ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ, ಸೊಳ್ಳೆಗೆ ಬೆಚ್ಚಿದ ಪ್ರೇಮಸೌಧ!
ನವದೆಹಲಿ, ಜುಲೈ 25: ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳಲು ಹೆಣಗುತ್ತಿರುವ ಪ್ರೇಮ ಸೌಧ ತಾಜ್ ಮಹಲ್ ಗೆ ಮತ್ತೊಮ್ಮೆ ಮಾಲಿನ್ಯ ಜೊತೆ ಹೋರಾಟ ಮುಂದುವರೆಸಿದೆ. ಸೊಳ್ಳೆ, ಸಣ್ಣ ಕೀಟಗಳ ಮಲಮೂತ್ರಗಳ ಕಲೆಯಿಂದ ತಾಜ್ ಮಹಲ್ ನ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. 1653ರಲ್ಲಿ ಕಟ್ಟಲ್ಪಟ್ಟ ತಾಜ್ ಮಹಲ್ ನ ಮಾರ್ಬಲ್ ಗೆ ಬಿಳುಪು ಬಣ್ಣದಿಂದ ಹಸಿರು, ಕಪ್ಪು ಬಣ್ಣಕ್ಕೆ ತಿರುಗಿಬಿಟ್ಟಿದೆ ಎಂದು ವರದಿ ಬಂದಿದೆ.
ವಾಯುಮಾಲಿನ್ಯ ವಿಪರೀತದಿಂದಾಗಿ ತಾಜ್ ಮಹಲ್ ಶಿಲೆಗಳು ತನ್ನ ನೈಜ ಬಣ್ಣ ಕಳೆದುಕೊಳ್ಳುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವ ಪ್ರೇಮ ಸೌಧ ಮಂಕಾಗಿದೆ. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ (ಎಸ್ಎಸ್ಐ) ತಾಜ್ಮಹಲ್ಗೆ ಮುಲ್ತಾನಿನ ಮಣ್ಣು ಬಳಿಯಲು ಯೋಜಿಸಲಾಗಿತ್ತು.
ಈ ಹಿಂದೆ ತಾಜ್ ಮಹಲ್ ಸುತ್ತ ಮುತ್ತಲಿನ ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ವಾತಾವರಣ ಶುದ್ಧಿಗೊಳಿಸಲು ಪವಿತ್ರ ಸಸ್ಯ ಎನಿಸಿರುವ ತುಳಸಿಯನ್ನು ಬಳಸಲಾಗಿತ್ತು.
ಯಮುನಾ ನದಿಯ ಮಾಲಿನ್ಯದಿಂದ ಕೂಡಾ ತಾಜ್ ಮಹಲ್ ಹಾಗೂ ಸುತ್ತ ಮುತ್ತಲ ಪರಿಸರ ತೀವ್ರ ಹಾನಿಗೊಳಗಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ) ದೂರಿದೆ.

ಬಿಳಿ ಗೋಡೆಗಳ ಮೇಲಿನ ಹಸಿರು ಪಾಚಿ
"ತಾಜ್ ಮಹಲ್ ಬಿಳಿ ಗೋಡೆಗಳ ಮೇಲಿನ ಹಸಿರು ಪಾಚಿ ನಿಜಕ್ಕೂ ಮಾಲಿನ್ಯದಿಂದ ಮಾತ್ರವಲ್ಲ, ಕೀಟಗಳ ಮಲಮೂತ್ರದಿಂದ ಉಂಟಾದ ಕಲೆಯಾಗಿದೆ. ಇದು ತೀವ್ರವಾಗಿ ಕಟ್ಟಡವನ್ನು ಬಾಧಿಸಬಹುದು" ಎಂದು ಪರಿಸರವಾದಿಗಳು ಹೇಳಿದ್ದಾರೆ.
ಯುನೆಸ್ಕೋ ಪಾರಂಪರಿಕ ಕಟ್ಟಡ ವ್ಯಾಪ್ತಿಗೆ ಸೇರುವ ತಾಜ್ ಮಹಲ್ -ಪ್ರೇಮ ಸೌಧವಾಗಿ ಗುರುತಿಸಿಕೊಂಡಿದೆ. ಮೊಘಲರ ದೊರೆ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಸ್ಮರಣೆಯಲ್ಲಿ ನಿರ್ಮಿಸಿದ ಭವ್ಯ ಸೌಧ ಇದಾಗಿದೆ.

ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನ ಮಣ್ಣು
ಪಾಕಿಸ್ತಾನದಲ್ಲಿರುವ ಮುಲ್ತಾನ್ ಊರಿನಲ್ಲಿ ಸಿಗುವ ಮಣ್ಣಿನಲ್ಲಿ ಸುಣ್ಣದಂಶವಿದ್ದು ಇದು ಮುಖದ ಸೌಂದರ್ಯ ಕಾಪಾಡುತ್ತದೆ. ಭಾರತ ಸೇರಿದಂತೆ ಅನೇಕ ಕಡೆ ಮುಲ್ತಾನಿ ಮಿಟ್ಟಿ ಮಹಿಳೆಯ ಫೇಸ್ ಪ್ಯಾಕ್ ಪದಾರ್ಥವಾಗಿ ಬಳಕೆಯಾಗುತ್ತಿದೆ. ಈಗ ತಾಜಮಹಲ್ ನ ಗೋಡೆಗಳಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಮುಲ್ತಾನಿ ಮಿಟ್ಟಿ ಹಚ್ಚಲು ನಿರ್ಧರಿಸಲಾಗಿದೆ. ಬಳಿಕ ಡಿಸ್ಟಿಲ್ಡ್ ವಾಟರ್ನಿಂದ ಪ್ರೇಮಸೌಧದ ಗೋಡೆಯನ್ನು ತೊಳೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಮುಲ್ತಾನಿ ಮಿಟ್ಟಿ ಹಚ್ಚಲು ಸಿದ್ಧತೆ ಆರಂಭಗೊಂಡಿವೆ ಎಂಬ ಸುದ್ದಿಯಿದೆ.

ಮಲ್ತಾನಿ ಮಿಟ್ಟಿ ಚಿಕಿತ್ಸೆ ಈ ಹಿಂದೆಯೂ ನಡೆದಿತ್ತು
1994, 2001 ಮತ್ತು 2008ರಲ್ಲೂ ತಾಜ್ಮಹಲ್ಗೆ ಇದೇ ಮಾದರಿಯ ಮಲ್ತಾನಿ ಮಿಟ್ಟಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದು ಶಾಶ್ವತ ಪರಿಹಾರವಾಗುವ ಸಾಧ್ಯತೆ ಕಡಿಮೆ. ಸುಪ್ರೀಂಕೋರ್ಟ್ ಈ ಹಿಂದೆ ಸುಮಾರು 200 ಕ್ಕೂ ಅಧಿಕ ಕೈಗರಿಕಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ನೀಡಿತ್ತು. ಅದರೆ, ಆಗ್ರಾದಲ್ಲಿ ಯುಮುನಾ ನದಿಯನ್ನು ಚರಂಡಿ ನೀರಿನಂತೆ ಕಲುಷಿತ ಮಾಡುವಲ್ಲಿ ಕೈಗಾರಿಕೆಗಳು ಯಶ ಕಂಡಿವೆ. ಮಾಲಿನ್ಯ ನಿಯಂತ್ರಣವಾಗದ ಹೊರತು ತಾಜ್ ಮಹಲ್ ಜತೆಗೆ ಸುತ್ತಲಿನ ಪರಿಸರವೂ ಕಷ್ಟದ ಪರಿಸ್ಥಿತಿಯಲ್ಲಿ ಹೆಣಗಬೇಕಾಗುತ್ತದೆ.

ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್
ತಾಜ್ ಮಹಲ್ ಗೆ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಖರ್ಚು ಸುಮಾರು 10.4 ಲಕ್ಷ ರು ಎಂದು ಹೇಳಲಾಗಿದೆ. 12ಕ್ಕೂ ಅಧಿಕ ಆರ್ಕ್ಟಿಟೆಕ್ಟ್ ಗಳು, ಸುಮಾರು ಆರು ತಿಂಗಳುಗಳ ಕಾಲ ಈ ಚಿಕಿತ್ಸೆ ನೀಡಲಿದ್ದಾರೆ. ಪ್ರವಾಸಿಗರಿಗೆ ಇದರಿಂದ ಏನು ತೊಂದರೆಯಾಗುವುದಿಲ್ಲ ಎಂದು ಎಎಸ್ಐ ತಂಡ ಹೇಳಿದೆ. ಉತ್ತರಪ್ರದೇಶದ ತಾಜ್ ಮಹಲ್ ಸಂರಕ್ಷಣಾ ಸಮಿತಿ ಕೂಡಾ ತಂಡದ ಜತೆ ಕಾರ್ಯನಿರ್ವಹಿಸುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications