ಪಾರ್ಕಿಂಗ್ ಸಮಸ್ಯೆಗೆ ಇದು ಪರಿಹಾರ ಆಗಬಹುದೇ?
ಬೆಂಗಳೂರು, ಆಗಸ್ಟ್ 13: ರಾಜಧಾನಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ನಿಜಕ್ಕೂ ಅಗಾಧವಾಗಿದೆ. ರಸ್ತೆ ಬದಿ ವಾಹನ ಪಾರ್ಕ್ ಮಾಡಲು ಚೂರು ಜಾಗ ಸಿಕ್ಕಿದರೆ ಜನ ಧನ್ಯತಾಭಾವ ಅನುಭವಿಸುತ್ತಾರೆ. ಪಾರ್ಕಿಂಗ್ ಜಾಗಕ್ಕೆ ಅಷ್ಟೊಂದು ಅಭಾವವಿದೆ.
ಅಸಲಿಗೆ ಇದ್ದಕ್ಕಿದ್ದಂತೆ ರಸ್ತೆಗಳೇ ಮಾಯವಾಗಿ ಬಿಡುತ್ತದೆ. ರಸ್ತೆಯಲ್ಲಿ ನಾಲ್ಕು ವಾಹನಗಳು ಹೆಚ್ಚಾಗಿ ಕಾಣಿಸಿಕೊಂಡುಬಿಟ್ಟರೆ ಸಂಚಾರವೂ ಸ್ತಬ್ಧ. ಸಂಚಾರ ಮಾಡುವ ವಾಹನಗಳಿಗಿಂತ, ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಅಂದರೆ ಅಡ್ಡಿಯಿಲ್ಲ. ಇದಕ್ಕೆಲ್ಲ ಪರಿಹಾರ ಇಲ್ಲವೇ?
ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಅಂಡರ್ ಪಾಸುಗಳನ್ನು ಎಷ್ಟು ಅಂತ ನಿರ್ಮಿಸುವುದು. ಅಷ್ಟಕ್ಕೂ ಇದಷ್ಟೇ ಸಂಚಾರ ದಟ್ಟಣೆ/ಪಾರ್ಕಿಂಗ್ ಸಮಸ್ಯೆ ನೀಗಿಸಬಲ್ಲದೇ? ಇದರಾಚೆಗೆ ಏನಾದರೂ ಯೋಜನೆ/ಯೋಚನೆಗಳಿವೆಯಾ? ಖಂಡಿತವಾಗಿಯೂ ಇದೆ.
ಆಯ್ತು, ರಸ್ತೆಗಳಲ್ಲೇ ವಾಹನ ನಿಲ್ಲಿಸುವುದು ಬೇಡ. ಅದರ ಬದಲಿಗೆ ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಹೇಗೆ? ಅರ್ಥ ಆಗಲಿಲ್ಲವಾ? ಹೌದು ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಸಂಚಾರ ದಟ್ಟಣೆಯೂ ತಪ್ಪುತ್ತದೆ. ವಾಹನ ನಿಲ್ಲಿಸೋಕ್ಕೆ ವಿಶಾಲ ಜಾಗವೂ ಲಭಿಸುತ್ತದೆ ಎನ್ನಲು ಒಂದೆರಡು ಯೋಜನೆಗಳು ಇಲ್ಲಿವೆ.

Elevated parking space
ಒಂದು - Elevated parking space on existing roads. ಎರಡು- Creating parking place in residential areas.

ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು
ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು. ಭಾರಿ ಗಾತ್ರದ ರಚನೆಗಳನ್ನು ಬಳಸಿ, ವಿಶಾಲ parking place ನಿರ್ಮಿಸಬಹುದು. ಈ ರಚನೆಗಳು ತುಸು ಹೆಚ್ಚಾಯ್ತು/ ಅಥವಾ ಅದರ ಅಗತ್ಯ ಇಲ್ಲ ಅನಿಸಿದಾಗ ಈ ರಚನೆಗಳನ್ನು ತೆಗೆದುಹಾಕಬಹುದು.

Elevated parking space- ವೆಚ್ಚ ಎಷ್ಟು ?
ಸರಿ ಇದಕ್ಕೆ ತಗಲುವ ವೆಚ್ಚ ಎಷ್ಟು ಅಂದಿರಾ? ಹೆಚ್ಚೇನೂ ಇಲ್ಲ- ಅಬ್ಬಬ್ಬಾ ಅಂದರೆ 15 ಕೋಟಿ ರೂಪಾಯಿ ಅಷ್ಟೇ. ಇಷ್ಟೇ ವೆಚ್ಚದಲ್ಲಿ ನಿರ್ಮಿಸಲಾದ Elevated parking spaceನಲ್ಲಿ parking fee ರೂಪದಲ್ಲಿ ವಾರ್ಷಿಕ 2 ಕೋಟಿ ರೂ. ಗಳಿಸಬಹುದು. ಇದನ್ನು ಬಹುಮಹಡಿಗಳನ್ನಾಗಿಯೂ ರಚಿಸಬಹುದು.

ಸಂಬಂಧಪಟ್ಟವರು ಗಮನ ಹರಿಸುವರೇ?
ಇದನ್ನು ಜನವಸತಿ ಪ್ರದೇಶಗಳಲ್ಲೂ ಮಾಡಬಹುದು. ಈ ಯೋಜನೆಗಳೆರಡೂ comfortable-feasible ಅನ್ನಿಸುತ್ತದೆ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು ಸೂಕ್ತವಲ್ಲವೇ?
-
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್












Click it and Unblock the Notifications