ತುಳಸಿರಾಮ್ ಎನ್ ಕೌಂಟರ್ : ಅಮಿತ್ ಶಾ ವಿರುದ್ಧ ಕೊಲೆ ಸಂಚು ಆರೋಪ

ಅಹಮದಾಬಾದ್, ನವೆಂಬರ್ 22: ತುಳಸೀರಾಮ್ ಪ್ರಜಾಪತಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಐಪಿಎಸ್ ಅಧಿಕಾರಿ ದಿನೇಶ್ ಎಂಎನ್, ರಾಜಕುಮಾರ್ ಪಾಂಡಿಯನ್ ಹಾಗೂ ಡಿ.ಜಿ. ವಂಝಾರ ಅವರು ಮುಖ್ಯ ಸಂಚುಕೋರರರು ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಗುಜರಾತಿನಲ್ಲಿ 2006ರಲ್ಲಿ ನಡೆದ ತುಳಸೀರಾಂ ಪ್ರಜಾಪತಿ 'ನಕಲಿ ಎನ್‍ಕೌಂಟರ್' ಘಟನೆಯ ಮುಖ್ಯ ಸಂಚುಕೋರರು, 'ರಾಜಕಾರಣಿಗಳ ಹಾಗೂ ಕ್ರಿಮಿನಲ್'ಗಳ ಸಂಚು ರೂಪಿಸಿದ್ದರು ಎಂದು ಪ್ರಕರಣದ ಮುಖ್ಯ ತನಿಖಾಧಿಕಾರಿ, ಏಪ್ರಿಲ್ 2012ರಿಂದ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದ ಸಂದೀಪ್ ತಾಮ್ಗಡ್ಗೆ ಅವರು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.

ಅಮಿತ್ ಶಾ ಹಾಗೂ ರಾಜಸ್ಥಾನದ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಎಂದು ಅವರು ಹೆಸರಿಸಲಾಗಿತ್ತು. ವಿಫುಲ್ ಅಗರವಾಲ್, ಆಶೀಶ್ ಪಾಂಡ್ಯ, ಎನ್ ಎಚ್ ಧಬಿ, ಜಿ ಶ್ರೀನಿವಾಸ್ ರಾವ್ ಅವರ ವಿರುದ್ಧ ಸಾಕ್ಷ್ಯ ಸಂಗ್ರಹಿಸಲಾಗಿದೆ.

 Tulsiram Prajapati encounter: Amit Shah, 3 IPS officers among main conspirators, say probe officer

ಆರೋಪಿಗಳ ಕರೆ ಮಾಹಿತಿ ವಿವರಗಳು ಅವರು ಸಂಚು ಹೂಡಿದ್ದನ್ನು ದೃಢಪಡಿಸುತ್ತದೆ ಎಂದೂ ತಾಮ್ಗಡ್ಗೆ ಹೇಳಿಕೊಂಡರು. ಒಂದು ನಿರ್ದಿಷ್ಟ ಸಮಯದಲ್ಲಿ ಒಬ್ಬ ವ್ಯಕ್ತಿ ಎಲ್ಲಿದ್ದನೆಂಬುದನ್ನು ಪತ್ತೆ ಹಚ್ಚಲು ಕರೆ ಮಾಹಿತಿ ವಿವರಗಳು ಉತ್ತಮ ಸಾಕ್ಷ್ಯವಾಗಿದೆ.

2005ರಲ್ಲಿ ಸೊಹ್ರಾಬುದ್ದೀನ್ ಶೇಖ್, ತುಳಸೀರಾಂ ಹಾಗೂ ಅಜಂ ಖಾನ್, ಕೌಸರ್ ಬಿ ಮತ್ತು ಪ್ರಜಾಪತಿ ನವೆಂಬರ್ 23, 2005ರಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ನವೆಂಬರ್ 26ರಂದು ಎನ್ ಕೌಂಟರ್ ಆದರು. ಕೌಸರ್ ಬಿ ದೇಹ ಸಿಕ್ಕಿಲ್ಲ, 2006ರಲ್ಲಿ ಪ್ರಜಾಪತಿ ಎನ್ ಕೌಂಟರ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+