Fact Check: ಬುರ್ಖಾ ಧರಿಸಿದ್ದ ಆರೆಸ್ಸೆಸ್ ಕಾರ್ಯಕರ್ತನ ಕೈಲಿ ಪಾಕ್ ಧ್ವಜ?
ಅಮರಾವತಿ, ಆ. 19: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಳೆದರೂ ವೈರಲ್ ವಿಡಿಯೋವೊಂದು ಭಾರಿ ಸದ್ದು ಮಾಡಿತ್ತು. ಬುರ್ಖಾಧಾರಿಯೊಬ್ಬರನ್ನು ನಡು ರಸ್ತೆಯಲ್ಲಿ ಪೊಲೀಸರು ಬುರ್ಖಾ ತೆಗೆಯುವಂತೆ ಆಗ್ರಹಿಸುತ್ತಿರುತ್ತಾರೆ. ಆ ವ್ಯಕ್ತ ಕೈಯಲ್ಲಿ ಪಾಕಿಸ್ತಾನ ಧ್ವಜವಿತ್ತದೆ. ಈ ವ್ಯಕ್ತಿ ಆರೆಸ್ಸೆಸ್ ಕಾರ್ಯಕರ್ತ ಎಂದು ಸುಳ್ಳು ಸುದ್ದಿ ಹಬ್ಬಿಸಿ ವಿವಿಧ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಹಬ್ಬಿಸಲಾಯಿತು.
Recommended Video
ತನ್ನನ್ನು ಕಾಂಗ್ರೆಸ್ ಕಾರ್ಯಕರ್ತ ಎಂದು ಕರೆದುಕೊಂಡಿರುವ ರಾಜು ಉಪ್ಮಾನ್ ಎಂಬಾತ ಈ ವಿಡಿಯೋ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಬರೆದಿದ್ದನ್ನು ಭಾಷಾಂತರಿಸಿದರೆ.. ಈ ಆರೆಸ್ಸೆಸ್ ವ್ಯಕ್ತಿ ಬುರ್ಖಾ ಧರಿಸಿಕೊಂಡು ಪಾಕಿಸ್ತಾನ ಬಾವುಟ ತೋರಿಸುತ್ತಿದ್ದಾನೆ, ಈ ಮೂಲಕ ಇಲ್ಲಿನ ಮುಸ್ಲಿಮರಿಗೆ ಅಪಮಾನ ಮಾಡುವುದು ಆತನ ಉದ್ದೇಶ ಎನ್ನಲಾಗಿತ್ತು.
बुर्का पहनकर पाकिस्तान का झंडा लहरा रहा था यह आर . एस .एस . का भड़वा। @ProfNoorul जी ,@NayakRagini जी, @LambaAlka जी, pic.twitter.com/3CmLtiqZ14
— RAJU UPMAN (@RajuUpman13) August 15, 2020

ಆದರೆ, ವಿಡಿಯೋ ಹಾಗೂ ರಾಜು ಅವರ ಟ್ವೀಟ್ ಸತ್ಯಾಸತ್ಯತೆ ಪರಿಶೀಲಿಸಿದಾಗ ಸತ್ಯ ಬೇರೆಯಾಗಿದೆ. ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ಮಾರ್ಗಮಧ್ಯದಲ್ಲಿ ತಡೆದು ಬಂಧಿಸಿದ ದೃಶ್ಯ ಇದಾಗಿದೆ. ಬುರ್ಖಾ ಧರಿಸಿದ ವ್ಯಕ್ತಿ ಆರೆಸ್ಸೆಸ್ ಕಾರ್ಯಕರ್ತನಲ್ಲ, ಅಕ್ರಮ ಮದ್ಯ ಸಾಗಾಟ ಗುಂಪಿನ ಸದಸ್ಯನಾಗಿದ್ದು, ತನ್ನ ಗುರುತು ಪತ್ತೆಯಾಗದಿರಲಿ ಎಂದು ಬುರ್ಖಾ ಧರಿಸಿದ್ದ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶ ಪೊಲೀಸರು ನಡು ರಸ್ತೆಯಲ್ಲೇ ಬುರ್ಖಾ ತೆಗೆಸಿ, ಆತನ ಸ್ಮಗಲಿಂಗ್ ಗ್ಯಾಂಗ್ ಜೊತೆ ಸಾಲಾಗಿ ಕುಳಿತುಕೊಳ್ಳಲು ಸೂಚಿಸುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಆಂಧ್ರದ ಕರ್ನೂಲ್ ಜಿಲ್ಲೆಯ ಪಂಚಲಿಂಗಲಾ ಚೆಕ್ ಪೋಸ್ಟ್ ಬಳಿ ನಡೆದ ಘಟನೆ ಇದಾಗಿದೆ ಎಂದು ಖಚಿತಪಡಿಸಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications