ಅಂಬಿಗೆ ಚೆಲುವರಾಯಸ್ವಾಮಿ ನೀಡಿದ್ದರು ಟಾಂಗ್
2009ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಚೆಲುವರಾಯಸ್ವಾಮಿ, 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಪೈಕಿ, ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಅತಿ ಹೆಚ್ಚು ಮತಗಳು ಸಿಕ್ಕಿತ್ತು ಅನ್ನೋದನ್ನ ನೋಡೋಣ.
ಯಾವ ಕ್ಷೇತ್ರದಲ್ಲಿ ಯಾರಿಗೆ ಲೀಡ್?
ಮಳವಳ್ಳಿ - ಕಾಂಗ್ರೆಸ್
ಮದ್ದೂರು - ಕಾಂಗ್ರೆಸ್
ಮೇಲುಕೋಟೆ - ಜೆಡಿಎಸ್
ಮಂಡ್ಯ - ಕಾಂಗ್ರೆಸ್
ಶ್ರೀರಂಗಪಟ್ಟಣ - ಕಾಂಗ್ರೆಸ್
ನಾಗಮಂಗಲ - ಜೆಡಿಎಸ್
ಕೆ.ಆರ್.ಪೇಟೆ - ಜೆಡಿಎಸ್
ಕೆ.ಆರ್.ನಗರ - ಕಾಂಗ್ರೆಸ್

ಒಟ್ಟು 8 ಕ್ಷೇತ್ರಗಳ ಪೈಕಿ, ಜೆಡಿಎಸ್ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುಂದಿತ್ತು. ಆದರೂ ಕೂಡ, ಚೆಲುವರಾಯಸ್ವಾಮಿ 23,500 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು ಈ ಬಾರಿ, ಜೆಡಿಎಸ್ನಿಂದ ಸಿ.ಎಸ್.ಪುಟ್ಟರಾಜು ಕಣಕ್ಕಿಳಿದಿದ್ದರೆ, ಕಾಂಗ್ರೆಸ್ನಿಂದ ನಟಿ ರಮ್ಯಾ ಅಖಾಡದಲ್ಲಿದ್ದಾರೆ. ರಮ್ಯಾ ಗೆಲುವು ಅಂಬಿ ಹಾಗೂ ಕೃಷ್ಣ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಪುಟ್ಟರಾಜು ಬೆನ್ನಿಗೆ ದೇವೇಗೌಡ ಕುಟುಂಬವೇ ನಿಂತಿದೆ. ಮತದಾರ ಪ್ರಭು ಯಾರಿಗೆ ಮಣೆ ಹಾಕ್ತಾನೋ ಕಾದುನೋಡಬೇಕಿದೆ.












Click it and Unblock the Notifications