ನಿಮಗೆ 'ಗ್ಯಾಸ್ ಟ್ರಬಲ್' ಇದೆಯೇ? ನಿಮಗಾಗಿ ಒಂದು ಸ್ಪರ್ಧೆ ಇದೆ ನೋಡಿ
ಅಹಮದಾಬಾದ್, ಸೆಪ್ಟೆಂಬರ್ 16: ಗುಜರಾತ್ನ ಸೂರತ್ನಲ್ಲಿರುವ ರೆಸ್ಟೋರೆಂಟ್ ಒಂದು ವಿಶಿಷ್ಟ ಸ್ಪರ್ಧೆ ಏರ್ಪಡಿಸಿದೆ. ಇದು ಅಂತಿಂಥ ಸ್ಪರ್ಧೆಯಲ್ಲ. ನಿಮ್ಮ 'ಶಕ್ತಿ' ಸಾಮರ್ಥ್ಯಕ್ಕೆ ದೊಡ್ಡ ಸವಾಲು ಇಲ್ಲಿದೆ.
ಅಂದಹಾಗೆ, ಈ ಸ್ಪರ್ಧೆ ಯಾವುದು ಗೊತ್ತೇ? 'ಹೂಸು ಬಿಡುವ ಸ್ಪರ್ಧೆ'. ಕೇಳಲು ವಿಚಿತ್ರ ಹಾಗೂ ಮುಜುಗರ ಉಂಟುಮಾಡಬಹುದು. ಆದರೆ ಜನರಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹುಮ್ಮಸ್ಸು ಮೂಡಿದೆ. ಸೆ. 22ರಂದು ಈ ಸ್ಪರ್ಧೆ ನಡೆಯಲಿದ್ದು, ಸೋಮವಾರದ ವೇಳೆಗಾಗಲೇ 200ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ತರಹೇವಾರ ಹೂಸುಗಳನ್ನು ಬಿಡುವ ಮಂದಿ ನಮ್ಮ ನಡುವೆ ಇದ್ದಾರೆ. ನಮ್ಮ ಒತ್ತಡದ ಬದುಕು, ಅನಾರೋಗ್ಯಕರ ಜೀವನ ಶೈಲಿ ಹೆಚ್ಚಿನವರಲ್ಲಿ ಗ್ಯಾಸ್ ಟ್ರಬಲ್ ಉಂಟುಮಾಡುತ್ತದೆ. ಅದರ ಪರಿಣಾಮ ಅವರ ದೇಹದಲ್ಲಿ ಉಂಟಾಗುವ ವಾಯು ಪದೇ ಪದೇ ಹೊರಹೋಗುತ್ತದೆ. ಸಾರ್ವಜನಿಕವಾಗಿ ವಾಯು ಪ್ರಯೋಗ ಮಾಡಿದರೆ ಮೂಗುಮುಚ್ಚಿಕೊಳ್ಳುವ ಸರದಿ ಜನರದ್ದು. ಕೆಲವರು ಮೌನವಾಗಿಯೇ ತಮ್ಮ ವಾಯು ಶಕ್ತಿ ಪ್ರದರ್ಶಿಸುತ್ತಾರೆ. ಆದರೆ ಈ ಸ್ಪರ್ಧೆಯಲ್ಲಿ ಶಬ್ಧರಹಿತ ಹೂಸು ಮತ್ತು ದುರ್ವಾಸನೆಯನ್ನು ಪರಿಗಣಿಸುವುದಿಲ್ಲ. ಹೀಗಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿಶೇಷ ಪ್ರತಿಭೆ ಅಗತ್ಯ.

ಮೂರು ಬಗೆಯ ಸ್ಪರ್ಧೆ
ಈ ಹೂಸು ಬಿಡುವ ಸ್ಪರ್ಧೆ ಸುಮ್ಮನೆ ಹೂಸು ಬಿಡುವುದಕ್ಕೆ ಸೀಮಿತವಾಗಿಲ್ಲ. ಇಲ್ಲಿ ಮೂರು ವಿಭಿನ್ನ ವಿಭಾಗಗಳಿವೆ. ಈ ಮೂರರಲ್ಲಿ ಗೆದ್ದವರು ಟ್ರೋಫಿಗಳನ್ನು ಗೆಲ್ಲುತ್ತಾರೆ. ಅತ್ಯಂತ ದೀರ್ಘಾವಧಿ, ಅತಿ ಸದ್ದು ಮಾಡುವ ಮತ್ತು ಹೆಚ್ಚು ಸಂಗೀತಮಯ ಹೂಸು ಎಂದು ಸ್ಪರ್ಧೆಗಳನ್ನು ವರ್ಗೀಕರಿಸಲಾಗಿದೆ.

60 ಸೆಕೆಂಡುಗಳ ಸಮಯ
ಪ್ರತಿ ಸ್ಪರ್ಧಿಗೂ ತೀರ್ಪುಗಾರರ ಮುಂದೆ ತಮ್ಮ 'ಪ್ರತಿಭೆ'ಯನ್ನು ಪ್ರದರ್ಶಿಸಲು 60 ಸೆಕೆಂಡುಗಳ ಸಮಯ ನೀಡಲಾಗುತ್ತದೆ. ತೀರ್ಪುಗಾರರಲ್ಲಿ ಒಬ್ಬರು ವೈದ್ಯರು ಇರುತ್ತಾರೆ. ಈ ಸ್ಪರ್ಧೆಯ ಉದ್ದೇಶ ಈ ಮೂರು ವಿಭಾಗಗಳಲ್ಲಿ ಭಾರತದ ಅತ್ಯಂತ ಶ್ರೇಷ್ಠ 'ಹೂಸುಗಾರ'ರನ್ನು ಗುರುತಿಸುವುದಾಗಿದೆ ಎಂದು ಆಯೋಜಕ ಯತಿನ್ ಸಂಗೋಯ್ ತಿಳಿಸಿದ್ದಾರೆ.

ಪ್ರಾಯೋಜಕರ ಹುಡುಕಾಟ
'ಈ ಬಗೆಯ ಸ್ಪರ್ಧೆ ವಿವಿಧ ದೇಶಗಳಲ್ಲಿ ನಡೆಯುತ್ತಿವೆ. ಭಾರತದಲ್ಲಿ ಈ ರೀತಿಯ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲು. ಕೋಲ್ಕತಾ, ದೆಹಲಿ ಮತ್ತು ಜೈಪುರದಂತಹ ಸ್ಥಳಗಳಲ್ಲಿ ನೋಂದಣಿ ಮಾಡಲಾಗುತ್ತಿದೆ' ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕಾಗಿ ಅವರು ಇನ್ನೂ ಪ್ರಾಯೋಜಕರನ್ನು ಹುಡುಕುತ್ತಿದ್ದಾರೆ. ಒಂದು ವೇಳೆ ಪ್ರಾಯೋಜಕರು ಸಿಕ್ಕರೆ ಟ್ರೋಫಿಯ ಜತೆಗೆ ನಗದು ಬಹುಮಾನ ನೀಡುವ ಉದ್ದೇಶ ಅವರದು.

ಆಹಾರದ ಬಗ್ಗೆ ಸಲಹೆ
ಈ ಸ್ಪರ್ಧೆ ತಮಾಷೆಯಾಗಿ ಕಂಡರೂ ಸಂಗೋಯ್ ಮತ್ತು ಅವರ ಸ್ನೇಹಿತ ಮುಲ್ ಸಂಘ್ವಿ ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕಾಗಿ ಫೇಸ್ಬುಕ್ ಪುಟವನ್ನೂ ತೆರೆದಿದ್ದಾರೆ. ಅದರಲ್ಲಿ ಸ್ಪರ್ಧಿಗಳು ಉತ್ತಮವಾಗಿ ಹೂಸು ಬಿಡಲು ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಸಲಹೆಗಳನ್ನೂ ನೀಡುತ್ತಿದ್ದಾರೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications