ಆಧಾರ್ ಕಾರ್ಡ್ ನಲ್ಲಿ ಜಾತಿ ಗೊಂದಲ; ಮದುವೆಯೇ ರದ್ದುಗೊಳಿಸಿದ ವರ
ಗುಂಟೂರು (ಆಂಧ್ರಪ್ರದೇಶ), ಜೂನ್ 25: ವಧುವಿನ ಜಾತಿಯ ಬಗ್ಗೆ ಅನುಮಾನಗೊಂಡು ಕೊನೆ ಕ್ಷಣದಲ್ಲಿ ಮದುವೆಯನ್ನು ರದ್ದು ಮಾಡಿದ ಘಟನೆ ಭಾನುವಾರ ರಾತ್ರಿ ಪೆದಕಾಕನಿಯಲ್ಲಿ ನಡೆದಿದೆ. ಆ ನಂತರ ವಧುವಿನ ಕಡೆಯವರು ಕ್ರೊಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ಸರಿಯಾದ ಕಾರಣ ನೀಡದೆ ಹುಡುಗನ ಕಡೆಯವರು ಮದುವೆ ರದ್ದು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ: ಪೆದಕಾಕನಿಯಲ್ಲಿರುವ ಭ್ರಮರಾಂಭ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆ ನಿಗದಿ ಆಗಿತ್ತು. ದೇವಾಲಯದ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸುವ ಸಲುವಾಗಿ ಗಂಡು ಹಾಗೂ ಹೆಣ್ಣಿನ ಕಡೆಯವರಿಂದ ಆಧಾರ್ ಕಾರ್ಡ್ ಅನ್ನು ಪುರೋಹಿತರು ಕೇಳಿದ್ದಾರೆ.
ಆಧಾರ್ ನಲ್ಲಿ ವಧುವಿನ ಹೆಸರು ಶಾರದಾ ಹಾಗೂ ಆಕೆಯ ತಂದೆ ಹೆಸರು ಪಿಡುಗು ಆಂಜನೇಯಲು ಎಂದು ದಾಖಲಾಗಿದೆ. ಅದರಲ್ಲಿ ರೆಡ್ಡಿ ಎಂದು ನಮೂದಾಗಿರಲಿಲ್ಲ. ಏಕೆಂದರೆ, ತಾವು ಆ ಜಾತಿಗೆ ಸೇರಿದವರು ಎಂದು ಹುಡುಗಿಯ ಕಡೆಯವರು ತಿಳಿಸಿದ್ದರು.

ಪುರೋಹಿತರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹುಡುಗನ ಕಡೆಯವರು ಈ ಬಗ್ಗೆ ಮತ್ತಷ್ಟು ಅನುಮಾನ ವ್ಯಕ್ತಪಡಿಸಿದಾಗ ಜಗಳ ಏರ್ಪಟ್ಟಿದೆ. ವರ ವೆಂಕಟರೆಡ್ಡಿ ಮತ್ತು ಆತನ ತಂದೆ ಮುನ್ನಗಿ ಅಪ್ಪಿ ರೆಡ್ಡಿ, ಸತ್ತೇನಪಲ್ಲಿ ಮಂಡಲದ ಗುಡಿಪಾಡು ಹಳ್ಳಿಯವರು ಮದುವೆಯನ್ನು ರದ್ದು ಮಾಡಿದ್ದಾರೆ.
ಆದರೆ, ಗದೇವಾರಿಪಲ್ಲಿಯ ಪಿಡುಗು ಆಂಜನೇಯಲು ಹೇಳುವ ಪ್ರಕಾರ, ತಾವು ಪಿಚಿಕುಂಟ ರೆಡ್ಡಿ ಸಮುದಾಯಕ್ಕೆ ಸೇರಿದವರಾದರೂ ಹೆಸರಿನ ಜತೆಗೆ ರೆಡ್ಡಿ ಎಂದು ಸೇರಿಸುವ ಪರಿಪಾಠ ಇಲ್ಲ. ಆದರೆ ಹುಡುಗನ ಕಡೆಯವರು ಈ ಉತ್ತರಕ್ಕೆ ತೃಪ್ತರಾಗದೆ, ಮದುವೆಯನ್ನೇ ರದ್ದು ಮಾಡಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications