ಜಮಖಂಡಿಯಲ್ಲಿ ವಾರದ ಸಂತೆಗೆ ಬಂದು ತರಕಾರಿ ಖರೀದಿಸಿದ ಸುಧಾಮೂರ್ತಿ
Recommended Video
ಜಮಖಂಡಿ, ಫೆಬ್ರುವರಿ 3: ಸರಳತೆಗೆ ಹೆಸರಾಗಿರುವ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನಿನ್ನೆ ನಗರದ ಎಪಿಎಂಸಿ ಆವರಣದಲ್ಲಿ ವಾರದ ಸಂತೆಗೆ ಜನ ಸಾಮಾನ್ಯರಂತೆ ಬೆಳಿಗ್ಗೆ ಬಂದು ಸಂತೆ ತುಂಬೆಲ್ಲ ಅಡ್ಡಾಡಿ ರೈತರು, ರೈತ ಮಹಿಳೆಯರ ಯೋಗಕ್ಷೇಮದ ಮಾತುಗಳಾಡಿದರು. ಜೊತೆಗೆ ತರಕಾರಿ, ಹೂವು ಸೇರಿದಂತೆ ದಿನಬಳಕೆ ವಸ್ತುಗಳನ್ನು ಸಂತೆಯಲ್ಲಿ ಖರೀದಿಸಿದರು.
ಜಮಖಂಡಿ ತಾಲ್ಲೂಕಿನ ಶೂರ್ಪಾಲಿಯ ಮನೆದೇವರು ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಸುಧಾಮೂರ್ತಿ ಅವರು ಶನಿವಾರ ಸಂಜೆ ಕುಂಚನೂರು ರಸ್ತೆಯ ಕೆಎಚ್ ಬಿ ಕಾಲೊನಿ ದಾನಮ್ಮನ ಗುಡಿ ಬಳಿಯ ಸೋದರಳಿಯ (ತಮ್ಮನ ಮಗ) ನಾರಾಯಣ ಕುಲಕರ್ಣಿ ಅವರ ಮನೆಗೆ ಆಗಮಿಸಿ ಉಳಿದುಕೊಂಡಿದ್ದರು. ನಂತರ ಮಾರನೇ ದಿನ ಜಮಖಂಡಿಯಲ್ಲಿ ನಡೆಯುವ ಭಾನುವಾರ ಸಂತೆಗೆ ಬಂದು ಖರೀದಿ ಮಾಡಿದರು.

ರೈತರ ಯೋಗ ಕ್ಷೇಮ ವಿಚಾರಿಸಿದ ಸುಧಾಮೂರ್ತಿ
ಸಂತೆಯಲ್ಲಿ ಸೌತೆ, ಗಜ್ಜರಿ, ಕೊತ್ತಂಬರಿ, ಬದನೆ, ಹೂವು, ಕಡ್ಲಿ ಪಲ್ಲೆ, ಬಾಳೆ ಹಣ್ಣು, ದಾಳಿಂಬೆ ಸೇರಿದಂತೆ ಈ ಭಾಗದಲ್ಲಿ ಸಿಗುವ ತರಕಾರಿಗಳನ್ನು ತೆಗೆದುಕೊಂಡ ಸುಧಾಮೂರ್ತಿ ಅವರು ಪರಿಚಯಸ್ಥರಂತೆ ಮಳೆ ಬೆಳೆ ಹೇಗಿದೆ, ಹೊಲದಲ್ಲಿ ಏನೆಲ್ಲ ಬೆಳೆಯುತ್ತೀರಿ ಎಂದು ರೈತರ ಜೊತೆ ಕುಶಲೋಪರಿ ವಿಚಾರಿಸಿಕೊಂಡರು. ಮಹಿಳೆಯರ ಜೊತೆ ಆತ್ಮೀಯತೆಯಿಂದ ಮಾತನಾಡುತ್ತಾ ಜನಸಾಮಾನ್ಯರಂತೆ ಸಂತೆ ತುಂಬಾ ಅಡ್ಡಾಡಿದರು.

