ರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ಆಟಿಕೆ ವ್ಯಾಪಾರಿ ಬಂಧನ
ಅಹಮದಾಬಾದ್, ಜೂನ್ 1: ರೈಲಿನಲ್ಲಿ ಆಟಿಕೆಗಳನ್ನು ಮಾರಾಟ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕಾರಣಿಗಳನ್ನು ಮಿಮಿಕ್ರಿ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಗುಜರಾತ್ನ ಸೂರತ್ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಆಟಿಕೆ ವ್ಯಾಪಾರಿ ಅವಧೇಶ್ ದುಬೆ ಎಂಬಾತನನ್ನು ರೈಲ್ವೆ ಸುರಕ್ಷತಾ ಪಡೆ ಸಿಬ್ಬಂದಿ ಶುಕ್ರವಾರ ಬಂಧಿಸಿದ್ದಾರೆ. ಈತ ರಾಜಕಾರಣಿಗಳ ಧ್ವನಿಯನ್ನು ಅಣಕಿಸಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ ಈತನಿಗೆ ಮುಳುವಾಗಿ ಪರಿಣಮಿಸಿದೆ.
ರೈಲ್ವೆ ಪೊಲೀಸರ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಜಕಾರಣಿಗಳನ್ನು ಅಣಕಿಸಿ ಮಾತನಾಡಿದ್ದಕ್ಕೆ ಬಡ ವ್ಯಾಪಾರಿಯೊಬ್ಬನನ್ನು ಬಂಧಿಸುವುದು ಎಷ್ಟು ಸರಿ? ಆತನ ಮಾಡಿದ ಅಪರಾಧ ಹಾನಿಕರವಲ್ಲ. ಆತ ಜನರನ್ನು ರಂಜಿಸಿದ್ದಾನಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದುಬೆ ವಿರುದ್ಧ ಆರ್ಪಿಎಫ್ ಸಿಬ್ಬಂದಿ ಎಫ್ಐಆರ್ ದಾಖಲಿಸಿದ್ದರು. ಸೆಕ್ಷನ್ 44 (ಜೋರಾಗಿ ಕೂಗುತ್ತಾ ವ್ಯಾಪಾರ ಮಾಡುವುದು ಮತ್ತು ಭಿಕ್ಷಾಟನೆ ನಿಷೇಧ), 145 ಬಿ (ರೈಲ್ವೆ ಬೋಗಿಗಳಲ್ಲಿ ಪ್ರಯಾಣಿಕರಿಗೆ ಉಪದ್ರವ ಕೊಡುವುದು ಅಥವಾ ನಿಂದನಾರ್ಹ ಭಾಷೆಗಳನ್ನು ಬಳಸುವುದು) ಮತ್ತು ಸೆಕ್ಷನ್ 147 (ರೈಲಿನೊಳಗೆ ಅಕ್ರಮವಾಗಿ ಪ್ರವೇಶಿಸುವುದು) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
| Array |
ಅಣಕವೇ ವ್ಯಾಪಾರದ ಕೌಶಲ
ರೈಲಿನಲ್ಲಿ ಪ್ರಯಾಣಿಕರಿಗೆ ಆಟಿಕೆಗಳನ್ನು ಮಾರಾಟ ಮಾಡಲು ಬರುತ್ತಿದ್ದ ದುಬೆ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅನುಕರಿಸುವ, ಅವರನ್ನು ಅಣಕಿಸುವ ಆರು ನಿಮಿಷದ ವಿಡಿಯೋ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆತನ ವ್ಯಾಪಾರದ ಕೌಶಲವನ್ನು ಮೆಚ್ಚಿಕೊಂಡವರೊಬ್ಬರು ವಿಡಿಯೋ ಚಿತ್ರೀಕರಿಸಿದ್ದರು. ಬಳಿಕ ಅದು ಎಲ್ಲೆಡೆ ವೈರಲ್ ಆಗಿತ್ತು.

ವಾರಣಾಸಿ ಮೂಲದ ವ್ಯಕ್ತಿ
ವಾರಣಾಸಿ ಮೂಲದ ದುಬೆ, ಎರಡು ವರ್ಷಗಳ ಹಿಂದೆ ವಲಸಾದ್ಗೆ ವಲಸೆ ಹೋಗಿದ್ದ. ಅಲ್ಲಿ ಅವರು ರೈಲುಗಳಲ್ಲಿ ಪ್ರಯಾಣಿಕರಿಗೆ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ. ಅನಧಿಕೃತ ವ್ಯಾಪಾರ ನಡೆಸಿದ್ದಕ್ಕಾಗಿ ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರ್ಪಿಎಫ್ನ ಇನ್ಸ್ಪೆಕ್ಟರ್ ಈಶ್ವರ್ ಸಿಂಗ್ ಯಾದವ್ ತಿಳಿಸಿದ್ದಾರೆ. ಆತನನ್ನು ಹತ್ತು ವರ್ಷಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
|
ಇತ್ತ ನೋಡಿ ಪಿಯೂಷ್ ಗೋಯಲ್
ಪಿಯೂಷ್ ಗೋಯಲ್ ಸರ್, ರಾಜಕಾರಣಿಗಳನ್ನು ಮಿಮಿಕ್ರಿಮಾಡಿದ ಅವಧೇಶ್ ದುಬೆ ಅವರ ಶೈಲಿಯನ್ನು ಮೆಚ್ಚಿಕೊಂಡ ಉತ್ತಮ ಹಾಸ್ಯ ಪ್ರಜ್ಞೆಯುಳ್ಳ ಜನರೊಂದಿಗೆ ನೀವು ಇರುತ್ತೀರಿ ಎಂದು ನಂಬುತ್ತೇನೆ. ಈ ಪ್ರಕರಣದಲ್ಲಿ ನೀವು ಕೂಡಲೇ ಮಧ್ಯಪ್ರವೇಶಿಸುತ್ತೀರೆಂಬ ವಿಶ್ವಾಸವಿದೆ ಎಂದು ದಿಲೀಪ್ ಥೋಸರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಏಕೆ ಉದ್ಯಮಿಗಳಾಗುವುದಿಲ್ಲ ನೋಡಿ
ಭಯೋತ್ಪಾದನೆ ಆರೋಪಿ ಸಂಸತ್ಗೆ ಹೋಗಬಹುದು. ಆದರೆ ತಮಾಷೆಯಾಗಿ ಮಾತನಾಡುವ ಆಟಿಕೆ ವ್ಯಾಪಾರಿ ಮತ್ತು ಮೋದಿ ಬೆಂಬಲಿಗ ಪ್ರಾಮಾಣಿಕ ಬದುಕಿಗೆ ಪ್ರಯತ್ನಿಸುವ ಅವಧೇಶ್ ದುಬೆ ಅವರನ್ನು ಆರ್ಪಿಎಫ್ ಬಂಧಿಸಿ 10 ದಿನಗಳ ಕಾಲ ಜೈಲಿಗೆ ಕಳುಹಿಸಿದೆ. ಏಕೆಂದರೆ ಆತನ ಬಳಿ 'ಪರ್ಮಿಟ್' ಇರಲಿಲ್ಲ. ಭಾರತೀಯರು ಏಕೆ ಉದ್ಯಮಿಗಳಾಗಲು ಭಯಪಡುತ್ತಾರೆ ಎಂದು ಮುಂದಿನ ಬಾರಿ ಪ್ರಶ್ನಿಸಬೇಡಿ ಎಂದು ಆಕಾಶ್ ಬ್ಯಾನರ್ಜಿ ಎಂಬುವವರು ಕಿಡಿಕಾರಿದ್ದಾರೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications