ಬಾಗಲಕೋಟೆ: ಮಳೆ ಬಂದರೆ ಈ ಹತ್ತು ಹಳ್ಳಿ ಜನರ ಸಂಚಾರಕ್ಕೆ ದೋಣಿಯೇ ಗತಿ
ಬಾಗಲಕೋಟೆ, ಜುಲೈ 21: ಬಾಗಲಕೋಟೆ-ಬೆಳಗಾವಿ ಸುತ್ತಮುತ್ತ ಭಾರಿ ಮಳೆಯಾದರೆ ಘಟಪ್ರಭೆ ನದಿ ತುಂಬಿ ಹರಿಯುತ್ತದೇ. ನದಿ ತುಂಬಿ ಹರಿದರೆ ಒಂದೆಡೆ ಸಂತಸವಾದರೆ ಇತ್ತ ನದಿಯ ದಡದ ಸಮೀಪ ಇರುವ ಹತ್ತಕ್ಕೂ ಹೆಚ್ಚು ಜನರಿಗೆ ಸಂಕಷ್ಟ ಪ್ರಾರಂಭವಾಗುತ್ತದೆ.
ಕದಾಂಪುರ. ಸಾಳಗೊಂದಿ, ಯಂಕಂಚಿ, ಸಿದ್ನಾಳ, ಸಿಂದಗಿ. ಯಳ್ಳಿಗುತ್ತಿ, ಸೋರಕೊಪ್ಪ ಸೇರಿದಂತೆ ಹತ್ತಾರು ಗ್ರಾಮಗಳು ಘಟಪ್ರಭಾ ನದಿಯ ಸುತ್ತಮುತ್ತ ಇವೆ. ದಿನ ನಿತ್ಯ ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಬಂದು ಹೋಗಲು ಈ ಗ್ರಾಮಸ್ಥರಿಗೆ ಬಂದರು ಮತ್ತು ಒಳನಾಡ ಜಲಸಾರಿಗೆಯ ಬೋಟ್ ವ್ಯವಸ್ಥೆಯೇ ಇವರಿಗೆ ಆಶ್ರಯವಾಗಿದೆ.
ಬೇಸಿಗೆ ಕಾಲದಲ್ಲಿ ಸುಮಾರು ಐದು ತಿಂಗಳು ಕಾಲ ಬೋಟ್ ವ್ಯವಸ್ಥೆ ಸ್ಥಗಿತಗೊಂಡಿರುತ್ತದೆ. ಆದರೆ ಮಳೆಗಾಲದಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹ ವಾಗುವುದರಿಂದ ಸುಮಾರು ಮೂರ್ನಾಲ್ಕು ತಿಂಗಳು ಈ ಗ್ರಾಮದ ಜನರು ಸಂಚಾರಕ್ಕೆ ಬೋಟನ್ನೇ ಆಶ್ರಯಿಸುತ್ತಾರೆ.

ಯಂತ್ರಚಾಲಿತ ಬೋಟ್
ಯಂತ್ರಚಾಲಿತ ಬೋಟ್ ಇಲ್ಲಿ ಇದ್ದು ಇದರಲ್ಲಿ ನಗರಕ್ಕೆ ಬರಲು ಬರೀ ಈ ಗ್ರಾಮಗಳಿಂದ 2 ಕೀ.ಮೀ ಇದೆ.ಪ್ರಯಾಣದ ವೆಚ್ಚವೂ ಸಹ ರೂ.5 ಮಾತ್ರ ತಗಲುತ್ತದೆ. ನದಿಯಬೋಟ ಮೂಲಕ ಬರದೇ ಸುತ್ತು ಹಾಕಿ ಬಂದರೆ ಸುಮಾರು 30 ಕೀ. 30 ರಿಂದ 40 ರೂ.ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಬಾಗಲಕೋಟೆ ತಲುಪಲು ಖರ್ಚಾಗಲಿದೆ.