ತಾಜಾ ತರಕಾರಿ ಕಂಡು ಖುಷಿಪಟ್ಟರು
ಈ ಭಾಗದಲ್ಲಿ ತರಕಾರಿಯನ್ನು ಕಿತ್ತು ಅದೇ ದಿನ ಮಾರುತ್ತಾರೆ. ಇಲ್ಲಿ ಬಹಳ ಕಡಿಮೆ ದರದಲ್ಲಿ ಉತ್ತಮ ತರಕಾರಿ ಸಿಗುತ್ತದೆ, ಇಂತಹ ಶುದ್ಧ ತರಕಾರಿ ದೊಡ್ಡದೊಡ್ಡ ನಗರಗಳಲ್ಲಿ ಸಿಗುವುದಿಲ್ಲ. ಹಲವಾರು ದಿನಗಳ ಕಾಲ ಸಂಸ್ಕರಿಸಿ ಇಟ್ಟಿರುತ್ತಾರೆ. ಇಲ್ಲಿ ತಾಜಾ ತರಕಾರಿ ಸಿಗುತ್ತದೆ ಎಂದು ಖುಷಿ ಪಟ್ಟರು ಸುಧಾಮೂರ್ತಿಯವರು. ಹಾಗೆ ಖುಷಿಯಿಂದಲೇ ಮನೆಗೆ ತರಕಾರಿಗಳನ್ನೂ ಕೊಂಡುಕೊಂಡರು.

ನಮ್ಮೂರ ಸಂತೆಗೆ ಬಂದಿದ್ದರು ಎಂದು ಖುಷಿಪಟ್ಟ ಜನ
ಸಂತೆಯಿಂದ ಅವರು ಹೊರಹೋದ ಮೇಲೆ ಸಂತೆಗೆ ಸುಧಾಮೂರ್ತಿಯವರು ಬಂದಿದ್ದರು ಎಂಬ ವಿಷಯ ಹರಡುತ್ತಿದ್ದಂತೆ, ಸುಧಾಮೂರ್ತಿಯವರು ನಮ್ಮೂರ ಸಂತೆಗೆ ಬಂದಿದ್ದರು ಎಂದು ನಗರದಲ್ಲಿ ಎಲ್ಲರಲ್ಲಿ ಹರ್ಷ ಮೂಡಿಸಿತು. ಜನರು ವಿಷಯ ತಿಳಿದು ಖುಷಿಪಟ್ಟರು. ಸುಧಾಮೂರ್ತಿ ಅವರಂಥ ದೊಡ್ಡವರು ನಮ್ಮೂರ ಸಂತಿಗೆ ಬಂದು ಸಾಮಾನ್ಯರಂತೆ ಸಂತೆ ಮಾಡುತ್ತಾರೆ ಎಂದರೆ ಅದು ಖುಷಿ ವಿಷಯ. ಅವರು ನಮಗೆ ಗುರುತು ಸಿಕ್ಕಿದ್ದರೆ ಅವರ ಜೊತೆ ಒಂದು ಫೋಟೊ ತೆಗೆದುಕೊಳ್ಳುತಿದ್ದೆವು ಎಂದು ಖುಷಿ ಪಟ್ಟರು ಸಂತೆ ವ್ಯಾಪಾರಸ್ಥರು.

"ಮನೆಯಲ್ಲೇ ತರಕಾರಿ ಬೆಳೆಯುವರು"
"ಸುಧಾಮೂರ್ತಿ ಅವರು ತಮ್ಮ ಮನೆಯ ತೋಟದಲ್ಲಿ ತರಕಾರಿ, ಹಣ್ಣುಗಳನ್ನು ಬೆಳೆಸುತ್ತಾರೆ, ಅವರು ಸಂತೆಗೆ ಹೋಗುವದಿಲ್ಲ. ಆದರೆ ಅವರಿಗೆ ತವರೂರಿನ ಭಾಗದಲ್ಲಿ ಬೆಳೆಯುವ ತರಕಾರಿ ಎಂದರೆ ಅಚ್ಚುಮೆಚ್ಚು, ಕಡ್ಲಿ ಪಲ್ಲೆ ಒಳ್ಳೆ ಟೆಸ್ಟ್ ಇರುತ್ತೆ ಎಂದು ಅವರೇ ನನಗೆ ಹೇಳುತ್ತಾರೆ, ಈ ಭಾಗದಲ್ಲಿ ಬಂದಾಗ ತರಕಾರಿಯನ್ನು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ" ಎಂದರು ಅವರ ಸೋದರಳಿಯ ನಾರಾಯಣ ಕುಲಕರ್ಣಿ. ನಂತರ ಅವರು ಶೂರ್ಪಾಲಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿ ರಸ್ತೆ ಮಾರ್ಗವಾಗಿ ಬಾಗಲಕೋಟಕ್ಕೆ ತೆರಳಿದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications