Get Updates
Get notified of breaking news, exclusive insights, and must-see stories!

ವಿಜಯವಾಡ ಬೆಂಕಿ ದುರಂತ; ಆಸ್ಪತ್ರೆಯ ಮೂವರ ಬಂಧನ

ಅಮರಾವತಿ, ಆಗಸ್ಟ್ 10 : ವಿಜಯವಾಡದಲ್ಲಿರುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಜನರನ್ನು ಬಂಧಿಸಲಾಗಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, 10 ರೋಗಿಗಳು ಘಟನೆಯಲ್ಲಿ ಮೃತಪಟ್ಟಿದ್ದರು.

Recommended Video

      ಕೇಂದ್ರದ ಮುಂದೆ ಪರಿಹಾರ ಕೇಳೋಕೆ ಇವರಿಗೆ ಧಮ್ ಇಲ್ಲ | Oneindia Kannada

      ಸೋಮವಾರ ವಿಜಯವಾಡ ಪೊಲೀಸರು ರಮೇಶ್ ಆಸ್ಪತ್ರೆಯ ಮೂವರ ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಈ ಆಸ್ಪತ್ರೆಯೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹೋಟೆಲ್‌ ಬಾಡಿಗೆಗೆ ಪಡೆದಿತ್ತು.

      ಆಸ್ಪತ್ರೆಯ ಸಿಒಒ, ಜನರಲ್ ಮ್ಯಾನೇಜರ್, ರಾತ್ರಿ ಪಾಳಿಯ ಮ್ಯಾನೇಜರ್ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಆದೇಶ ನೀಡಿದೆ.

      Fire Accident At Vijayawada Hotel Three Hospital Officials Arrested

      ಪೊಲೀಸ್, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದೆ. ಹೋಟೆಲ್ ಬಾಡಿಗೆಗೆ ಪಡೆದ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆಯಲು ತಂಡ ಆಸ್ಪತ್ರೆಯ ಮುಖ್ಯಸ್ಥರ ಮನೆಯಲ್ಲಿ ಪರಿಶೀಲನೆ ಸಹ ನಡೆಸಿದೆ.

      ಆಸ್ಪತ್ರೆಯ ಮುಖ್ಯಸ್ಥರು ವಿಡಿಯೋ ಸಂದೇಶವೊಂದನ್ನು ನೀಡಿದ್ದು, ಹೋಟೆಲ್‌ನಲ್ಲಿ ಅಗ್ನಿ ಅವಘಢ ಸಂಭವಿಸದಂತೆ ಎಚ್ಚರಿಕೆ ಕೈಗೊಳ್ಳುವುದು ಹೋಟೆಲ್‌ನ ಜವಾಬ್ದಾರಿಯಾಗಿದೆ. ಈ ಬಗ್ಗೆ ಒಪ್ಪಂದದಲ್ಲಿಯೂ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

      ಹೋಟೆಲ್‌ನಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರ ಆಸ್ಪತ್ರೆಯ ಕಾರ್ಯವಾಗಿದೆ. ಅಲ್ಲಿನ ನಿರ್ವಹಣೆಯನ್ನು ಹೋಟೆಲ್‌ ನೋಡಿಕೊಳ್ಳಬೇಕು. ಹೋಟೆಲ್ ಎರಡು ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಮುಖ್ಯಸ್ಥರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+