ಆಲಮಟ್ಟಿ ಜಲಾಶಯದಿಂದ ಸೂರು ಕಳೆದುಕೊಂಡವರು
ಕದಾಂಪುರ, ಸಿಂದಗಿ, ಸಿದ್ನಾಳ, ಗ್ರಾಮಗಳ ಜನರು ಭೂಮಿ ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಕಳೆದುಕೊಂಡು ತ್ಯಾಗಿಗಳಾಗಿದ್ದಾರೆ. ಮನೆ ಮಾತ್ರ ಊರುಗಳಲ್ಲಿ ಉಳಿದಿವೆ ಆ ಸಂದರ್ಭದಲ್ಲಿ ಅವರಿಗೆ ಜಮೀನು ಕಳೆದುಕೊಂಡಾಗ ಸರ್ಕಾರ ಪರಿಹಾರ ನೀಡಿದ್ದು ಬಿಡಿಗಾಸು ಮಾತ್ರ.

ಅರ್ಧ ಊರು ಮುಳುಗಡೆ ಆಗಿದೆ
ಆದರೆ ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ ಈಗಾಗಲೇ ಅರ್ಧ ಭಾಗ ಜಮೀನು ಮತ್ತು ಊರುಗಳು ಮುಳುಗಡೆ ಆಗಿವೆ ಆದರೆ 525.256 ಮೀಟರ್ ಎತ್ತರಿಸಿದಾಗ ಮಾತ್ರ ಈ ನದಿ ಪಕ್ಕದಲ್ಲಿ ಗ್ರಾಮಗಳು ಸಂಪೂರ್ಣ ಮುಳಗಡೆ ಆಗಲಿವೆ. ಆದರೆ ಈಗಾಗಲೇ ಈ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲಿಗೆ ಜನರು ಸ್ಥಳಾಂತರಗೊಂಡಿಲ್ಲ.

ಇರುವ ಜಮೀನಿನಲ್ಲೇ ಕೃಷಿ
ತಮ್ಮ ಊರುಗಳಲ್ಲಿಯೇ ಇನ್ನೂ ಅರ್ಧಭಾಗ ಮುಳಗಡೆಯಾಗದೇ ಉಳಿದಿರುವ ಜಮೀನಿನಲ್ಲಿ ಉಳಮೆ ಮಾಡಿಕೊಂಡು ಜಾನುವಾರಗಳನ್ನು ಸಾಕುತ್ತಿದ್ದಾರೆ. ಪುನರ್ವಸತಿಗೆ ಹೋದರೆ ಧನಕರಗಳನ್ನ ಮೇಯಿಸಲು ಅಲ್ಲಿ ನಮಗೆ ಸರಿಯಾದ ವ್ಯವಸ್ಥೆ ಇಲ್ಲ, ಮೇವು ಸಿಗುವುದಿಲ್ಲ ಹೀಗಾಗಿ ಇಲ್ಲಿಯೇ ವಾಸವಾಗಿದ್ದೇವೆ. ನದಿ ತುಂಬಿದಾಗ ಮೂರ್ನಾಲ್ಕು ತಿಂಗಳ ತ್ರಾಸ್ ಆಗತೈತಿ ಮುಂದೆ ಮತ್ತೆ ನಮ್ಮ ಜೀವನ ನಡಿತೈತಿ ಎನ್ನುತ್ತಾರೆ ಗ್ರಾಮಸ್ಥರು.

ಪ್ರತಿನಿತ್ಯ ನೂರಾರು ಜನ ಸಂಚಾರ
ಹತ್ತಾರು ಗ್ರಾಮಗಳಿಂದನಿತ್ಯ ಜನರು ವ್ಯಾಪಾರ ಮಾಡಲು, ಸಾಮಾನು ಖರೀದಿಸಲು, ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ಇವರನ್ನು ಐದು-ಹತ್ತು ನಿಮಿಷದಲ್ಲಿ ಆ ದಡದಿಂದ ಈ ದಡಕ್ಕೆ ಸುರಕ್ಷಿತವಾಗಿ ತಲುಪಿಸುತ್ತೇನೆ.
ಅದೇ ರೀತಿ ತುರ್ತು ಸಂದರ್ಭದಲ್ಲಿ ಯಾರಿಗಾದರೂ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾದರೆ ಹಾಗೂ ಹೆರಿಗೆ ಮಹಿಳೆಯರು ಆಸ್ಪತ್ರೆಗೆ ಹೋಗುವ ಸಂದರ್ಭಬಂದಾಗ ನನಗೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿದರೆ ಹೋಗುತ್ತೇನೆ ಎನ್ನುತ್ತಾರೆ ಬೋಟ್ ಚಾಲಕ ಕಲ್ಲಪ್ಪ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications