್ನುತ್ತಾರೆ ತಯಾರಕರು. ಈ ಸ್ನೇಹಿತರಿಂದ ಒಟ್ಟು 3 ಬೈಕ್ ತಯಾರಾಗಿದೆ.

ವಯೋವೃದ್ಧರಿಗೆ ಲೈಟ್ ವೇಟ್ ಬೈಕ್
ಇದೇ ಜೋಡಿ ವಯೋವೃದ್ಧರಿಗಾಗಿ ಮತ್ತೊಂದು ವಿಶೇಷ ಬೈಕ್ ತಯಾರು ಮಾಡಿದ್ದಾರೆ. ವಯೋವೃದ್ಧರಿಗೆ ಅನುಕೂಲವಾಗಲೆಂದು ಲೈಟ್ ವೇಟ್ ಬೈಕ್ ಸಹ ಹೊರ ತಂದಿದ್ದಾರೆ. ಲಿಥಿಯಂ ಬ್ಯಾಟರಿ ಆಳವಡಿಸಿರುವ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು 75ನೇ ಸ್ವಾತಂತ್ರ್ಯೋತ್ಸವದ ವೇಳೆ ಲಾಂಚ್ ಮಾಡಿದ್ದಾರೆ. 2 ಗಂಟೆ ಚಾರ್ಜ್ ಮಾಡಿದರೆ 30-40 km ದೂರ ಹೋಗುತ್ತದೆ. ಲಾಂಚ್ ಮಾಡಿದ ದಿನವೇ ಎರಡು ಗಾಡಿ ಆರ್ಡರ್ ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಖಾಲಿ ಕುಳಿತ ಇಬ್ಬರೂ ಸ್ನೇಹಿತರು ಸೇರಿ ಎಲೆಕ್ಟ್ರಿಕ್ ಬೈಕ್ ತಯಾರು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗ್ತಿದೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications