ಪಾರ್ಕಿಂಗ್ ಸಮಸ್ಯೆಗೆ ಇದು ಪರಿಹಾರ ಆಗಬಹುದೇ?
ಬೆಂಗಳೂರು, ಆಗಸ್ಟ್ 13: ರಾಜಧಾನಿಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ನಿಜಕ್ಕೂ ಅಗಾಧವಾಗಿದೆ. ರಸ್ತೆ ಬದಿ ವಾಹನ ಪಾರ್ಕ್ ಮಾಡಲು ಚೂರು ಜಾಗ ಸಿಕ್ಕಿದರೆ ಜನ ಧನ್ಯತಾಭಾವ ಅನುಭವಿಸುತ್ತಾರೆ. ಪಾರ್ಕಿಂಗ್ ಜಾಗಕ್ಕೆ ಅಷ್ಟೊಂದು ಅಭಾವವಿದೆ.
ಅಸಲಿಗೆ ಇದ್ದಕ್ಕಿದ್ದಂತೆ ರಸ್ತೆಗಳೇ ಮಾಯವಾಗಿ ಬಿಡುತ್ತದೆ. ರಸ್ತೆಯಲ್ಲಿ ನಾಲ್ಕು ವಾಹನಗಳು ಹೆಚ್ಚಾಗಿ ಕಾಣಿಸಿಕೊಂಡುಬಿಟ್ಟರೆ ಸಂಚಾರವೂ ಸ್ತಬ್ಧ. ಸಂಚಾರ ಮಾಡುವ ವಾಹನಗಳಿಗಿಂತ, ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಅಂದರೆ ಅಡ್ಡಿಯಿಲ್ಲ. ಇದಕ್ಕೆಲ್ಲ ಪರಿಹಾರ ಇಲ್ಲವೇ?
ರಸ್ತೆ ಅಗಲೀಕರಣ, ಮೇಲ್ಸೇತುವೆ ನಿರ್ಮಾಣ, ಅಂಡರ್ ಪಾಸುಗಳನ್ನು ಎಷ್ಟು ಅಂತ ನಿರ್ಮಿಸುವುದು. ಅಷ್ಟಕ್ಕೂ ಇದಷ್ಟೇ ಸಂಚಾರ ದಟ್ಟಣೆ/ಪಾರ್ಕಿಂಗ್ ಸಮಸ್ಯೆ ನೀಗಿಸಬಲ್ಲದೇ? ಇದರಾಚೆಗೆ ಏನಾದರೂ ಯೋಜನೆ/ಯೋಚನೆಗಳಿವೆಯಾ? ಖಂಡಿತವಾಗಿಯೂ ಇದೆ.
ಆಯ್ತು, ರಸ್ತೆಗಳಲ್ಲೇ ವಾಹನ ನಿಲ್ಲಿಸುವುದು ಬೇಡ. ಅದರ ಬದಲಿಗೆ ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಹೇಗೆ? ಅರ್ಥ ಆಗಲಿಲ್ಲವಾ? ಹೌದು ರಸ್ತೆಯ ಮೇಲೆ ವಾಹನ ನಿಲ್ಲಿಸಿದರೆ ಸಂಚಾರ ದಟ್ಟಣೆಯೂ ತಪ್ಪುತ್ತದೆ. ವಾಹನ ನಿಲ್ಲಿಸೋಕ್ಕೆ ವಿಶಾಲ ಜಾಗವೂ ಲಭಿಸುತ್ತದೆ ಎನ್ನಲು ಒಂದೆರಡು ಯೋಜನೆಗಳು ಇಲ್ಲಿವೆ.

Elevated parking space
ಒಂದು - Elevated parking space on existing roads. ಎರಡು- Creating parking place in residential areas.

ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು
ಇದನ್ನು ಅಗತ್ಯಕ್ಕೆ ಅನುಗುಣವಾಗಿ ಬದಲಿಸಬಹುದು. ಭಾರಿ ಗಾತ್ರದ ರಚನೆಗಳನ್ನು ಬಳಸಿ, ವಿಶಾಲ parking place ನಿರ್ಮಿಸಬಹುದು. ಈ ರಚನೆಗಳು ತುಸು ಹೆಚ್ಚಾಯ್ತು/ ಅಥವಾ ಅದರ ಅಗತ್ಯ ಇಲ್ಲ ಅನಿಸಿದಾಗ ಈ ರಚನೆಗಳನ್ನು ತೆಗೆದುಹಾಕಬಹುದು.

Elevated parking space- ವೆಚ್ಚ ಎಷ್ಟು ?
ಸರಿ ಇದಕ್ಕೆ ತಗಲುವ ವೆಚ್ಚ ಎಷ್ಟು ಅಂದಿರಾ? ಹೆಚ್ಚೇನೂ ಇಲ್ಲ- ಅಬ್ಬಬ್ಬಾ ಅಂದರೆ 15 ಕೋಟಿ ರೂಪಾಯಿ ಅಷ್ಟೇ. ಇಷ್ಟೇ ವೆಚ್ಚದಲ್ಲಿ ನಿರ್ಮಿಸಲಾದ Elevated parking spaceನಲ್ಲಿ parking fee ರೂಪದಲ್ಲಿ ವಾರ್ಷಿಕ 2 ಕೋಟಿ ರೂ. ಗಳಿಸಬಹುದು. ಇದನ್ನು ಬಹುಮಹಡಿಗಳನ್ನಾಗಿಯೂ ರಚಿಸಬಹುದು.

ಸಂಬಂಧಪಟ್ಟವರು ಗಮನ ಹರಿಸುವರೇ?
ಇದನ್ನು ಜನವಸತಿ ಪ್ರದೇಶಗಳಲ್ಲೂ ಮಾಡಬಹುದು. ಈ ಯೋಜನೆಗಳೆರಡೂ comfortable-feasible ಅನ್ನಿಸುತ್ತದೆ. ಹಾಗಾಗಿ ಇದರ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುವುದು ಸೂಕ್ತವಲ್ಲವೇ?
-
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
Gold Rate April 9: ಚಿನ್ನ - ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬಂಗಾರ ಖರೀದಿದಾರರಿಗೆ ಸಂತೋಷದ ಸುದ್ದಿ -
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್












Click it and Unblock the Notifications